ಕಲಬುರಗಿ: ಅಫಜಲಪುರ ತಾಲ್ಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮವಾಗಿ ತೆಗೆಯಲಾದ ₹ 7.50 ಲಕ್ಷ ಮೌಲ್ಯದ ಮರಳು ಸಂಗ್ರಹ ಅಡ್ಡೆಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಮರಳು ಸಂಗ್ರಹಿಸಿ ಇರಿಸಿದ ಆರೋಪದಡಿ ಏಳು ಮಂದಿ ಜಮೀನು ಮಾಲೀಕರ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ.
ದೇಸಾಯಿ ಕಲ್ಲೂರ ಗ್ರಾಮದ ಜಮೀನಿನಲ್ಲಿ ₹ 2.70 ಲಕ್ಷ ಮೌಲ್ಯದ 135 ಟ್ರ್ಯಾಕ್ಟರ್ನಷ್ಟು ಮರಳು ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಗುಡ್ಡೇವಾಡಿ ಗ್ರಾಮದ ಮೂರು ಜಮೀನುಗಳಲ್ಲಿ ₹ 4 ಲಕ್ಷ ಮೌಲ್ಯದ 200 ಟ್ರ್ಯಾಕ್ಟರ್ ಹಾಗೂ ಘತ್ತರಗಾ ಗ್ರಾಮದ ಜಮೀನೊಂದರಲ್ಲಿ ₹ 80 ಸಾವಿರ ಮೌಲ್ಯದ 40 ಟ್ರ್ಯಾಕ್ಟರ್ಗಳಷ್ಟು ಮರಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಮಹಿಬೂಬ್ ಅಲಿ, ಹೆಡ್ ಕಾನ್ಸ್ಟೆಬಲ್ಗಳಾದ ರಾಜಶೇಖರ ರಾಠೋಡ, ಮಹೇಶ ಕಾನ್ಸ್ಟೆಬಲ್ಗಳಾದ ಇಮಾಮ್, ಮಹೇಶ ಪಾಟೀಲ, ವಿಶ್ವನಾಥ ಅವರು ದಾಳಿ ಮಾಡಿದ್ದರು.