<p><strong>ಸೈದಾಪುರ: </strong>ತಾಯಿಕಾಲೊನಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದರ ಪರಿಣಾಮ ಚರಂಡಿ ನೀರು ಎಲ್ಲೆಂದರಲ್ಲಿ ನಿಂತು ಕೆಸರು ಕಟ್ಟಿಕೊಂಡಿದೆ. ಇದರಿಂದ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.</p>.<p>ಇದು ಸೈದಾಪುರ ಪಟ್ಟಣದ ತಾಯಿ ಕಾಲೊನಿಯಲ್ಲಿರುವ ಸಮಸ್ಯೆ.ಚರಂಡಿಗಳಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್ ಸೇರಿದಂತೆ ಬಡಾವಣೆಯ ಮನೆಗಳ ಅಕ್ಕ–ಪಕ್ಕ ಚರಂಡಿ ನೀರು ನಿಲ್ಲುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಇಲ್ಲಿ ಹಲವೆಡೆ ಡಾಂಬರೀಕರಣವಾಗದ ರಸ್ತೆಗಳು, ಕಸದ ಸಮಸ್ಯೆ, ಸೇರಿದಂತೆ ಹಲವು ಸಮಸ್ಯೆಗಳ ಆಗರವಾಗಿದೆ. ಇಲ್ಲಿ ತಿರುಗಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬರಬೇಕಾದ ಸ್ಥಿತಿ ಉಂಟಾಗಿದೆ.</p>.<p>ಕಾಲೊನಿಯ ಮನೆಗಳ ಸುತ್ತಲೂ ಚರಂಡಿ ನೀರು ಆವರಿಸಿ ಅವವ್ಯಸ್ಥೆಯ ಆಗರವಾಗಿ ಪರಿಣಮಿಸಿದೆ. ಪಾಚು ಗಟ್ಟಿದ ನೀರಿನ ಮಧ್ಯದಲ್ಲಿ ಬದುಕಬೇಕಾಗಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಬಹುದು ಎಂಬುದು ಇಲ್ಲಿಯ ಜನರ ಆತಂಕ.</p>.<p><strong>ವಾರದಲ್ಲೊಮ್ಮೆ ನೀರು: </strong>ಕಾಲೊನಿಯಲ್ಲಿ ಅತಿಯಾದ ನೀರಿನ ಸಮಸ್ಯೆ ಇದೆ. ಬಡಾವಣೆಯಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಸಹ ಇಲ್ಲದಂತಾಗಿದೆ. ತಿಂಗಳಲ್ಲಿ ಹಲವಾರು ಬಾರಿ ಅದು ಕೆಟ್ಟಿರುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು.</p>.<p><strong>ಎಲ್ಲೆಂದರಲ್ಲಿ ಕಸ:</strong> ಕಾಲೊನಿಯ ಪ್ರಮುಖ ಬೀದಿಗಳಲ್ಲಿ ಕಸ ಕಾಣುತ್ತಿರುತ್ತದೆ. ಇದರಿಂದ ಗಾಳಿ ಬಿಸಿದಾಗ ರಸ್ತೆ ಮಧ್ಯೆ ಕಸ ಹರಡುತ್ತದೆ. ಇದರಿಂದ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿನ ವಾಹನ ಸವಾರರು.</p>.<p>ಈ ಬಡಾವಣೆಗೆ ಹೊಂದಿಕೊಂಡಂತೆ ಶಾಲೆಗಳು, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗಳಿವೆ. ಇವುಗಳಿಗೆ ತೆರಳುವ ಜನರ ಪಾಡು ಎನೂ?. ಸ್ವಚ್ಚ ಅಭಿಯಾನದ ಬಗೆಗೆ ಪ್ರಚಾರ ಮಾಡುವ ಸರ್ಕಾರಕ್ಕೆ ಈ ಸಮಸ್ಯೆ ಕಾಣದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿ ಪರಿಣಮಿಸಿದೆ.</p>.<p>ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೈದಾಪುರ: </strong>ತಾಯಿಕಾಲೊನಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದರ ಪರಿಣಾಮ ಚರಂಡಿ ನೀರು ಎಲ್ಲೆಂದರಲ್ಲಿ ನಿಂತು ಕೆಸರು ಕಟ್ಟಿಕೊಂಡಿದೆ. ಇದರಿಂದ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.</p>.<p>ಇದು ಸೈದಾಪುರ ಪಟ್ಟಣದ ತಾಯಿ ಕಾಲೊನಿಯಲ್ಲಿರುವ ಸಮಸ್ಯೆ.ಚರಂಡಿಗಳಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್ ಸೇರಿದಂತೆ ಬಡಾವಣೆಯ ಮನೆಗಳ ಅಕ್ಕ–ಪಕ್ಕ ಚರಂಡಿ ನೀರು ನಿಲ್ಲುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಇಲ್ಲಿ ಹಲವೆಡೆ ಡಾಂಬರೀಕರಣವಾಗದ ರಸ್ತೆಗಳು, ಕಸದ ಸಮಸ್ಯೆ, ಸೇರಿದಂತೆ ಹಲವು ಸಮಸ್ಯೆಗಳ ಆಗರವಾಗಿದೆ. ಇಲ್ಲಿ ತಿರುಗಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬರಬೇಕಾದ ಸ್ಥಿತಿ ಉಂಟಾಗಿದೆ.</p>.<p>ಕಾಲೊನಿಯ ಮನೆಗಳ ಸುತ್ತಲೂ ಚರಂಡಿ ನೀರು ಆವರಿಸಿ ಅವವ್ಯಸ್ಥೆಯ ಆಗರವಾಗಿ ಪರಿಣಮಿಸಿದೆ. ಪಾಚು ಗಟ್ಟಿದ ನೀರಿನ ಮಧ್ಯದಲ್ಲಿ ಬದುಕಬೇಕಾಗಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಬಹುದು ಎಂಬುದು ಇಲ್ಲಿಯ ಜನರ ಆತಂಕ.</p>.<p><strong>ವಾರದಲ್ಲೊಮ್ಮೆ ನೀರು: </strong>ಕಾಲೊನಿಯಲ್ಲಿ ಅತಿಯಾದ ನೀರಿನ ಸಮಸ್ಯೆ ಇದೆ. ಬಡಾವಣೆಯಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಸಹ ಇಲ್ಲದಂತಾಗಿದೆ. ತಿಂಗಳಲ್ಲಿ ಹಲವಾರು ಬಾರಿ ಅದು ಕೆಟ್ಟಿರುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು.</p>.<p><strong>ಎಲ್ಲೆಂದರಲ್ಲಿ ಕಸ:</strong> ಕಾಲೊನಿಯ ಪ್ರಮುಖ ಬೀದಿಗಳಲ್ಲಿ ಕಸ ಕಾಣುತ್ತಿರುತ್ತದೆ. ಇದರಿಂದ ಗಾಳಿ ಬಿಸಿದಾಗ ರಸ್ತೆ ಮಧ್ಯೆ ಕಸ ಹರಡುತ್ತದೆ. ಇದರಿಂದ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿನ ವಾಹನ ಸವಾರರು.</p>.<p>ಈ ಬಡಾವಣೆಗೆ ಹೊಂದಿಕೊಂಡಂತೆ ಶಾಲೆಗಳು, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗಳಿವೆ. ಇವುಗಳಿಗೆ ತೆರಳುವ ಜನರ ಪಾಡು ಎನೂ?. ಸ್ವಚ್ಚ ಅಭಿಯಾನದ ಬಗೆಗೆ ಪ್ರಚಾರ ಮಾಡುವ ಸರ್ಕಾರಕ್ಕೆ ಈ ಸಮಸ್ಯೆ ಕಾಣದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿ ಪರಿಣಮಿಸಿದೆ.</p>.<p>ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>