<p>ಕಲಬುರಗಿ: ‘ಇಷ್ಠಲಿಂಗ ಪೂಜೆ ಶ್ರೇಷ್ಠವಾದ ಮಹಾ ವ್ರತ’ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.</p>.<p>ನಗರದ ಸೊಗಸನಕೇರಿಯ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ‘ಸಿದ್ಧಾಂತ ಶಿಖಾಮಣಿ’ ಪ್ರವಚನದ ಸಮನ್ವಯಾತ್ಮಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ದೇಶದ ಧಾರ್ಮಿಕ ಪರಂಪರೆಯಲ್ಲಿ ಅನೇಕ ವ್ರತಗಳಿವೆ. ಅವುಗಳು ನೈಮಿತ್ತಿಕ ವ್ರತಗಳಾಗಿವೆ. ಆದರೆ, ಇಷ್ಠಲಿಂಗ ಪೂಜೆ ಮಾತ್ರ ನಿತ್ಯ ವ್ರತವಾಗಿದೆ. ನಮ್ಮ ದೇಹದಲ್ಲಿರುವ ಎಲ್ಲ ಅವಯವಗಳಲ್ಲಿ ಶಿರಸ್ಸು ಹೇಗೆ ಶ್ರೇಷ್ಠವೊ ಅದರಂತೆ ಎಲ್ಲಾ ವ್ರತಗಳಲ್ಲಿ ಇದು ಶ್ರೇಷ್ಠ’ ಎಂದರು.</p>.<p>‘ಸರ್ವರಿಗೂ ಸಮಾನ ಹಕ್ಕನ್ನು ಕೊಟ್ಟ ಈ ಲಿಂಗಪೂಜಾ ಮಹಾವ್ರತ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಸಹ ಕೊಡುವಂತದ್ದಾಗಿದೆ ಎಂಬ ವಿಚಾರವನ್ನು ಆಗಮಗಳಲ್ಲಿ ಶಿವನೇ ಪಾರ್ವತಿಗೆ ಬೋಧಿಸಿದ್ದಾನೆ. ಹೀಗೆ ಪಂಚಾಚಾರ್ಯರು ಜಗತ್ತಿನ ಸಮಸ್ತ ಮಾನವರ ಕಲ್ಯಾಣಕ್ಕಾಗಿ ಇಷ್ಠಲಿಂಗ ಪೂಜಾ ವ್ರತ ಬೋಧಿಸಿದ್ದರಿಂದ ಇದರ ಪ್ರಯೋಜನವನ್ನು ಸರ್ವರೂ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಗುರುಸಿದ್ದ ಮಣಿಕಂಠ ಶಿವಾಚಾರ್ಯರು, ಧೈವಾಡಕರ್ ಬಾರ್ಷಿ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಕಡಗಂಚಿ ಹಾಗೂ ಸುಲೇಪೇಟದ ಶ್ರೀಗಳು, ಚಂದನಕೇರಾ ಸ್ವಾಮೀಜಿ, ಸಿದ್ದಾನಂದ ಶಿವಯೋಗಿಗಳು ಇದ್ದರು.</p>.<p>ನಾಗರಾಜ ಗೋಗಿ, ನಂದಮ್ಮ, ದುಂಡಪ್ಪ ಬಿರಾದಾರ, ಅಣ್ಣಾರಾವ ಬೆಣ್ಣೂರ, ವೀರಣ್ಣ ಹೊನ್ನಶೆಟ್ಟಿ, ಮಹಾದೇವಪ್ಪ ಆಲಗೂಡಕರ, ಪದ್ಮಾಜಿ ಗುಂಡೇರಾವ ಭಾಗವಹಿಸಿದ್ದರು. ಸಿದ್ರಾಮಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿವಯ್ಯ ಮಠಪತಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಇಷ್ಠಲಿಂಗ ಪೂಜೆ ಶ್ರೇಷ್ಠವಾದ ಮಹಾ ವ್ರತ’ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.</p>.<p>ನಗರದ ಸೊಗಸನಕೇರಿಯ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ‘ಸಿದ್ಧಾಂತ ಶಿಖಾಮಣಿ’ ಪ್ರವಚನದ ಸಮನ್ವಯಾತ್ಮಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ದೇಶದ ಧಾರ್ಮಿಕ ಪರಂಪರೆಯಲ್ಲಿ ಅನೇಕ ವ್ರತಗಳಿವೆ. ಅವುಗಳು ನೈಮಿತ್ತಿಕ ವ್ರತಗಳಾಗಿವೆ. ಆದರೆ, ಇಷ್ಠಲಿಂಗ ಪೂಜೆ ಮಾತ್ರ ನಿತ್ಯ ವ್ರತವಾಗಿದೆ. ನಮ್ಮ ದೇಹದಲ್ಲಿರುವ ಎಲ್ಲ ಅವಯವಗಳಲ್ಲಿ ಶಿರಸ್ಸು ಹೇಗೆ ಶ್ರೇಷ್ಠವೊ ಅದರಂತೆ ಎಲ್ಲಾ ವ್ರತಗಳಲ್ಲಿ ಇದು ಶ್ರೇಷ್ಠ’ ಎಂದರು.</p>.<p>‘ಸರ್ವರಿಗೂ ಸಮಾನ ಹಕ್ಕನ್ನು ಕೊಟ್ಟ ಈ ಲಿಂಗಪೂಜಾ ಮಹಾವ್ರತ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಸಹ ಕೊಡುವಂತದ್ದಾಗಿದೆ ಎಂಬ ವಿಚಾರವನ್ನು ಆಗಮಗಳಲ್ಲಿ ಶಿವನೇ ಪಾರ್ವತಿಗೆ ಬೋಧಿಸಿದ್ದಾನೆ. ಹೀಗೆ ಪಂಚಾಚಾರ್ಯರು ಜಗತ್ತಿನ ಸಮಸ್ತ ಮಾನವರ ಕಲ್ಯಾಣಕ್ಕಾಗಿ ಇಷ್ಠಲಿಂಗ ಪೂಜಾ ವ್ರತ ಬೋಧಿಸಿದ್ದರಿಂದ ಇದರ ಪ್ರಯೋಜನವನ್ನು ಸರ್ವರೂ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಗುರುಸಿದ್ದ ಮಣಿಕಂಠ ಶಿವಾಚಾರ್ಯರು, ಧೈವಾಡಕರ್ ಬಾರ್ಷಿ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಕಡಗಂಚಿ ಹಾಗೂ ಸುಲೇಪೇಟದ ಶ್ರೀಗಳು, ಚಂದನಕೇರಾ ಸ್ವಾಮೀಜಿ, ಸಿದ್ದಾನಂದ ಶಿವಯೋಗಿಗಳು ಇದ್ದರು.</p>.<p>ನಾಗರಾಜ ಗೋಗಿ, ನಂದಮ್ಮ, ದುಂಡಪ್ಪ ಬಿರಾದಾರ, ಅಣ್ಣಾರಾವ ಬೆಣ್ಣೂರ, ವೀರಣ್ಣ ಹೊನ್ನಶೆಟ್ಟಿ, ಮಹಾದೇವಪ್ಪ ಆಲಗೂಡಕರ, ಪದ್ಮಾಜಿ ಗುಂಡೇರಾವ ಭಾಗವಹಿಸಿದ್ದರು. ಸಿದ್ರಾಮಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿವಯ್ಯ ಮಠಪತಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>