ಅತಿವೃಷ್ಟಿಯಿಂದ ದೇಗಲಮಡಿ ಕ್ರಾಸ್, ದೇಗಲಮಡಿ, ನಿಮಾ ಹೊಸಳ್ಳಿ ಚಿಂಚೋಳಿ ಮಾರ್ಗದ ರಸ್ತೆ, ಐನೋಳ್ಳಿ ಕ್ರಾಸ್ ಚಂದ್ರಂಪಳ್ಳಿ, ಕೊಳ್ಳೂರು ರಸ್ತೆ ಹಾಗೂ ಸಾಲೇಬೀರನಹಳ್ಳಿ ಮರಪಳ್ಳಿ, ಗಾರಂಪಳ್ಳಿ ರಸ್ತೆ ಹಾಳಾಗಿದ್ದು ಪ್ರವಾಹ ಹಾನಿ ನಿಧಿಯಿಂದ ರಸ್ತೆ ಸುಧಾರಣೆ ಕೈಗೊಳ್ಳಬೇಕು. ಕೆಳದಂಡೆ ಮುಲ್ಲಾಮಾರಿ ಯೋಜನೆಯ ವೇಸ್ಟೆವೇಯರ್ ಎದುರಿನ ಬೆಡ್ ಕಿತ್ತು ಹೋಗಲು ಕಳಪೆ ಕಾಮಗಾರಿ ಕಾರಣವಾಗಿದೆ. ಇದನ್ನು ನಿರ್ಮಿಸಿದ ಗುತ್ತಿಗೆದಾರನಿಂದಲೇ ಮರು ನಿರ್ಮಿಸಬೇಕು, ಚಂದನಕೇರಾದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ರೈತನ ಕುಟುಂಬಕ್ಕೆ ಪರಿಹಾರ ವಿತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಪತ್ರದಲ್ಲಿ ಆಗ್ರಹಪಡಿಸಲಾಗಿದೆ.