ಇದಕ್ಕೂ ಮುನ್ನ, ಊರಿನ ಮಹಿಳೆಯರು ಗುಂಪು ಗುಂಪಾಗಿ ಕಾಮಗಾರಿ ಸ್ಥಳಕ್ಕೆ ಬಂದು ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್ ಆರ್. ಪಾಟೀಲ, ಕಿರಿಯ ಎಂಜಿನಿಯರ್ ಸುನೀಲಕುಮಾರ, ಹಣಮಂತ, ಗ್ರಾಮಸ್ಥರಾದ ಸಂತೋಷ ಯಾದಗಿರ, ಮಲ್ಲರಡ್ಡಿ ಕೊಂಗಂಡಿ, ಅಯ್ಯಪ್ಪ ಕೋಟ್ಯಾಳ, ಗಿರಿಮಲ್ಲಪ್ಪಗೌಡ ಇದ್ದರು.