<p><strong>ಯಡ್ರಾಮಿ:</strong> ತಾಲೂಕಿನ ಮಳ್ಳಿ ಗ್ರಾಮದ ಹಳ್ಳದ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿದ ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಶನಿವಾರ ದಿಢೀರನೆ ಭೇಟಿ ನೀಡಿದರು.</p>.<p>ಮಳ್ಳಿ ಗ್ರಾಮದ ಹಳ್ಳದಿಂದ ಕಡಕೋಳ ಹಳ್ಳದವರೆಗೆ ಹೂಳು ಎತ್ತಿ ನಾಲೆ ಮಾಡುವ 6.5 ಕಿ.ಮೀ ಉದ್ದದ ಕಾಮಗಾರಿ ಎರಡು ವಾರಗಳ ಹಿಂದೆ ಪ್ರಾರಂಭವಾಗಿತ್ತು. ಆದರೆ ಕಾಮಗಾರಿ ಅವೈಜ್ಞಾನನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ನಿಲ್ಲಿಸಿದ್ದರು.</p>.<p>ಹೀಗಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡಿಕೊಡುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಭರವಸೆ ನೀಡಿದ ಮೇಲೆ ಶನಿವಾರ ಸಂಜೆ ಕಾಮಗಾರಿ ಪುನರಾರಂಭಗೊಂಡಿತು.</p>.<p>ಇದಕ್ಕೂ ಮುನ್ನ, ಊರಿನ ಮಹಿಳೆಯರು ಗುಂಪು ಗುಂಪಾಗಿ ಕಾಮಗಾರಿ ಸ್ಥಳಕ್ಕೆ ಬಂದು ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್ ಆರ್. ಪಾಟೀಲ, ಕಿರಿಯ ಎಂಜಿನಿಯರ್ ಸುನೀಲಕುಮಾರ, ಹಣಮಂತ, ಗ್ರಾಮಸ್ಥರಾದ ಸಂತೋಷ ಯಾದಗಿರ, ಮಲ್ಲರಡ್ಡಿ ಕೊಂಗಂಡಿ, ಅಯ್ಯಪ್ಪ ಕೋಟ್ಯಾಳ, ಗಿರಿಮಲ್ಲಪ್ಪಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಡ್ರಾಮಿ:</strong> ತಾಲೂಕಿನ ಮಳ್ಳಿ ಗ್ರಾಮದ ಹಳ್ಳದ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿದ ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಶನಿವಾರ ದಿಢೀರನೆ ಭೇಟಿ ನೀಡಿದರು.</p>.<p>ಮಳ್ಳಿ ಗ್ರಾಮದ ಹಳ್ಳದಿಂದ ಕಡಕೋಳ ಹಳ್ಳದವರೆಗೆ ಹೂಳು ಎತ್ತಿ ನಾಲೆ ಮಾಡುವ 6.5 ಕಿ.ಮೀ ಉದ್ದದ ಕಾಮಗಾರಿ ಎರಡು ವಾರಗಳ ಹಿಂದೆ ಪ್ರಾರಂಭವಾಗಿತ್ತು. ಆದರೆ ಕಾಮಗಾರಿ ಅವೈಜ್ಞಾನನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ನಿಲ್ಲಿಸಿದ್ದರು.</p>.<p>ಹೀಗಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡಿಕೊಡುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಭರವಸೆ ನೀಡಿದ ಮೇಲೆ ಶನಿವಾರ ಸಂಜೆ ಕಾಮಗಾರಿ ಪುನರಾರಂಭಗೊಂಡಿತು.</p>.<p>ಇದಕ್ಕೂ ಮುನ್ನ, ಊರಿನ ಮಹಿಳೆಯರು ಗುಂಪು ಗುಂಪಾಗಿ ಕಾಮಗಾರಿ ಸ್ಥಳಕ್ಕೆ ಬಂದು ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್ ಆರ್. ಪಾಟೀಲ, ಕಿರಿಯ ಎಂಜಿನಿಯರ್ ಸುನೀಲಕುಮಾರ, ಹಣಮಂತ, ಗ್ರಾಮಸ್ಥರಾದ ಸಂತೋಷ ಯಾದಗಿರ, ಮಲ್ಲರಡ್ಡಿ ಕೊಂಗಂಡಿ, ಅಯ್ಯಪ್ಪ ಕೋಟ್ಯಾಳ, ಗಿರಿಮಲ್ಲಪ್ಪಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>