<p><strong>ಕಲಬುರಗಿ:</strong> ಅತಿವೃಷ್ಟಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯನ್ನು ಹಸಿಬರಗಾಲ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ಕಲಬುರಗಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.</p><p> ವಿವಿಧ ಸಂಘಟನೆಗಳ ಮುಖಂಡರು ಬೆಳಿಗ್ಗೆಯಿಂದಲೇ ನಗರದ ಕೇಂದ್ರ ಬಸ್ ನಿಲ್ದಾಣ, ರಾಮಮಂದಿರ ವೃತ್ತ, ಆಳಂದ ಚೆಕ್ ಪೋಸ್ಟ್, ಖರ್ಗೆ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಕಾರರು ಸರ್ಕಾರ ವಿರೋಧಿ ಘೋಷಣೆ ಕೂಗಿದರು. ಕ್ರಾಂತಿ ಗೀತೆಗಳನ್ನು ಹಾಡಿದರು.</p>.ಕಮಲಾಪುರ: ಕಿರಾಣಿ ಅಂಗಡಿ, ಎರಡು ಚಿನ್ನಾಭರಣ ಮಳಿಗೆಯಲ್ಲಿ ಕಳವು. <p>'ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ಎಕರೆ ₹25 ಸಾವಿರ ಪರಿಹಾರ ಘೋಷಿಸಬೇಕು. ಕಳೆದ 13 ದಿನಗಳಿಂದ ಕಲಬುರಗಿ ಜಗತ್ ವೃತ್ತದಲ್ಲಿ ಧರಣಿ ನಡೆಸಿದರೂ ಸೌಜನ್ಯಕ್ಕೂ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಬಂದು ರೈತರ ಸಂಕಷ್ಟ ಆಲಿಸಿಲ್ಲ. ಇದು ರೈತ ವಿರೋಧಿ ಸರ್ಕಾರ' ಎಂದು ಪ್ರತಿಭಟನೆ ನಿರತರು ಆಕ್ರೋಶ ವ್ಯಕ್ತಪಡಿಸಿದರು.</p><p>ನಗರದಲ್ಲಿ ಸಾರಿಗೆ ಬಸ್ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಹಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿವೆ. ಬಂದ್ ಹಿನ್ನೆಲೆ ಹಲವು ಶಿಕ್ಷಣ ಸಂಸ್ಥೆಗಳು ಶಾಲೆಗಳಿಗೆ ರಜೆ ಘೋಷಿಸಿವೆ.</p>.ಕಲಬುರಗಿ| ಅಂಬಿಗರ ಚೌಡಯ್ಯ ಮೂರ್ತಿ ಭಗ್ನ: ಆರೋಪಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ.<p>ಕೇಂದ್ರ ಬಸ್ ನಿಲ್ದಾಣ ಬಸ್ಗಳು ಹಾಗೂ ಪ್ರಯಾಣಿಕರು ಇಲ್ಲದೇ ಬಿಕೊ ಎಂದಿತು. ದೂರದ ಊರುಗಳಿಗೆ ತೆರಳಲು ಬಂದಿದ್ದ ಹಲವು ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದರು.</p><p>'ಸುರಪುರಕ್ಕೆ ಹೋಗಬೇಕು ಎಂದು ಕುಟುಂಬ ಸಮೇತ ಬಂದಿದ್ದೇವೆ. ಆದರೆ ಬಸಗಳೇ ಇಲ್ಲ.ರಾಮ ಮಂದಿರ ವೃತ್ತದಿಂದಲೂ ಖಾಸಗಿವಾಹನ ಸಿಗುವುದು ಅನುಮಾನ. ಹೀಗಾಗಿ ಸುಮ್ನೆ ಮನಗೆ ಮರಳಿ ಹೋಗುವುದೇ ವಾಸಿ' ಎನ್ನುತ್ತ ರಾಜ ಅಹ್ಮದ್ ಅವರ ಕುಟುಂಬದ ಮನೆಯತ್ತ ಮುಖ ಮಾಡಿದರು.</p>.ಕಲಬುರಗಿ | ಬಿ.ಆರ್.ಗವಾಯಿ ಅವರತ್ತ ‘ಶೂ’ ಎಸೆತದ ವಿರುದ್ಧ ವಕೀಲರ ಆಕ್ರೋಶ.<p>'ಸುರಪುರಕ್ಕೆ ಹೋಗಬೇಕಿತ್ತು. ಬಸ್ ಬಂದ್ ಇರುವ ವಿಷಯ ಗೊತ್ತಿರಲಿಲ್ಲ. ಇನ್ನೊಂದೆಡೆ ಗಂಟೆ ಕಾದು ನೋಡಿ ಬಸ್ ಸಿಗದಿದ್ದರೆ ಮರಳಿ ಮನೆಗೆ ಹೋಗುತ್ತೇನೆ' ಎಂದು ವೃದ್ಧೆ ಯಂಕಮ್ಮ ಹೇಳಿದರು.</p><p>'ನಮ್ಮದು ಚಿಂಚೋಳಿ. ಕಲಬುರಗಿಯಲ್ಲಿ ಅಕ್ಕ ಮನೆಗೆ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿದ್ದೆ. ಕಲಬುರಗಿ ಬಂದ್ಹಾಗೂ ಬಸ್ ಬಂದ ಇರುವ ವಿಷಯ ತಿಳಿದಿರಲಿಲ್ಲ. ಬಸ್ಸೆ ಇಲ್ಲದಿದ್ದರೆ ಊರಿಗೆ ಹೋಗುವುದು ಹೇಗೆ. ಇನ್ನೊಂದು ದಿನ ಅಕ್ಕ ಮನೆಯಲ್ಲೇ ಉಳಿಯಬೇಕಾಗುತ್ತೇನೋ' ಎಂದು</p><p>ಚಿಕ್ಕ ಮಗಳೊಂದಿಗೆ ಬಸ್ನಿಲ್ದಾಣಕ್ಕೆ ಬಂದಿದ್ದ ಸರೋಜಾ ಹೇಳಿದರು</p>.ಕಲಬುರಗಿ | ನಿಗಮ ಸ್ಥಾಪಿಸಲು ಹಡಪದ ಸಮಾಜ ಆಗ್ರಹ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಅತಿವೃಷ್ಟಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯನ್ನು ಹಸಿಬರಗಾಲ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ಕಲಬುರಗಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.</p><p> ವಿವಿಧ ಸಂಘಟನೆಗಳ ಮುಖಂಡರು ಬೆಳಿಗ್ಗೆಯಿಂದಲೇ ನಗರದ ಕೇಂದ್ರ ಬಸ್ ನಿಲ್ದಾಣ, ರಾಮಮಂದಿರ ವೃತ್ತ, ಆಳಂದ ಚೆಕ್ ಪೋಸ್ಟ್, ಖರ್ಗೆ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಕಾರರು ಸರ್ಕಾರ ವಿರೋಧಿ ಘೋಷಣೆ ಕೂಗಿದರು. ಕ್ರಾಂತಿ ಗೀತೆಗಳನ್ನು ಹಾಡಿದರು.</p>.ಕಮಲಾಪುರ: ಕಿರಾಣಿ ಅಂಗಡಿ, ಎರಡು ಚಿನ್ನಾಭರಣ ಮಳಿಗೆಯಲ್ಲಿ ಕಳವು. <p>'ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ಎಕರೆ ₹25 ಸಾವಿರ ಪರಿಹಾರ ಘೋಷಿಸಬೇಕು. ಕಳೆದ 13 ದಿನಗಳಿಂದ ಕಲಬುರಗಿ ಜಗತ್ ವೃತ್ತದಲ್ಲಿ ಧರಣಿ ನಡೆಸಿದರೂ ಸೌಜನ್ಯಕ್ಕೂ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಬಂದು ರೈತರ ಸಂಕಷ್ಟ ಆಲಿಸಿಲ್ಲ. ಇದು ರೈತ ವಿರೋಧಿ ಸರ್ಕಾರ' ಎಂದು ಪ್ರತಿಭಟನೆ ನಿರತರು ಆಕ್ರೋಶ ವ್ಯಕ್ತಪಡಿಸಿದರು.</p><p>ನಗರದಲ್ಲಿ ಸಾರಿಗೆ ಬಸ್ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಹಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿವೆ. ಬಂದ್ ಹಿನ್ನೆಲೆ ಹಲವು ಶಿಕ್ಷಣ ಸಂಸ್ಥೆಗಳು ಶಾಲೆಗಳಿಗೆ ರಜೆ ಘೋಷಿಸಿವೆ.</p>.ಕಲಬುರಗಿ| ಅಂಬಿಗರ ಚೌಡಯ್ಯ ಮೂರ್ತಿ ಭಗ್ನ: ಆರೋಪಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ.<p>ಕೇಂದ್ರ ಬಸ್ ನಿಲ್ದಾಣ ಬಸ್ಗಳು ಹಾಗೂ ಪ್ರಯಾಣಿಕರು ಇಲ್ಲದೇ ಬಿಕೊ ಎಂದಿತು. ದೂರದ ಊರುಗಳಿಗೆ ತೆರಳಲು ಬಂದಿದ್ದ ಹಲವು ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದರು.</p><p>'ಸುರಪುರಕ್ಕೆ ಹೋಗಬೇಕು ಎಂದು ಕುಟುಂಬ ಸಮೇತ ಬಂದಿದ್ದೇವೆ. ಆದರೆ ಬಸಗಳೇ ಇಲ್ಲ.ರಾಮ ಮಂದಿರ ವೃತ್ತದಿಂದಲೂ ಖಾಸಗಿವಾಹನ ಸಿಗುವುದು ಅನುಮಾನ. ಹೀಗಾಗಿ ಸುಮ್ನೆ ಮನಗೆ ಮರಳಿ ಹೋಗುವುದೇ ವಾಸಿ' ಎನ್ನುತ್ತ ರಾಜ ಅಹ್ಮದ್ ಅವರ ಕುಟುಂಬದ ಮನೆಯತ್ತ ಮುಖ ಮಾಡಿದರು.</p>.ಕಲಬುರಗಿ | ಬಿ.ಆರ್.ಗವಾಯಿ ಅವರತ್ತ ‘ಶೂ’ ಎಸೆತದ ವಿರುದ್ಧ ವಕೀಲರ ಆಕ್ರೋಶ.<p>'ಸುರಪುರಕ್ಕೆ ಹೋಗಬೇಕಿತ್ತು. ಬಸ್ ಬಂದ್ ಇರುವ ವಿಷಯ ಗೊತ್ತಿರಲಿಲ್ಲ. ಇನ್ನೊಂದೆಡೆ ಗಂಟೆ ಕಾದು ನೋಡಿ ಬಸ್ ಸಿಗದಿದ್ದರೆ ಮರಳಿ ಮನೆಗೆ ಹೋಗುತ್ತೇನೆ' ಎಂದು ವೃದ್ಧೆ ಯಂಕಮ್ಮ ಹೇಳಿದರು.</p><p>'ನಮ್ಮದು ಚಿಂಚೋಳಿ. ಕಲಬುರಗಿಯಲ್ಲಿ ಅಕ್ಕ ಮನೆಗೆ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿದ್ದೆ. ಕಲಬುರಗಿ ಬಂದ್ಹಾಗೂ ಬಸ್ ಬಂದ ಇರುವ ವಿಷಯ ತಿಳಿದಿರಲಿಲ್ಲ. ಬಸ್ಸೆ ಇಲ್ಲದಿದ್ದರೆ ಊರಿಗೆ ಹೋಗುವುದು ಹೇಗೆ. ಇನ್ನೊಂದು ದಿನ ಅಕ್ಕ ಮನೆಯಲ್ಲೇ ಉಳಿಯಬೇಕಾಗುತ್ತೇನೋ' ಎಂದು</p><p>ಚಿಕ್ಕ ಮಗಳೊಂದಿಗೆ ಬಸ್ನಿಲ್ದಾಣಕ್ಕೆ ಬಂದಿದ್ದ ಸರೋಜಾ ಹೇಳಿದರು</p>.ಕಲಬುರಗಿ | ನಿಗಮ ಸ್ಥಾಪಿಸಲು ಹಡಪದ ಸಮಾಜ ಆಗ್ರಹ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>