ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತುರ್ತು ಚಿಕಿತ್ಸೆ ಜನರ ಕೈಗೆಟುಕುವಂತಿರಲಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

Published : 6 ಸೆಪ್ಟೆಂಬರ್ 2025, 6:32 IST
Last Updated : 6 ಸೆಪ್ಟೆಂಬರ್ 2025, 6:32 IST
ಫಾಲೋ ಮಾಡಿ
Comments
ಬಸವೇಶ್ವರ ಆಸ್ಪತ್ರೆಗೆ ರೋಗಿಗಳು ಬಂದರೆ ಬದುಕುವುದೇ ಅನುಮಾನ ಎನ್ನುವ ಸ್ಥಿತಿಯಿತ್ತು. ಈಗ ಗುಣಮುಖರಾಗುವ ವಿಶ್ವಾಸ ಮೂಡಿದೆ. ಅದರ ಶ್ರೇಯ ಶಶೀಲ್‌ ನಮೋಶಿಗೆ ಸಲ್ಲುತ್ತದೆ
ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ
ದಿ.ರಾಂಪುರೆ ಎಂಆರ್‌ಎಂಸಿ ಸ್ಥಾಪಿಸದಿದ್ದರೆ ಶರಣಪ್ರಕಾಶ ಡಾಕ್ಟರ್‌ ಆಗುತ್ತಿರಲಿಲ್ಲ ಪಿಡಿಎ ಕಾಲೇಜು ಸ್ಥಾಪಿಸದಿದ್ದರೆ ನಾನು ನಮೋಶಿ ಎಂಜಿನಿಯರ್‌ಗಳು ಆಗುತ್ತಿರಲಿಲ್ಲ
ಸುನೀಲ ವಲ್ಯಾಪುರೆ ವಿಧಾನ ಪರಿಷತ್ ಸದಸ್ಯ
‘ಅಭಿವೃದ್ಧಿಗೆ 4 ಸಂಸ್ಥೆಗ ಕಾರಣ’
‘ಕಲಬುರಗಿಯ ಬೆಳವಣಿಗೆಯಲ್ಲಿ ಶರಣಬಸವೇಶ್ವರ ಸಂಸ್ಥಾನ ಎಚ್‌ಇಕೆ ಸಂಸ್ಥೆ ನೂತನ ವಿದ್ಯಾಲಯದ ಸಂಸ್ಥೆ ಹಾಗೂ ಕೆಬಿಎನ್‌ ಸಂಸ್ಥೆಯ ಬಹಳ ಹಿರಿದಾಗಿದೆ. ಈ ನಾಲ್ಕೂ ಸಂಸ್ಥೆಗಳ ಸೇವೆಯ ಫಲವಾಗಿ ಕಲಬುರಗಿಯನ್ನು ಶೈಕ್ಷಣಿಕ ಹಬ್‌ ಆಗಿ ಮಾಡಲು ಸಾಧ್ಯವಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ‘ಈ ಸಂಸ್ಥೆಗಳ ಸ್ಥಾಪನೆಗೂ ಮುನ್ನ ಈ ಭಾಗದಲ್ಲಿ ಶಾಲಾ–ಕಾಲೇಜುಗಳ ಕೊರತೆಯಿತ್ತು. ಶಿಕ್ಷಣದ ಮಟ್ಟವೂ ಕಡಿಮೆಯಿತ್ತು. ಆದರೆ ಕ್ರಮೇಣ ಸುಧಾರಣೆ ಕಂಡಿದ್ದು ಸದ್ಯ ನಾಲ್ಕು ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿವೆ. 317(1) ಕಾನೂನು ಕಲ್ಯಾಣ ಕರ್ನಾಟಕದ ಇತಿಹಾಸವನ್ನೇ ಬದಲಿಸಿತು. ಇದರ ಹಿಂದೆ ದಶಕಗಳ ಹೋರಾಟವಿದ್ದರೂ ಅದರ ಶ್ರೇಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT