<p><strong>ಕಲಬುರಗಿ:</strong> ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೆಲ ದುಷ್ಕರ್ಮಿಗಳು ಹೊರಗಿನಿಂದ ಸ್ಮಾರ್ಟ್ಫೋನ್ಗಳು, ಸಿಗರೇಟ್ ಪ್ಯಾಕೆಟ್ಗಳು, ಬೀಡಿ ಕಟ್ಟುಗಳು, ಬೆಂಕಿ ಪೊಟ್ಟಣಗಳು ಹಾಗೂ ಎರಡು ದೊಣ್ಣೆಗಳನ್ನು ಜೈಲಿನೊಳಗೆ ಎಸೆಯಲು ಯತ್ನಿಸಿದ್ದಾರೆ. </p>.<p>ಒಂದು ಪ್ರಕರಣದಲ್ಲಿ ಜ.12ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವೆ ವ್ಯಕ್ತಿಯೊಬ್ಬ ಒಂದು ಉಂಡೆ ಆಕಾರ ಚೆಂಡಿನಂಥ ವಸ್ತುವನ್ನು ಎಸೆಯಲು ಯತ್ನಿಸಿದ್ದ. ಇದನ್ನು ಕೆಎಸ್ಐಎಸ್ಎಫ್ ಪಡೆಯ ಸಿಬ್ಬಂದಿ ತಡೆದಿದ್ದಾರೆ. ಜೊತೆಗೆ ಆ ವಸ್ತುಗಳನ್ನು ಎಸೆಯಲು ಯತ್ನಿಸಿದ ವ್ಯಕ್ತಿ ಹಾಗೂ ಆತನ ನೆರವಿಗೆ ಬಂದಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>‘ಚಂಡಿನಂಥ ಉಂಡೆಯಲ್ಲಿ ಎರಡು ಸ್ಮಾರ್ಟ್ಫೋನ್ಗಳು, 3 ಪ್ಯಾಕೆಟ್ ಸಿಗರೇಟ್, 10 ಕಟ್ಟು ಬೀಡಿ ಹಾಗೂ ಬೆಂಕಿಪೊಟ್ಟಣಗಳು ದೊರೆತಿವೆ’ ಎಂದು ಕೆಎಸ್ಐಎಸ್ಎಫ್ ಇನ್ಸ್ಪೆಕ್ಟರ್ ಶರಣಬಸವ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಇನ್ನೊಂದು ಪ್ರಕರಣದಲ್ಲಿ ಜ.12ರಂದು ರಾತ್ರಿ 10.50ರ ಹೊತ್ತಿಗೆ ಜೈಲಿನ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವೆ ಮೂವರು ವ್ಯಕ್ತಿಗಳು ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.</p>.<p><strong>ಟಿ.ಪಿ.ಶೇಷ ಭೇಟಿ:</strong> ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಕಾರಾಗೃಹಗಳ ಇಲಾಖೆಯ ಡಿಐಜಿ ಟಿ.ಪಿ.ಶೇಷ ಅವರು ಭೇಟಿ ನೀಡಿ ಪರಿಶೀಲಿಸಿದರು ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೆಲ ದುಷ್ಕರ್ಮಿಗಳು ಹೊರಗಿನಿಂದ ಸ್ಮಾರ್ಟ್ಫೋನ್ಗಳು, ಸಿಗರೇಟ್ ಪ್ಯಾಕೆಟ್ಗಳು, ಬೀಡಿ ಕಟ್ಟುಗಳು, ಬೆಂಕಿ ಪೊಟ್ಟಣಗಳು ಹಾಗೂ ಎರಡು ದೊಣ್ಣೆಗಳನ್ನು ಜೈಲಿನೊಳಗೆ ಎಸೆಯಲು ಯತ್ನಿಸಿದ್ದಾರೆ. </p>.<p>ಒಂದು ಪ್ರಕರಣದಲ್ಲಿ ಜ.12ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವೆ ವ್ಯಕ್ತಿಯೊಬ್ಬ ಒಂದು ಉಂಡೆ ಆಕಾರ ಚೆಂಡಿನಂಥ ವಸ್ತುವನ್ನು ಎಸೆಯಲು ಯತ್ನಿಸಿದ್ದ. ಇದನ್ನು ಕೆಎಸ್ಐಎಸ್ಎಫ್ ಪಡೆಯ ಸಿಬ್ಬಂದಿ ತಡೆದಿದ್ದಾರೆ. ಜೊತೆಗೆ ಆ ವಸ್ತುಗಳನ್ನು ಎಸೆಯಲು ಯತ್ನಿಸಿದ ವ್ಯಕ್ತಿ ಹಾಗೂ ಆತನ ನೆರವಿಗೆ ಬಂದಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>‘ಚಂಡಿನಂಥ ಉಂಡೆಯಲ್ಲಿ ಎರಡು ಸ್ಮಾರ್ಟ್ಫೋನ್ಗಳು, 3 ಪ್ಯಾಕೆಟ್ ಸಿಗರೇಟ್, 10 ಕಟ್ಟು ಬೀಡಿ ಹಾಗೂ ಬೆಂಕಿಪೊಟ್ಟಣಗಳು ದೊರೆತಿವೆ’ ಎಂದು ಕೆಎಸ್ಐಎಸ್ಎಫ್ ಇನ್ಸ್ಪೆಕ್ಟರ್ ಶರಣಬಸವ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಇನ್ನೊಂದು ಪ್ರಕರಣದಲ್ಲಿ ಜ.12ರಂದು ರಾತ್ರಿ 10.50ರ ಹೊತ್ತಿಗೆ ಜೈಲಿನ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವೆ ಮೂವರು ವ್ಯಕ್ತಿಗಳು ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.</p>.<p><strong>ಟಿ.ಪಿ.ಶೇಷ ಭೇಟಿ:</strong> ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಕಾರಾಗೃಹಗಳ ಇಲಾಖೆಯ ಡಿಐಜಿ ಟಿ.ಪಿ.ಶೇಷ ಅವರು ಭೇಟಿ ನೀಡಿ ಪರಿಶೀಲಿಸಿದರು ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>