<p><strong>ಕಲಬುರಗಿ</strong>: ನಗರದ ವ್ಯಾಪಾರಿಯೊಬ್ಬರಿಗೆ ₹3.78 ಕೋಟಿಗೆ 1 ಎಕರೆ 30 ಗುಂಟೆ ಜಮೀನು ಮಾರಾಟ ಮಾಡುವುದಾಗಿ ವ್ಯಕ್ತಿಗಳಿಬ್ಬರು ಸೇರಿ ಒಪ್ಪಂದ ಮಾಡಿಕೊಂಡು ಜಮೀನು ನೀಡದೇ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. </p>.<p>ನಗರದ ಜಗತ್ ಪ್ರದೇಶದ ನಿವಾಸಿ ಮೊಹ್ಮದ್ ಮಾಜ್ ಅಹ್ಮದ್ ವಂಚನೆಗೆ ಒಳಗಾದ ವ್ಯಾಪಾರಿ.</p>.<p>‘ಕಲಬುರಗಿಯ ಚನ್ನವೀರ ನಗರದ ನಿವಾಸಿ ವಿಜಯಕುಮಾರ ಗಣೇಶಕರ ಅವರು ಆಜಾದಪುರ ಸೀಮಾಂತರದ ಸರ್ವೆ ನಂ 27/11ರ 1 ಎಕರೆ 10 ಗುಂಟೆ, ಸರ್ವೆ ನಂ 27/12ರ 5 ಗುಂಟೆ, ಸರ್ವೆ ನಂ 37/10ರ 5 ಗುಂಟೆ, ಸರ್ವೆ ನಂ 37/8ರ 5 ಗುಂಟೆ ಹಾಗೂ ಸರ್ವೆ ನಂ 37/1ರ 5 ಗುಂಟೆ ಜಮೀನನ್ನು ಒಟ್ಟು ₹3.78 ಕೋಟಿ ಮೊತ್ತಕ್ಕೆ ನನಗೆ ಮಾರಾಟ ಮಾಡಲು 2023ರ ಮಾರ್ಚ್ 11ರಂದು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೆ ಮದನಲಾಲ್ ಗಣೇಶಕರ ಸಾಕ್ಷಿದಾರರಾಗಿದ್ದರು. ಒಪ್ಪಂದದ ಸಂದರ್ಭದಲ್ಲಿ ₹5.50 ಲಕ್ಷ ಕೊಟ್ಟಿದ್ದೆ. ಬಳಿಕ 2023ರ ಮೇ 10ರಂದು ₹1 ಕೋಟಿ, ಜೂನ್ 10ರಂದು ₹1 ಕೋಟಿ ಕೊಟ್ಟಿದ್ದೆ. ಉಳಿದ ಹಣ ₹1.47 ಕೋಟಿ ಜುಲೈ 19ರಂದು ನೀಡುವ ಒಪ್ಪಂದವಾಗಿತ್ತು. ಉಳಿಕೆ ಹಣ ನೀಡುವೆ, ಜಮೀನು ನನ್ನ ಹೆಸರಿಗೆ ಮಾಡಿಕೊಡುವಂತೆ ವಿಜಯಕುಮಾರ ಹಾಗೂ ಮದನಲಾಲ್ ಅವರಿಗೆ ಕೇಳಿದರೆ, ಅವರು ಇಲ್ಲದ ಕ್ಯಾತೆ ತೆಗೆದರು. ಇಬ್ಬರೂ ಸೇರಿ 2022ರಲ್ಲೇ ಈ ಜಮೀನು ಬೇರೆಯವರಿಗೆ ಸೇಲ್ ಡೀಡ್ ಮಾಡಿಕೊಟ್ಟಿರುವುದು ನಂತರ ತಿಳಿಯಿತು. ನನ್ನೊಂದಿಗೆ ಜಮೀನು ಮಾರಾಟ ಒಪ್ಪಂದ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ವ್ಯಾಪಾರಿ ಮೊಹ್ಮದ್ ಮಾಜ್ ಅಹ್ಮದ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.</p>.<p>ಅದರನ್ವಯ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p><strong>10 ಮೊಬೈಲ್ ಕಳವು:</strong> ನಗರದ ಡಬರಾಬಾದ್ ಕ್ರಾಸ್ ಸಮೀಪದ ಫ್ಲಿಪ್ಕಾರ್ಟ್ ಕಚೇರಿಯಿಂದ ₹1.16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 10 ಮೊಬೈಲ್ ಕಳುವಾಗಿವೆ.</p>.<p>‘10 ಮೊಬೈಲ್ ಫೋನ್ಗಳು ಫ್ಲಿಪ್ಕಾರ್ಟ್ ಕಚೇರಿಯಿಂದ ಪಾರ್ಸಲ್ ಮಾಡುವ ಗಾಡಿಯಿಂದ ಆಗಸ್ಟ್ 27ರಿಂದ ಆಗಸ್ಟ್ 31ರ ನಡುವೆ ಕಳುವಾಗಿವೆ’ ಎಂದು ಫ್ಲಿಪ್ಕಾರ್ಟ್ ಕಚೇರಿ ಟೀಂ ಲೀಡರ್ ಸುನೀಲ್ ನಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮಟ್ಕಾ ಜೂಜಾಟ: ನಗರದ ಮದೀನಾ ಕಾಲೊನಿಯ ಕಲ್ಯಾಣ ಕ್ರಾಸ್ ಸಮೀಪದ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ ವಿರುದ್ಧ ಕ್ರಮಕೈಗೊಂಡಿರುವ ಪೊಲೀಸರು, ಆರೋಪಿಯಿಂದ ₹4,300 ಜಪ್ತಿ ಮಾಡಿಕೊಂಡಿದ್ದಾರೆ. ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಗರದ ವ್ಯಾಪಾರಿಯೊಬ್ಬರಿಗೆ ₹3.78 ಕೋಟಿಗೆ 1 ಎಕರೆ 30 ಗುಂಟೆ ಜಮೀನು ಮಾರಾಟ ಮಾಡುವುದಾಗಿ ವ್ಯಕ್ತಿಗಳಿಬ್ಬರು ಸೇರಿ ಒಪ್ಪಂದ ಮಾಡಿಕೊಂಡು ಜಮೀನು ನೀಡದೇ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. </p>.<p>ನಗರದ ಜಗತ್ ಪ್ರದೇಶದ ನಿವಾಸಿ ಮೊಹ್ಮದ್ ಮಾಜ್ ಅಹ್ಮದ್ ವಂಚನೆಗೆ ಒಳಗಾದ ವ್ಯಾಪಾರಿ.</p>.<p>‘ಕಲಬುರಗಿಯ ಚನ್ನವೀರ ನಗರದ ನಿವಾಸಿ ವಿಜಯಕುಮಾರ ಗಣೇಶಕರ ಅವರು ಆಜಾದಪುರ ಸೀಮಾಂತರದ ಸರ್ವೆ ನಂ 27/11ರ 1 ಎಕರೆ 10 ಗುಂಟೆ, ಸರ್ವೆ ನಂ 27/12ರ 5 ಗುಂಟೆ, ಸರ್ವೆ ನಂ 37/10ರ 5 ಗುಂಟೆ, ಸರ್ವೆ ನಂ 37/8ರ 5 ಗುಂಟೆ ಹಾಗೂ ಸರ್ವೆ ನಂ 37/1ರ 5 ಗುಂಟೆ ಜಮೀನನ್ನು ಒಟ್ಟು ₹3.78 ಕೋಟಿ ಮೊತ್ತಕ್ಕೆ ನನಗೆ ಮಾರಾಟ ಮಾಡಲು 2023ರ ಮಾರ್ಚ್ 11ರಂದು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೆ ಮದನಲಾಲ್ ಗಣೇಶಕರ ಸಾಕ್ಷಿದಾರರಾಗಿದ್ದರು. ಒಪ್ಪಂದದ ಸಂದರ್ಭದಲ್ಲಿ ₹5.50 ಲಕ್ಷ ಕೊಟ್ಟಿದ್ದೆ. ಬಳಿಕ 2023ರ ಮೇ 10ರಂದು ₹1 ಕೋಟಿ, ಜೂನ್ 10ರಂದು ₹1 ಕೋಟಿ ಕೊಟ್ಟಿದ್ದೆ. ಉಳಿದ ಹಣ ₹1.47 ಕೋಟಿ ಜುಲೈ 19ರಂದು ನೀಡುವ ಒಪ್ಪಂದವಾಗಿತ್ತು. ಉಳಿಕೆ ಹಣ ನೀಡುವೆ, ಜಮೀನು ನನ್ನ ಹೆಸರಿಗೆ ಮಾಡಿಕೊಡುವಂತೆ ವಿಜಯಕುಮಾರ ಹಾಗೂ ಮದನಲಾಲ್ ಅವರಿಗೆ ಕೇಳಿದರೆ, ಅವರು ಇಲ್ಲದ ಕ್ಯಾತೆ ತೆಗೆದರು. ಇಬ್ಬರೂ ಸೇರಿ 2022ರಲ್ಲೇ ಈ ಜಮೀನು ಬೇರೆಯವರಿಗೆ ಸೇಲ್ ಡೀಡ್ ಮಾಡಿಕೊಟ್ಟಿರುವುದು ನಂತರ ತಿಳಿಯಿತು. ನನ್ನೊಂದಿಗೆ ಜಮೀನು ಮಾರಾಟ ಒಪ್ಪಂದ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ವ್ಯಾಪಾರಿ ಮೊಹ್ಮದ್ ಮಾಜ್ ಅಹ್ಮದ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.</p>.<p>ಅದರನ್ವಯ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p><strong>10 ಮೊಬೈಲ್ ಕಳವು:</strong> ನಗರದ ಡಬರಾಬಾದ್ ಕ್ರಾಸ್ ಸಮೀಪದ ಫ್ಲಿಪ್ಕಾರ್ಟ್ ಕಚೇರಿಯಿಂದ ₹1.16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 10 ಮೊಬೈಲ್ ಕಳುವಾಗಿವೆ.</p>.<p>‘10 ಮೊಬೈಲ್ ಫೋನ್ಗಳು ಫ್ಲಿಪ್ಕಾರ್ಟ್ ಕಚೇರಿಯಿಂದ ಪಾರ್ಸಲ್ ಮಾಡುವ ಗಾಡಿಯಿಂದ ಆಗಸ್ಟ್ 27ರಿಂದ ಆಗಸ್ಟ್ 31ರ ನಡುವೆ ಕಳುವಾಗಿವೆ’ ಎಂದು ಫ್ಲಿಪ್ಕಾರ್ಟ್ ಕಚೇರಿ ಟೀಂ ಲೀಡರ್ ಸುನೀಲ್ ನಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮಟ್ಕಾ ಜೂಜಾಟ: ನಗರದ ಮದೀನಾ ಕಾಲೊನಿಯ ಕಲ್ಯಾಣ ಕ್ರಾಸ್ ಸಮೀಪದ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ ವಿರುದ್ಧ ಕ್ರಮಕೈಗೊಂಡಿರುವ ಪೊಲೀಸರು, ಆರೋಪಿಯಿಂದ ₹4,300 ಜಪ್ತಿ ಮಾಡಿಕೊಂಡಿದ್ದಾರೆ. ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>