<p><strong>ಆಳಂದ(ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ಚಿಂಚೋಳಿ ಕೆ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಮನೆಯಲ್ಲಿ ಕಟ್ಟಿದ ಎರಡು ಆಕಳು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.</p><p>ಕೃಷಿ ಕೂಲಿಕಾರ್ಮಿಕ ಹನುಮಂತರಾಯ ಮಾದಪ್ಪ ಖೋಬ್ರೆ ಅವರು ಹೈನುಗಾರಿಕೆ ಉಪಜೀವನ ನಡೆಸುತ್ತಿದ್ದರು. ಸತತ ಮಳೆಯ ಕಾರಣದಿಂದ ಮನೆಯಲ್ಲಿನ ಕೊಟ್ಟಿಗೆಯಲ್ಲಿ ಎರಡು ಆಕಳು ಕಟ್ಟಿದರು. ದಿಢೀರನೆ ಮಳೆಗೆ ಗೋಡೆ ಮತ್ತು ಚಾವಣಿಯು ಕುಸಿದು ಕಟ್ಟಿದ ಆಕಳು ಮೇಲೆ ಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿವೆ. </p><p>ಹೈನುಗಾರಿಕೆ ನಂಬಿಕೊಂಡು ಬದುಕುವ ಕುಟುಂಬವು ಈಗ ಉಪಜೀವನದ ಆಧಾರವು ಕಳೆದುಕೊಂಡು ಬೀದಿಪಾಲು ಆದಂತೆ ಆಗಿದೆ. ಬಡರೈತನ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವ ಮೂಲಕ ನೆರವು ನೀಡಲು ಸಾಮಾಜಿಕ ಕಾರ್ಯಕರ್ತ ಮೃತ್ಯುಂಜಯ ಪಾಟೀಲ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ(ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ಚಿಂಚೋಳಿ ಕೆ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಮನೆಯಲ್ಲಿ ಕಟ್ಟಿದ ಎರಡು ಆಕಳು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.</p><p>ಕೃಷಿ ಕೂಲಿಕಾರ್ಮಿಕ ಹನುಮಂತರಾಯ ಮಾದಪ್ಪ ಖೋಬ್ರೆ ಅವರು ಹೈನುಗಾರಿಕೆ ಉಪಜೀವನ ನಡೆಸುತ್ತಿದ್ದರು. ಸತತ ಮಳೆಯ ಕಾರಣದಿಂದ ಮನೆಯಲ್ಲಿನ ಕೊಟ್ಟಿಗೆಯಲ್ಲಿ ಎರಡು ಆಕಳು ಕಟ್ಟಿದರು. ದಿಢೀರನೆ ಮಳೆಗೆ ಗೋಡೆ ಮತ್ತು ಚಾವಣಿಯು ಕುಸಿದು ಕಟ್ಟಿದ ಆಕಳು ಮೇಲೆ ಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿವೆ. </p><p>ಹೈನುಗಾರಿಕೆ ನಂಬಿಕೊಂಡು ಬದುಕುವ ಕುಟುಂಬವು ಈಗ ಉಪಜೀವನದ ಆಧಾರವು ಕಳೆದುಕೊಂಡು ಬೀದಿಪಾಲು ಆದಂತೆ ಆಗಿದೆ. ಬಡರೈತನ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವ ಮೂಲಕ ನೆರವು ನೀಡಲು ಸಾಮಾಜಿಕ ಕಾರ್ಯಕರ್ತ ಮೃತ್ಯುಂಜಯ ಪಾಟೀಲ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>