ವೀರೇಶ ಹೂಗಾರ, ಬಸವರಾಜ ಕೋಸಗಿ, ಬಸವರಾಜ ಹೊಸ್ಮನಿ, ಸಿದ್ದಪ್ಪ ತಳ್ಳಳ್ಳಿ, ಬಸವರಾಜ ಬಾಳಿ, ಬಸವರಾಜ ಬಂಡಾ, ಶಿವಕುಮಾರ ನಿಡಗುಂದಾ, ಸಂಗಮೇಶ ಅವಂಟಿ, ಶಿವಶರಣಪ್ಪ ಚಂದನಕೇರಿ, ರೇವಣಸಿದ್ದಪ್ಪ ನೀಲಿ, ಮಲ್ಲಿಕಾರ್ಜುನ ದಿಗ್ಗಾಂವ, ನಾಗರಾಜ ಬಾಳಿ ಹಾಜರಿದ್ದರು. ಸಿದ್ದಯ್ಯಸ್ವಾಮಿ ಆಡಕಿ ನಿರೂಪಿಸಿದರು. ಸುಧೀರ ಬಿರಾದಾರ ವಂದಿಸಿದರು.
ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿ ಪ್ರದಾನ: ಕಲಾವಿದರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಮಹಿಪಾಲರೆಡ್ಡಿ ಮುನ್ನೂರು, ಪ್ರಭಾಕರ ಜೋಶಿ, ಸುನೀಲ ನಿರ್ಣಿ, ಶರಣಪ್ಪ ಹೂಗಾರ ಮತ್ತು ವೀರಯ್ಯಸ್ವಾಮಿ ಮಠಪತಿ ಅವರಿಗೆ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಅವರು ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿಯನ್ನು ನೀಡಿದರು. ನಂತರ ಕಲಾವಿದರಿಂದ ಅನಿಸಿಕೆ ಮತ್ತು ನಾಟಕದ ಪಾತ್ರದ ತುಣುಕಿನ ಪ್ರದರ್ಶನ ನಡೆಯಿತು.