ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ–ತಿರುಪತಿ ವಿಮಾನ ಸೇವೆ ಸ್ಥಗಿತ

ದೆಹಲಿ, ಮುಂಬೈ, ಹೈದರಾಬಾದ್ ಬಳಿಕ ಧಾರ್ಮಿಕ ಕ್ಷೇತ್ರದ ಸಂಪರ್ಕ ಕಡಿತ
Published : 4 ಜುಲೈ 2024, 5:59 IST
Last Updated : 4 ಜುಲೈ 2024, 5:59 IST
ಫಾಲೋ ಮಾಡಿ
Comments
ನಿಲ್ದಾಣಕ್ಕಿಲ್ಲ ಬಸ್ ಸಂಪರ್ಕ!
ವಿಮಾನ ನಿಲ್ದಾಣದ ಸೇವೆ ಶುರುವಾಗಿ ಇಲ್ಲಿಯವರೆಗೂ ನಗರದಿಂದ ನೇರವಾಗಿ ಬಸ್‌ಗಳ ವ್ಯವಸ್ಥೆ ಇಲ್ಲ ಎಂದು ನಿಲ್ದಾಣದ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.  ‘ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸ್ವಚ್ಛತಾ ಸಿಬ್ಬಂದಿ ತಾಂತ್ರಿಕ ವರ್ಗ ಸೇರಿ 100ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಕೆಲವರು ಬೈಕ್‌ಗಳನ್ನೇ ಅವಲಂಬಿಸಿದ್ದಾರೆ. ಕಲಬುರಗಿ– ಸೇಡಂ ರಸ್ತೆಯಲ್ಲಿ ರಾತ್ರಿ ವೇಳೆ ಟ್ರಕ್‌ ಲಾರಿಗಳು ಸಂಚರಿಸುತ್ತವೆ. ರಾತ್ರಿ ವೇಳೆ ಕಣ್ಣು ಕೊರೆಯುವ ಲೈಟ್ ಗಾಳಿ ಮಳೆಯಲ್ಲಿ ಜೀವ ಭಯದಲ್ಲಿ ಓಡಾಡುವಂತಾಗಿದೆ. ರಾತ್ರಿ ವಿಮಾನಕ್ಕೆ ಬರುವವರು ಸ್ವಂತ ವಾಹನವನ್ನೇ ಅವಲಂಬಿಸುತ್ತಾಗಿದೆ’ ‌‌ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ನಿಲ್ದಾಣದ ಅಧಿಕಾರಿಗಳು ವಿಮಾನಗಳ ಹಾರಾಟದ ಸಮಯದ ಮಾಹಿತಿಯನ್ನು ಸಂಸ್ಥೆಗೆ ನೀಡಿದರೆ ಅದಕ್ಕೆ ಅನುಗುಣವಾಗಿ ಬಸ್‌ಗಳ ವ್ಯವಸ್ಥೆ ಮಾಡುತ್ತೇವೆ. ಎರಡು ತಿಂಗಳವರೆಗೆ ಈಗಿರುವ ಸಾಧಾರಣ ಬಸ್‌ಗಳನ್ನು ಓಡಿಸಿ ಆ ಬಳಿಕ ಹೈಫೈ ಬಸ್‌ಗಳ ವ್ಯವಸ್ಥೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT