<p><strong>ಕಲಬುರಗಿ:</strong> ‘ಭವಿಷ್ಯದಲ್ಲಿ ಕಲಬುರಗಿ ನಗರ ಹೇಗಿರಬೇಕು ಎಂಬ ಪರಿಕಲ್ಪನೆಯೊಂದಿಗೆ ₹ 297 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p>.<p>‘ಕಲಬುರಗಿ ನಗರದ ನಿವಾಸಿಗಳ ಜೀವನಮಟ್ಟ ಸುಧಾರಣೆಗೆ ಮತ್ತು ಹಸಿರು-ನೀಲಿ ಸುಸ್ಥಿರ ಅಭಿವೃದ್ಧಿಗೆ ಈಗಾಗಲೆ ಅರ್ಬನ್ ಪ್ಲ್ಯಾನರ್ಗಳ ಸೇವೆ ಪಡೆದು ನವ ಕಲಬುರಗಿ ನಿರ್ಮಾಣಕ್ಕೆ ಸರ್ಕಾರ ಪಣತೊಟ್ಟಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಗಂಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.</p>.<p>‘ಮೊದಲ ಬಾರಿಗೆ ನಮ್ಮ ಸರ್ಕಾರ ಕಲಬುರಗಿ ಮಹಾನಗರದಲ್ಲಿ ರಸ್ತೆಗಳ ಆಡಿಟ್ ಮಾಡಿಸಿದೆ. 783.82 ಕಿ.ಮೀ ಮೇಲ್ಪದರಿನ ರಸ್ತೆ, 219.96 ಕಿ.ಮೀ. ಮೇಲ್ಪದರು ಇಲ್ಲದ ರಸ್ತೆ ಸೇರಿದಂತೆ ಒಟ್ಟಾರೆ 1003.78 ಕಿ.ಮೀ. ರಸ್ತೆ ಜಾಲವಿದೆ. ಸಂಪೂರ್ಣ ರಸ್ತೆ ಸುಧಾರಣೆಗೆ ಸುಮಾರು ₹300 ಕೋಟಿಗಳಷ್ಟು ಅನುದಾನದ ಅಗತ್ಯವಿದೆ. ಅದರಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ 53 ರಸ್ತೆಗಳನ್ನು ₹ 127.50 ಕೋಟಿ ವೆಚ್ಚದಲ್ಲಿ ಹೊಸದಾಗಿ/ಮರು ನಿರ್ಮಿಸಲಾಗುವುದು’ ಎಂದರು.</p>.<p>‘ಎಸ್.ಎಫ್.ಸಿ ₹ 25 ಕೋಟಿ ವಿಶೇಷ ಅನುದಾನದಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 10 ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಎನ್ಕ್ಯಾಪ್ನ ₹ 1 2.44 ಕೋಟಿ ಅನುದಾನದಲ್ಲಿ ಎಸ್.ವಿ.ಪಿ ವೃತ್ತದಿಂದ ಜಗತ್ ವೃತ್ತ, ಜಗತ್ ವೃತ್ತದಿಂದ ಹುಮನಾಬಾದ್ ಬೇಸ್ ಹಾಗೂ ಅನ್ನಪೂರ್ಣ ಕ್ರಾಸ್ನಿಂದ ಸೇಡಂ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ₹ 164 ಕೋಟಿ ವೆಚ್ಚದಲ್ಲಿ ರಸ್ತೆಗಳ ಸುಧಾರಣೆ ನಡೆಯಲಿದೆ. ಇದಲ್ಲದೆ 31 ವಾರ್ಡ್ಗಳಲ್ಲಿ 60.51 ಕಿ.ಮೀ ರಸ್ತೆ ನಿರ್ಮಾಣ ಮತ್ತು ರಿಲೇಯಿಂಗ್ ಮಾಡಬೇಕಾಗಿದೆ. ಇದಕ್ಕಾಗಿ ₹ 157.62 ಕೋಟಿ ಡಿಪಿಆರ್ ಸಿದ್ದಪಡಿಸಲಾಗಿದೆ’ ಎಂದರು.</p>.<p><strong>ಉದ್ಯಾನಗಳ ಅಭಿವೃದ್ಧಿ:</strong></p>.<p>‘ಕಲಬುರಗಿ ಪಾಲಿಕೆಯಿಂದ 2024–25ನೇ ಸಾಲಿನ ಕೆಕೆಆರ್ಡಿಬಿ ಮ್ಯಾಕ್ರೊ ಯೋಜನೆಯಡಿ ಒಟ್ಟು 4 ನಾಲ್ಕು ಉದ್ಯಾನಗಳನ್ನು ₹ 7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 3 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದರೆ, ಅಕ್ಕಮಹಾದೇವಿ ಕಾಲೊನಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ 2.0 ಯೋಜನೆಯಡಿ ₹ 4 ಕೋಟಿ ವೆಚ್ಚದಲ್ಲಿ ಐದು ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪಾಲಿಕೆಯಿಂದ ₹ 3 ಕೋಟಿ ಪಬ್ಲಿಕ್ ಗಾರ್ಡನ್, ₹ 3 ಕೋಟಿ ಅನುದಾನದಲ್ಲಿ ರಾಜೀವ್ ಗಾಂಧಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p>.<p>‘ಇದಲ್ಲದೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಸುಮಾರು ₹2.10 ಕೋಟಿ ವೆಚ್ಚದಲ್ಲಿ ಏಳು ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 4.50 ಕೋಟಿ ವೆಚ್ಚದಲಿ 18 ಉದ್ಯಾನಗಳ ಅಭಿವೃದ್ಧಿ ನಡೆಯಲಿದೆ. ಒಟ್ಟಾರೆಯಾಗಿ ಪಾಲಿಕೆ ಮತ್ತು ಕುಡಾದಿಂದ ₹ 22.40 ಕೋಟಿ ವೆಚ್ಚದಲ್ಲಿ ನಗರದಾದ್ಯಂತ 33 ಉದ್ಯಾನಗಳ ಅಭಿವೃದ್ಧಿ ನಡೆಯಲಿದೆ’ ಎಂದು ಸಚಿವರು ತಿಳಿಸಿದರು.</p>.<p><strong>25 ವೃತ್ತ–ಜಂಕ್ಷನ್ಗಳ ಸೌಂದರ್ಯೀಕರಣ:</strong></p>.<p>ಒಟ್ಟು ₹ 13.40 ಕೋಟಿ ವೆಚ್ಚದಲ್ಲಿ ನಗರದ 25 ಜಂಕ್ಷನ್/ ವೃತ್ತಗಳ ಸೌಂದರ್ಯೀಕರಣ ಮಾಡಲಾಗುತ್ತಿದೆ. ಈ ಪೈಕಿ ಎಂಜಿಎನ್ವಿವೈ 2.0 ಅಡಿಯ ₹ 4 ಕೋಟಿ ವೆಚ್ಚದಲ್ಲಿ 8 ವೃತ್ತಗಳು, ಎನ್ಕ್ಯಾಪ್ ಯೋಜನೆಯಡಿ ₹3.60ಕೋಟಿ ವೆಚ್ಚದಲ್ಲಿ ಏಳು ವೃತ್ತಗಳ ಅಭಿವೃದ್ಧಿ ನಡೆಯಲಿದೆ. ಕುಡಾದಿಂದ ₹ 5.80 ಕೋಟಿ ವೆಚ್ಚದಲ್ಲಿ 10 ಪ್ರಮುಖ ವೃತ್ತಗಳ ಅಭಿವೃದ್ಧಿ ನಡೆಯಲಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಸಚಿವ ಪ್ರಿಯಾಂಕ್ ಹೇಳಿದರು.</p>.<p><strong>‘₹ 34.50 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ’</strong></p>.<p>ಕಲಬುರಗಿಯ ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಅಪ್ಪ ಕೆರೆ ₹ 1 ಕೋಟಿ ವೆಚ್ಚದಲ್ಲಿ, ₹ 14.50 ಕೋಟಿ ಮೊತ್ತದಲ್ಲಿ ಬಹಮನಿ ಕೋಟೆ ಕಂದಕ ಪ್ರದೇಶ ಸೇರಿದಂತೆ ಒಟ್ಟು ₹ 34.50 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಜೊತೆಗೆ ಜಲಮೂಲಗಳ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ’ ಎಂದು ಪ್ರಿಯಾಂಕ್ ವಿವರಿಸಿದರು.</p>.<p>ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ನಗರದಲ್ಲಿ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪಿ.ಪಿ.ಟಿ. ಮೂಲಕ ವಿವರಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಭವಿಷ್ಯದಲ್ಲಿ ಕಲಬುರಗಿ ನಗರ ಹೇಗಿರಬೇಕು ಎಂಬ ಪರಿಕಲ್ಪನೆಯೊಂದಿಗೆ ₹ 297 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p>.<p>‘ಕಲಬುರಗಿ ನಗರದ ನಿವಾಸಿಗಳ ಜೀವನಮಟ್ಟ ಸುಧಾರಣೆಗೆ ಮತ್ತು ಹಸಿರು-ನೀಲಿ ಸುಸ್ಥಿರ ಅಭಿವೃದ್ಧಿಗೆ ಈಗಾಗಲೆ ಅರ್ಬನ್ ಪ್ಲ್ಯಾನರ್ಗಳ ಸೇವೆ ಪಡೆದು ನವ ಕಲಬುರಗಿ ನಿರ್ಮಾಣಕ್ಕೆ ಸರ್ಕಾರ ಪಣತೊಟ್ಟಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಗಂಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.</p>.<p>‘ಮೊದಲ ಬಾರಿಗೆ ನಮ್ಮ ಸರ್ಕಾರ ಕಲಬುರಗಿ ಮಹಾನಗರದಲ್ಲಿ ರಸ್ತೆಗಳ ಆಡಿಟ್ ಮಾಡಿಸಿದೆ. 783.82 ಕಿ.ಮೀ ಮೇಲ್ಪದರಿನ ರಸ್ತೆ, 219.96 ಕಿ.ಮೀ. ಮೇಲ್ಪದರು ಇಲ್ಲದ ರಸ್ತೆ ಸೇರಿದಂತೆ ಒಟ್ಟಾರೆ 1003.78 ಕಿ.ಮೀ. ರಸ್ತೆ ಜಾಲವಿದೆ. ಸಂಪೂರ್ಣ ರಸ್ತೆ ಸುಧಾರಣೆಗೆ ಸುಮಾರು ₹300 ಕೋಟಿಗಳಷ್ಟು ಅನುದಾನದ ಅಗತ್ಯವಿದೆ. ಅದರಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ 53 ರಸ್ತೆಗಳನ್ನು ₹ 127.50 ಕೋಟಿ ವೆಚ್ಚದಲ್ಲಿ ಹೊಸದಾಗಿ/ಮರು ನಿರ್ಮಿಸಲಾಗುವುದು’ ಎಂದರು.</p>.<p>‘ಎಸ್.ಎಫ್.ಸಿ ₹ 25 ಕೋಟಿ ವಿಶೇಷ ಅನುದಾನದಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 10 ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಎನ್ಕ್ಯಾಪ್ನ ₹ 1 2.44 ಕೋಟಿ ಅನುದಾನದಲ್ಲಿ ಎಸ್.ವಿ.ಪಿ ವೃತ್ತದಿಂದ ಜಗತ್ ವೃತ್ತ, ಜಗತ್ ವೃತ್ತದಿಂದ ಹುಮನಾಬಾದ್ ಬೇಸ್ ಹಾಗೂ ಅನ್ನಪೂರ್ಣ ಕ್ರಾಸ್ನಿಂದ ಸೇಡಂ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ₹ 164 ಕೋಟಿ ವೆಚ್ಚದಲ್ಲಿ ರಸ್ತೆಗಳ ಸುಧಾರಣೆ ನಡೆಯಲಿದೆ. ಇದಲ್ಲದೆ 31 ವಾರ್ಡ್ಗಳಲ್ಲಿ 60.51 ಕಿ.ಮೀ ರಸ್ತೆ ನಿರ್ಮಾಣ ಮತ್ತು ರಿಲೇಯಿಂಗ್ ಮಾಡಬೇಕಾಗಿದೆ. ಇದಕ್ಕಾಗಿ ₹ 157.62 ಕೋಟಿ ಡಿಪಿಆರ್ ಸಿದ್ದಪಡಿಸಲಾಗಿದೆ’ ಎಂದರು.</p>.<p><strong>ಉದ್ಯಾನಗಳ ಅಭಿವೃದ್ಧಿ:</strong></p>.<p>‘ಕಲಬುರಗಿ ಪಾಲಿಕೆಯಿಂದ 2024–25ನೇ ಸಾಲಿನ ಕೆಕೆಆರ್ಡಿಬಿ ಮ್ಯಾಕ್ರೊ ಯೋಜನೆಯಡಿ ಒಟ್ಟು 4 ನಾಲ್ಕು ಉದ್ಯಾನಗಳನ್ನು ₹ 7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 3 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದರೆ, ಅಕ್ಕಮಹಾದೇವಿ ಕಾಲೊನಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ 2.0 ಯೋಜನೆಯಡಿ ₹ 4 ಕೋಟಿ ವೆಚ್ಚದಲ್ಲಿ ಐದು ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪಾಲಿಕೆಯಿಂದ ₹ 3 ಕೋಟಿ ಪಬ್ಲಿಕ್ ಗಾರ್ಡನ್, ₹ 3 ಕೋಟಿ ಅನುದಾನದಲ್ಲಿ ರಾಜೀವ್ ಗಾಂಧಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p>.<p>‘ಇದಲ್ಲದೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಸುಮಾರು ₹2.10 ಕೋಟಿ ವೆಚ್ಚದಲ್ಲಿ ಏಳು ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 4.50 ಕೋಟಿ ವೆಚ್ಚದಲಿ 18 ಉದ್ಯಾನಗಳ ಅಭಿವೃದ್ಧಿ ನಡೆಯಲಿದೆ. ಒಟ್ಟಾರೆಯಾಗಿ ಪಾಲಿಕೆ ಮತ್ತು ಕುಡಾದಿಂದ ₹ 22.40 ಕೋಟಿ ವೆಚ್ಚದಲ್ಲಿ ನಗರದಾದ್ಯಂತ 33 ಉದ್ಯಾನಗಳ ಅಭಿವೃದ್ಧಿ ನಡೆಯಲಿದೆ’ ಎಂದು ಸಚಿವರು ತಿಳಿಸಿದರು.</p>.<p><strong>25 ವೃತ್ತ–ಜಂಕ್ಷನ್ಗಳ ಸೌಂದರ್ಯೀಕರಣ:</strong></p>.<p>ಒಟ್ಟು ₹ 13.40 ಕೋಟಿ ವೆಚ್ಚದಲ್ಲಿ ನಗರದ 25 ಜಂಕ್ಷನ್/ ವೃತ್ತಗಳ ಸೌಂದರ್ಯೀಕರಣ ಮಾಡಲಾಗುತ್ತಿದೆ. ಈ ಪೈಕಿ ಎಂಜಿಎನ್ವಿವೈ 2.0 ಅಡಿಯ ₹ 4 ಕೋಟಿ ವೆಚ್ಚದಲ್ಲಿ 8 ವೃತ್ತಗಳು, ಎನ್ಕ್ಯಾಪ್ ಯೋಜನೆಯಡಿ ₹3.60ಕೋಟಿ ವೆಚ್ಚದಲ್ಲಿ ಏಳು ವೃತ್ತಗಳ ಅಭಿವೃದ್ಧಿ ನಡೆಯಲಿದೆ. ಕುಡಾದಿಂದ ₹ 5.80 ಕೋಟಿ ವೆಚ್ಚದಲ್ಲಿ 10 ಪ್ರಮುಖ ವೃತ್ತಗಳ ಅಭಿವೃದ್ಧಿ ನಡೆಯಲಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಸಚಿವ ಪ್ರಿಯಾಂಕ್ ಹೇಳಿದರು.</p>.<p><strong>‘₹ 34.50 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ’</strong></p>.<p>ಕಲಬುರಗಿಯ ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಅಪ್ಪ ಕೆರೆ ₹ 1 ಕೋಟಿ ವೆಚ್ಚದಲ್ಲಿ, ₹ 14.50 ಕೋಟಿ ಮೊತ್ತದಲ್ಲಿ ಬಹಮನಿ ಕೋಟೆ ಕಂದಕ ಪ್ರದೇಶ ಸೇರಿದಂತೆ ಒಟ್ಟು ₹ 34.50 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಜೊತೆಗೆ ಜಲಮೂಲಗಳ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ’ ಎಂದು ಪ್ರಿಯಾಂಕ್ ವಿವರಿಸಿದರು.</p>.<p>ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ನಗರದಲ್ಲಿ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪಿ.ಪಿ.ಟಿ. ಮೂಲಕ ವಿವರಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>