ಕಲಬುರಗಿ | ಎಲ್ಲಮ್ಮ ನಿನ್ನಾಲ್ಕ ಉಧೋ ಉಧೋ...ಯುವಜನೋತ್ಸವದಲ್ಲಿ ಸಾಂಸ್ಕೃತಿಕ ಕಲರವ
ಪ್ರಭು ಬ. ಅಡವಿಹಾಳ
Published : 29 ಅಕ್ಟೋಬರ್ 2025, 6:51 IST
Last Updated : 29 ಅಕ್ಟೋಬರ್ 2025, 6:51 IST
ಫಾಲೋ ಮಾಡಿ
Comments
ಕುಸನೂರ ಗ್ರಾಮದ ಮಾಳಿಂಗೇಶ್ವರ ಡೊಳ್ಳಿನ ಸಂಘದವರು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿರುವುದು
ಗಿರಿಜಾ ಕರ್ಪೂರ
ಜನಪದ ಗೀತೆಗಳ ಗಾಯನ ಮಧುರವಾಗಿರಬೇಕು. ಕಿರುಚಿದ ಹಾಗಿರಬಾರದು. ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಮೊದಲು ಸಿದ್ಧತೆ ಇರಬೇಕು
ಗಿರಿಜಾ ಕರ್ಪೂರ ಜಾನಪದ ಅಕಾಡೆಮಿ ಮಾಜಿ ಸದಸ್ಯೆ
ಶಿವಪೂಜಾ
ನಾನು ಯುವಜನೋತ್ಸವದಲ್ಲಿ ಪ್ರಥಮ ಬಾರಿಗೆ ಬಾಗವಹಿಸುತ್ತಿದ್ದೇನೆ. ತುಂಬಾ ಖುಷಿಯಾಯಿತು. ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಬೇಕು.
ಶಿವಪೂಜಾ ವೀರಮ್ಮ ಗಂಗಸಿರಿ ಕಾಲೇಜು
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದಲ್ಲಿ (ಸ್ವಾಯತ್ತ) ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರು
ನಗದು ಬಹುಮಾನ ನೀಡಿ ಪ್ರೋತ್ಸಾಹ
ಯುವಜನೋತ್ಸವದಲ್ಲಿ ಜನಪದ ನೃತ್ಯ(ತಂಡ) ಜನಪದ ಗೀತೆ(ತಂಡ) ಕಥೆ ಬರೆಯುವುದು ಚಿತ್ರಕಲೆ ಭಾಷಣ ಕವಿತೆ ಬರೆಯುವುದು ಸೇರಿದಂತೆ ಆರು ಸ್ಪರ್ಧೆಗಳನ್ನು ನಡೆಸಲಾಯಿತು. ಜನಪದ ನೃತ್ಯ ಮತ್ತು ಜನಪದ ಗೀತೆಯ ವಿಜೇತರಿಗೆ ಪ್ರಥಮ ₹10 ಸಾವಿರ ದ್ವಿತೀಯ ₹7 ಸಾವಿರ ತೃತೀಯ ₹5 ಸಾವಿರ ನಗದು ಬಹುಮಾನ ನೀಡಲಾಯಿತು. ಉಳಿದ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ₹3 ಸಾವಿರ ದ್ವಿತೀಯ ₹ 2 ಸಾವಿರ ತೃತೀಯ ₹ 1 ಸಾವಿರ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ಪಡೆದವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.