ಇದನ್ನು ಗಮನಿಸಿದ ದಾರಿ ಹೋಕರೊಬ್ಬರು ಸಂಸದ ಡಾ.ಉಮೇಶ ಜಾಧವ ಅವರ ಕಚೇರಿಯಲ್ಲಿ ತೆರೆದ ವಾರ್ ರೂಮ್ಗೆ ಕರೆ ಮಾಡಿ ತಿಳಿಸಿದರು. ತಕ್ಷಣ ತಮ್ಮ ವಾಹನದಲ್ಲೇ ಸ್ಥಳಕ್ಕೆ ಧಾವಿಸಿದ ಸಂಸದ, ವ್ಯಕ್ತಿಯ ನಾಡಿ ಬಡಿತ ಪರೀಕ್ಷಿಸಿದರು. ವ್ಯಕ್ತಿ ಉಸಿರಾಡುತ್ತಿರುವುದನ್ನು ಮನಗಂಡು ಆಂಬುಲೆನ್ಸ್ಗೆ ಫೋನ್ ಮಾಡಿ ಕರೆಸಿದರು. ವ್ಯಕ್ತಿಯ ಕೈಗೆ ಸ್ಯಾನಿಟೈಸರ್ ಹಾಕಿ, ತಮ್ಮ ಕೈಗೆ ಹಾಗೂ ಸುತ್ತಲಿನ ಜಾಗದಲ್ಲೂ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಿದರು.