ಹಿರಿಯ ದಲಿತ ಮುಖಂಡ ಡಾ.ವಿಠ್ಠಲ ದೊಡ್ಡಮನಿ, ‘ಮೊದಲಿನಿಂದಲೂ ಬಿಜೆಪಿಯ ರಾಜಕೀಯ ಹಿಂದೂ–ಮುಸ್ಲಿಮರನ್ನು ಒಡೆದು ಆಳುವುದೇ ಆಗಿದ್ದು, ಜಾತ್ಯತೀತ ಭಾರತದ ಬಗ್ಗೆ ಅವರಿಗೆ ಸಹನೆ ಇಲ್ಲ. ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಶ್ಯಾಮಪ್ರಸಾದ್ ಮುಖರ್ಜಿ, ಬ್ರಿಟಿಷರ ಎದುರು ಮಂಡಿಯೂರಿದ ವಿ.ಡಿ.ಸಾವರ್ಕರ್, ಗಾಂಧಿಯನ್ನು ಕೊಂದ ನಾಥೂರಾಮ ಗೋಡ್ಸೆಯ ಚಿಂತನೆಯೂ ಹಿಂದುಗಳಲ್ಲದವರನ್ನು ದ್ವೇಷಿಸುವುದೇ ಆಗಿತ್ತು. ಪೌರತ್ವ (ತಿದ್ದುಪಡಿ) ಕಾಯ್ದೆಯೂ ಒಡೆದು ಆಳುವ ಭಾಗವೇ ಆಗಿದೆ. ಇದನ್ನು ದೊಡ್ಡ ಮಟ್ಟದಲ್ಲಿ ನಾವೆಲ್ಲ ವಿರೋಧಿಸಬೇಕಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆಯುವ ಈ ಬಂದ್ಗೆ ಪೊಲೀಸರು ಅಡ್ಡಿ ಮಾಡಬಾರದು’ ಎಂದು ಮನವಿ ಮಾಡಿದರು.