<p><strong>ಕಾಳಗಿ</strong>: ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಸೂರ ಗ್ರಾಮ ಹೇರೂರ (ಕೆ) ಬೆಣ್ಣೆತೊರಾ ಜಲಾಶಯದ ನೀರಿಗೆ ಆಗಾಗ ನಲಗುತ್ತಲೇ ಇರುತ್ತದೆ. ಹಾಗಾಗಿ ಈ ಊರನ್ನು 1.5ಕಿಮೀ ದೂರದ ಅಶೋಕನಗರ (ಹೆಬ್ಬಾಳ ಕ್ರಾಸ್) ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕೆಂಬ ಸರ್ಕಾರದ ಯೋಜನೆ ಹಲವು ವರ್ಷಗಳಿಂದ ಜಾರಿಯಾಗದೆ ಹಾಗೆ ಉಳಿದುಕೊಂಡಿದೆ.</p>.<p>ಬೆಣ್ಣೂರ (ಕೆ) ಗ್ರಾಮ ಸಹ ಪ್ರತಿಬಾರಿ ಬೆಣ್ಣೆತೊರಾ ನೀರಿಗೆ ಸಂಕಷ್ಟಕ್ಕೊಳಗಾಗಿ ಅಲ್ಲಿಯ ಜನ-ಜಾನುವಾರು ಪರದಾಡುತ್ತಿದ್ದದನ್ನು ಮನಗಂಡು ಇಡಿ ಗ್ರಾಮವೇ ಅಶೋಕನಗರಗೆ (ಹೆಬ್ಬಾಳ ಕ್ರಾಸ್) ಸ್ಥಳಾಂತರ ಮಾಡಿ ಹಳೆದಾಗಿದೆ. ಹೀಗಾಗಿ ಅಲ್ಲಿನ ಜನರು ನಿಟ್ಟುಸಿರು ಬಿಟ್ಟು ನೆಮ್ಮದಿಯಾಗಿದ್ದಾರೆ.</p>.<p>ಅದರಂತೆ ಪ್ರತಿ ಮಳೆಗಾಲದಲ್ಲಿ ಬೆಣ್ಣೆತೊರಾ ನೀರಿಗೆ ಕಣಸೂರ ಗ್ರಾಮದ 50ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಇರುತ್ತವೆ. ಈ ಊರು ಮೊದಲೇ ಚಿಕ್ಕದಾಗಿದೆ. ಪ್ರತಿಬಾರಿಯೂ ಬೆಣ್ಣೆತೊರಾ ನೀರಿನ ಭಯಕ್ಕೆ ಜನರು ಮನೆಮಾರು ಬಿಟ್ಟು, ನಿದ್ದೆಗೆಟ್ಟು 2ಕಿಮೀ ದೂರದ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದ ಮೊರೆ ಹೋಗುತ್ತಾರೆ.</p>.<p>2016ರಲ್ಲಿ ಬೆಣ್ಣೆತೊರಾದ ಅತ್ಯಧಿಕ ನೀರಿಗೆ ಕಣಸೂರ ಗ್ರಾಮ ಕಕ್ಕಾಬಿಕ್ಕಿಯಾಗಿ ಜನ-ಜಾನುವಾರುಗಳ ಬವಣೆ ಹೇಳತಿರದಾಗಿತ್ತು. ಆ ವೇಳೆ ವೈಮಾನಿಕ ಸಮೀಕ್ಷೆ ನಡೆಸಿದ ಆಗಿನ ಸಿಎಂ ಸಿದ್ದರಾಮಯ್ಯ ಮತ್ತು ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಕಣಸೂರ ಸ್ಥಳಾಂತರ’ ಮಾಡುವ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿದರು ಎನ್ನಲಾಗಿದೆ.</p>.<p>‘ಪ್ರತಿಸಲವು ಮುಳುಗಡೆಯಾಗುವ ಮನೆಗಳಾದರೂ ಅಶೋಕನಗರಕ್ಕೆ ಶಿಫ್ಟ್ ಮಾಡುವ ಸಂಬಂಧ ಸರ್ಕಾರಕ್ಕೆ ಒಂದುಸಲ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.ಸ್ಥಳಾಂತರಕ್ಕಾಗಿ ಅಶೋಕನಗರದಲ್ಲಿ (ಹೆಬ್ಬಾಳ ಕ್ರಾಸ್) ಸರ್ವೆ ನಂ.66ರಲ್ಲಿ 40ಎಕರೆ ಸರ್ಕಾರಿ ಜಮೀನಿದೆ’ ಎಂದು ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ ತಿಳಿಸಿದರು.</p>.<p>2016ರಲ್ಲಿ ಆಶ್ವಾಸನೆ ನೀಡಿದ್ದ ಸರ್ಕಾರವೇ ಈಗಿದೆ. ಗ್ರಾಮಸ್ಥರ ಸಂಕಷ್ಟ ನಿವಾರಿಸಲುದಲ್ಲಿ ಸ್ಥಳಾಂತರ ಕಾರ್ಯಕ್ಕೆ ಸರ್ಕಾರ ಮುಂದಾಗಿ ಬೆಣ್ಣೆತೊರಾ ನೀರಿನಿಂದ ಶಾಶ್ವತ ಮುಕ್ತಿ ಮಾಡುವರೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.</p>.<div><blockquote>ಎರಡುಸಲ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೂ ಕಣಸೂರ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ</blockquote><span class="attribution">ನಾಗರಾಜ ಸಜ್ಜನ ಕಣಸೂರ ಗ್ರಾಮಸ್ಥ</span></div>.<div><blockquote>ಕಣಸೂರ ಗ್ರಾಮಸ್ಥರಿಗಾಗಿ ಅಶೋಕನಗರದಲ್ಲಿ 25ಆಶ್ರಯ ಮನೆ ನಿರ್ಮಿಸಲಾಗಿತ್ತು. ಆ ಬಳಿಕ ಕಾನೂನು ತೊಡಕಿನಿಂದಾಗಿ ಹಲವು ಮನೆಗಳು ನೆಲ ಸಮವಾಗಿವೆ ಶಿ</blockquote><span class="attribution">ವಕುಮಾರ ಕಮಕನೂರ ಗೋಟೂರ ಗ್ರಾಪಂ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಸೂರ ಗ್ರಾಮ ಹೇರೂರ (ಕೆ) ಬೆಣ್ಣೆತೊರಾ ಜಲಾಶಯದ ನೀರಿಗೆ ಆಗಾಗ ನಲಗುತ್ತಲೇ ಇರುತ್ತದೆ. ಹಾಗಾಗಿ ಈ ಊರನ್ನು 1.5ಕಿಮೀ ದೂರದ ಅಶೋಕನಗರ (ಹೆಬ್ಬಾಳ ಕ್ರಾಸ್) ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕೆಂಬ ಸರ್ಕಾರದ ಯೋಜನೆ ಹಲವು ವರ್ಷಗಳಿಂದ ಜಾರಿಯಾಗದೆ ಹಾಗೆ ಉಳಿದುಕೊಂಡಿದೆ.</p>.<p>ಬೆಣ್ಣೂರ (ಕೆ) ಗ್ರಾಮ ಸಹ ಪ್ರತಿಬಾರಿ ಬೆಣ್ಣೆತೊರಾ ನೀರಿಗೆ ಸಂಕಷ್ಟಕ್ಕೊಳಗಾಗಿ ಅಲ್ಲಿಯ ಜನ-ಜಾನುವಾರು ಪರದಾಡುತ್ತಿದ್ದದನ್ನು ಮನಗಂಡು ಇಡಿ ಗ್ರಾಮವೇ ಅಶೋಕನಗರಗೆ (ಹೆಬ್ಬಾಳ ಕ್ರಾಸ್) ಸ್ಥಳಾಂತರ ಮಾಡಿ ಹಳೆದಾಗಿದೆ. ಹೀಗಾಗಿ ಅಲ್ಲಿನ ಜನರು ನಿಟ್ಟುಸಿರು ಬಿಟ್ಟು ನೆಮ್ಮದಿಯಾಗಿದ್ದಾರೆ.</p>.<p>ಅದರಂತೆ ಪ್ರತಿ ಮಳೆಗಾಲದಲ್ಲಿ ಬೆಣ್ಣೆತೊರಾ ನೀರಿಗೆ ಕಣಸೂರ ಗ್ರಾಮದ 50ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಇರುತ್ತವೆ. ಈ ಊರು ಮೊದಲೇ ಚಿಕ್ಕದಾಗಿದೆ. ಪ್ರತಿಬಾರಿಯೂ ಬೆಣ್ಣೆತೊರಾ ನೀರಿನ ಭಯಕ್ಕೆ ಜನರು ಮನೆಮಾರು ಬಿಟ್ಟು, ನಿದ್ದೆಗೆಟ್ಟು 2ಕಿಮೀ ದೂರದ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದ ಮೊರೆ ಹೋಗುತ್ತಾರೆ.</p>.<p>2016ರಲ್ಲಿ ಬೆಣ್ಣೆತೊರಾದ ಅತ್ಯಧಿಕ ನೀರಿಗೆ ಕಣಸೂರ ಗ್ರಾಮ ಕಕ್ಕಾಬಿಕ್ಕಿಯಾಗಿ ಜನ-ಜಾನುವಾರುಗಳ ಬವಣೆ ಹೇಳತಿರದಾಗಿತ್ತು. ಆ ವೇಳೆ ವೈಮಾನಿಕ ಸಮೀಕ್ಷೆ ನಡೆಸಿದ ಆಗಿನ ಸಿಎಂ ಸಿದ್ದರಾಮಯ್ಯ ಮತ್ತು ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಕಣಸೂರ ಸ್ಥಳಾಂತರ’ ಮಾಡುವ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿದರು ಎನ್ನಲಾಗಿದೆ.</p>.<p>‘ಪ್ರತಿಸಲವು ಮುಳುಗಡೆಯಾಗುವ ಮನೆಗಳಾದರೂ ಅಶೋಕನಗರಕ್ಕೆ ಶಿಫ್ಟ್ ಮಾಡುವ ಸಂಬಂಧ ಸರ್ಕಾರಕ್ಕೆ ಒಂದುಸಲ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.ಸ್ಥಳಾಂತರಕ್ಕಾಗಿ ಅಶೋಕನಗರದಲ್ಲಿ (ಹೆಬ್ಬಾಳ ಕ್ರಾಸ್) ಸರ್ವೆ ನಂ.66ರಲ್ಲಿ 40ಎಕರೆ ಸರ್ಕಾರಿ ಜಮೀನಿದೆ’ ಎಂದು ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ ತಿಳಿಸಿದರು.</p>.<p>2016ರಲ್ಲಿ ಆಶ್ವಾಸನೆ ನೀಡಿದ್ದ ಸರ್ಕಾರವೇ ಈಗಿದೆ. ಗ್ರಾಮಸ್ಥರ ಸಂಕಷ್ಟ ನಿವಾರಿಸಲುದಲ್ಲಿ ಸ್ಥಳಾಂತರ ಕಾರ್ಯಕ್ಕೆ ಸರ್ಕಾರ ಮುಂದಾಗಿ ಬೆಣ್ಣೆತೊರಾ ನೀರಿನಿಂದ ಶಾಶ್ವತ ಮುಕ್ತಿ ಮಾಡುವರೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.</p>.<div><blockquote>ಎರಡುಸಲ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೂ ಕಣಸೂರ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ</blockquote><span class="attribution">ನಾಗರಾಜ ಸಜ್ಜನ ಕಣಸೂರ ಗ್ರಾಮಸ್ಥ</span></div>.<div><blockquote>ಕಣಸೂರ ಗ್ರಾಮಸ್ಥರಿಗಾಗಿ ಅಶೋಕನಗರದಲ್ಲಿ 25ಆಶ್ರಯ ಮನೆ ನಿರ್ಮಿಸಲಾಗಿತ್ತು. ಆ ಬಳಿಕ ಕಾನೂನು ತೊಡಕಿನಿಂದಾಗಿ ಹಲವು ಮನೆಗಳು ನೆಲ ಸಮವಾಗಿವೆ ಶಿ</blockquote><span class="attribution">ವಕುಮಾರ ಕಮಕನೂರ ಗೋಟೂರ ಗ್ರಾಪಂ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>