ಈ ಬಗ್ಗೆ ಹೋರಾಟ ಸಮಿತಿಯು ಕರ್ನಾಟಕ ಪ್ರದೇಶ ಈಡಿಗ ಸಂಘ, ಅಖಿಲ ಭಾರತ ಬಿಲ್ಲವ ಅಸೋಸಿಯೇಷನ್, ಬಿಲ್ಲವ ಸಮಾಜ ಹಾಗೂ ನಾಮಧಾರಿ, ಧೀವರ, ನಾಯಕ ಸೇರಿದಂತೆ ಉಪ ಪಂಗಡಗಳ ಜತೆ ಚರ್ಚಿಸಲು ನಿರ್ಧರಿಸಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರಮುಖರು ಸೇರಿಕೊಂಡು ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ಶೀಘ್ರದಲ್ಲಿ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.