ಸೋಯಾ ಬೆಳೆಗಾರರಿಗೆ ಸಂಕಷ್ಟ: ತಾಲ್ಲೂಕಿನ ಭಾರಿ ಮಳೆಯಿಂದ ಕೊಯ್ಲಿಗೆ ಬಂದ ಸೊಇಯಾ ಬೆಳೆಯ ರಾಶಿಗೆ ಮಳೆ ಅಡ್ಡಿಯಾಗಿದೆ. ಈಗಾಗಲೇ ಅಧಿಕ ಮಳೆ, ತೇವಾಂಶದಿಂದ ಸೋಯಾ ಬೆಳೆಯ ಬೇರು ಕೊಳೆತಿವೆ. ಇದರಿಂದ ಕಾಳುಗಳ ಗಾತ್ರದಲ್ಲಿ ಕುಸಿತ ಕಾಣಿಸಿದೆ. ಈಗ ಅಳಿದುಳಿದ ಸೋಯಾ ರಾಶಿ ಮಾಡಿ ಕೈಗೆತ್ತಿಕೊಳ್ಳಲು ಮುಂದಾದರೆ, ಅದಕ್ಕೂ ಮಳೆರಾಯ ಕೊಕ್ಕೆ ಹಾಕಿದ್ದಾನೆ. ಬಹುತೇಕ ಸೊಯಾ ಬೆಳೆ ಮಳೆಯ ನೀರಿನಲ್ಲಿ ನಿಂತಿದೆ ಎಂದು ಪ್ರಗತಿಪರ ರೈತ ಬಾಬುರಾವ್ ಪಾಟೀಲ ತಿಳಿಸಿದರು.