<p><strong>ಕಲಬುರಗಿ:</strong> ನಿರ್ಣಾಯಕ ಹಂತದಲ್ಲಿ ಫೈಜಾನ್ ರೈಜ್ (ಅಜೇಯ 57 ರನ್) ಸಿಡಿಸಿದ ಸ್ಫೋಟಕ ಅರ್ಧ ಶತಕದ ಬಲದಿಂದ ರೌಜಾ ಸ್ಟಾರ್ಸ್ ತಂಡವು ಕೆಬಿಎನ್ ಪ್ರೀಮಿಯರ್ ಲೀಗ್ ಟಿ–20 ಕ್ರಿಕೆಟ್ ಟೂರ್ನಿಯಲ್ಲಿ 3ನೇ ಬಾರಿಗೆ ಚಾಂಪಿಯನ್ ಆಯಿತು.</p>.<p>ನಗರದ ಸಂತ್ರಾಸವಾಡಿಯ ಕೆಬಿಎನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ವರ್ಣರಂಜಿತ ಫೈನಲ್ ಪಂದ್ಯದಲ್ಲಿ ಗಂಗಾವತಿ ಲಯನ್ಸ್ ವಿರುದ್ಧ ನಾಲ್ಕು ವಿಕೆಟ್ಗಳಿಂದ ಗೆದ್ದಿತು. ರೌಜಾ ಸಾರ್ಸ್ ಟ್ರೋಫಿಗೆ ಮುತ್ತಿಕ್ಕುವ ಜೊತೆಗೆ ₹ 10 ಲಕ್ಷ ಬಹುಮಾನವನ್ನೂ ಬಾಚಿತು. ರನ್ನರ್ಸ್ ಅಪ್ ಆದ ಗಂಗಾವತಿ ಲಯನ್ಸ್ ತಂಡವು ₹ 5 ಲಕ್ಷ ಬಹುಮಾನ ಹಾಗೂ ಟ್ರೋಫಿ ಪಡೆಯಿತು.</p>.<p>ಈ ಹಿಂದೆ 2019 ಹಾಗೂ 2023ರಲ್ಲೂ ರೌಜಾ ಸ್ಟಾರ್ಸ್ ತಂಡ ಕೆಬಿಎನ್ ಟಿ–20 ಟೂರ್ನಿಯ ಚಾಂಪಿಯನ್ಸ್ ಎನಿಸಿತ್ತು.</p>.<p>ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಗಂಗಾವತಿ ಲಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 224 ರನ್ಗಳ ಸವಾಲಿನ ಮೊತ್ತ ಪೇರಿಸಿತು. 225 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ರೌಜಾ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ ಆರು ವಿಕೆಟ್ಗಳಿಗೆ 228 ರನ್ ಗಳಿಸಿ ಗೆಲುವಿನ ನಗೆ ಬೀರಿತು.</p>.<p>ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ರೌಜಾ ಸ್ಟಾರ್ಸ್ ವಿರುದ್ಧ 21 ರನ್ಗಳಿಂದ ಸೋತಿದ್ದ ಗಂಗಾವತಿ ಲಯನ್ಸ್, 2ನೇ ಕ್ವಾಲಿಫೈಯರ್ನಲ್ಲಿ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡವನ್ನು 34 ರನ್ಗಳಿಂದ ಮಣಿಸಿ ಫೈನಲ್ಗೆ ಪ್ರವೇಶಿಸಿತ್ತು.</p>.<p>1ನೇ ಕ್ವಾಲಿಫೈಯರ್ನಲ್ಲಿ ಎದುರಾದ ಸೋಲು ತೀರಿಸಿಕೊಳ್ಳಲು ಫೈನಲ್ನಲ್ಲಿ 224 ರನ್ಗಳ ಬೃಹತ್ ಮೊತ್ತವನ್ನೂ ಕಲೆಹಾಕಿತ್ತು. ಟೂರ್ನಿಯ 19ನೇ ಓವರ್ ತನಕವೂ ಗಂಗಾವತಿ ಲಯನ್ಸ್ ತಂಡವೇ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಅಂತಿಮ ಓವರ್ನಲ್ಲಿ ರೌಜಾ ಸಾರ್ಸ್ಗೆ ಗೆಲುವಿಗೆ 17 ರನ್ಗಳು ಬೇಕಿದ್ದವು.</p>.<p>ನಿರ್ಣಾಯಕ ಓವರ್ನಲ್ಲಿ ಗಂಗಾವತಿ ಲಯನ್ಸ್ ತಂಡದ ನಾಯಕ ಶಿವರಾಜ ಅವರು ಆದಿತ್ಯ ಮಣಿ ಕೈಗೆ ಚೆಂಡು ಕೊಟ್ಟರು. ಮೊದಲ ಕ್ವಾಲಿಫೈಯರ್ನಲ್ಲೇ ಗೆದ್ದು ಫೈನಲ್ ಪ್ರವೇಶಿಸಿದ ಅಚಲ ವಿಶ್ವಾಸದಲ್ಲಿದ್ದ ರೌಜಾ ಸ್ಟಾರ್ಸ್ನ ಫೈಜಾನ್ ರೈಜ್ 20ನೇ ಓವರ್ನಲ್ಲಿ ಪಾರಮ್ಯ ಮೆರೆದರು. ಒಂದು ಸಿಕ್ಸರ್, 3 ಮೂರು ಬೌಂಡರಿ ಸಹಿತ 20 ರನ್ ಬಾರಿಸಿ ಗೆಲುವಿನ ತೋರಣ ಕಟ್ಟಿದರು.</p>.<p>ಕೆಬಿಎನ್ ದರ್ಗಾದ ಮುಖ್ಯಸ್ಥ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. </p>.<p>ಟೂರ್ನಿಯ ವಿವಿಧ ತಂಡಗಳ ಮಾಲೀಕರು, ಅಧಿಕಾರಿಗಳು, ವಿವಿಧ ಸಮಿತಿಗಳ ಪ್ರತಿನಿಧಿಗಳು, ಮೈದಾನ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಫ್ಲಡ್ ಲೈಟ್ ನಿರ್ವಹಣಾ ಸಿಬ್ಬಂದಿ, ಐಟಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಿರ್ಣಾಯಕ ಹಂತದಲ್ಲಿ ಫೈಜಾನ್ ರೈಜ್ (ಅಜೇಯ 57 ರನ್) ಸಿಡಿಸಿದ ಸ್ಫೋಟಕ ಅರ್ಧ ಶತಕದ ಬಲದಿಂದ ರೌಜಾ ಸ್ಟಾರ್ಸ್ ತಂಡವು ಕೆಬಿಎನ್ ಪ್ರೀಮಿಯರ್ ಲೀಗ್ ಟಿ–20 ಕ್ರಿಕೆಟ್ ಟೂರ್ನಿಯಲ್ಲಿ 3ನೇ ಬಾರಿಗೆ ಚಾಂಪಿಯನ್ ಆಯಿತು.</p>.<p>ನಗರದ ಸಂತ್ರಾಸವಾಡಿಯ ಕೆಬಿಎನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ವರ್ಣರಂಜಿತ ಫೈನಲ್ ಪಂದ್ಯದಲ್ಲಿ ಗಂಗಾವತಿ ಲಯನ್ಸ್ ವಿರುದ್ಧ ನಾಲ್ಕು ವಿಕೆಟ್ಗಳಿಂದ ಗೆದ್ದಿತು. ರೌಜಾ ಸಾರ್ಸ್ ಟ್ರೋಫಿಗೆ ಮುತ್ತಿಕ್ಕುವ ಜೊತೆಗೆ ₹ 10 ಲಕ್ಷ ಬಹುಮಾನವನ್ನೂ ಬಾಚಿತು. ರನ್ನರ್ಸ್ ಅಪ್ ಆದ ಗಂಗಾವತಿ ಲಯನ್ಸ್ ತಂಡವು ₹ 5 ಲಕ್ಷ ಬಹುಮಾನ ಹಾಗೂ ಟ್ರೋಫಿ ಪಡೆಯಿತು.</p>.<p>ಈ ಹಿಂದೆ 2019 ಹಾಗೂ 2023ರಲ್ಲೂ ರೌಜಾ ಸ್ಟಾರ್ಸ್ ತಂಡ ಕೆಬಿಎನ್ ಟಿ–20 ಟೂರ್ನಿಯ ಚಾಂಪಿಯನ್ಸ್ ಎನಿಸಿತ್ತು.</p>.<p>ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಗಂಗಾವತಿ ಲಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 224 ರನ್ಗಳ ಸವಾಲಿನ ಮೊತ್ತ ಪೇರಿಸಿತು. 225 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ರೌಜಾ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ ಆರು ವಿಕೆಟ್ಗಳಿಗೆ 228 ರನ್ ಗಳಿಸಿ ಗೆಲುವಿನ ನಗೆ ಬೀರಿತು.</p>.<p>ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ರೌಜಾ ಸ್ಟಾರ್ಸ್ ವಿರುದ್ಧ 21 ರನ್ಗಳಿಂದ ಸೋತಿದ್ದ ಗಂಗಾವತಿ ಲಯನ್ಸ್, 2ನೇ ಕ್ವಾಲಿಫೈಯರ್ನಲ್ಲಿ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡವನ್ನು 34 ರನ್ಗಳಿಂದ ಮಣಿಸಿ ಫೈನಲ್ಗೆ ಪ್ರವೇಶಿಸಿತ್ತು.</p>.<p>1ನೇ ಕ್ವಾಲಿಫೈಯರ್ನಲ್ಲಿ ಎದುರಾದ ಸೋಲು ತೀರಿಸಿಕೊಳ್ಳಲು ಫೈನಲ್ನಲ್ಲಿ 224 ರನ್ಗಳ ಬೃಹತ್ ಮೊತ್ತವನ್ನೂ ಕಲೆಹಾಕಿತ್ತು. ಟೂರ್ನಿಯ 19ನೇ ಓವರ್ ತನಕವೂ ಗಂಗಾವತಿ ಲಯನ್ಸ್ ತಂಡವೇ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಅಂತಿಮ ಓವರ್ನಲ್ಲಿ ರೌಜಾ ಸಾರ್ಸ್ಗೆ ಗೆಲುವಿಗೆ 17 ರನ್ಗಳು ಬೇಕಿದ್ದವು.</p>.<p>ನಿರ್ಣಾಯಕ ಓವರ್ನಲ್ಲಿ ಗಂಗಾವತಿ ಲಯನ್ಸ್ ತಂಡದ ನಾಯಕ ಶಿವರಾಜ ಅವರು ಆದಿತ್ಯ ಮಣಿ ಕೈಗೆ ಚೆಂಡು ಕೊಟ್ಟರು. ಮೊದಲ ಕ್ವಾಲಿಫೈಯರ್ನಲ್ಲೇ ಗೆದ್ದು ಫೈನಲ್ ಪ್ರವೇಶಿಸಿದ ಅಚಲ ವಿಶ್ವಾಸದಲ್ಲಿದ್ದ ರೌಜಾ ಸ್ಟಾರ್ಸ್ನ ಫೈಜಾನ್ ರೈಜ್ 20ನೇ ಓವರ್ನಲ್ಲಿ ಪಾರಮ್ಯ ಮೆರೆದರು. ಒಂದು ಸಿಕ್ಸರ್, 3 ಮೂರು ಬೌಂಡರಿ ಸಹಿತ 20 ರನ್ ಬಾರಿಸಿ ಗೆಲುವಿನ ತೋರಣ ಕಟ್ಟಿದರು.</p>.<p>ಕೆಬಿಎನ್ ದರ್ಗಾದ ಮುಖ್ಯಸ್ಥ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. </p>.<p>ಟೂರ್ನಿಯ ವಿವಿಧ ತಂಡಗಳ ಮಾಲೀಕರು, ಅಧಿಕಾರಿಗಳು, ವಿವಿಧ ಸಮಿತಿಗಳ ಪ್ರತಿನಿಧಿಗಳು, ಮೈದಾನ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಫ್ಲಡ್ ಲೈಟ್ ನಿರ್ವಹಣಾ ಸಿಬ್ಬಂದಿ, ಐಟಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>