ಸೇವಾ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಜ್ ಮಾತನಾಡಿ, ‘ಕೊರೊನಾ ಕಾರನದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುವುದು ಅಗತ್ಯವಾಗಿದೆ. ಸೇವಾ ಸಂಗಮವು ಕಳೆದ 15 ವರ್ಷಗಳಿಂದ ಸಮಾಜ ಸೇವೆ ಮುಂದುವರಿಸಿದೆ. ರೈತರು, ಕಿಶೋರಿಯರು, ಅಂಗವಿಕಲರು, ಶೋಷಣೆಗೆ ಒಳಪಟ್ಟವರಿಗೆ ಸಹಾಯ ಹಸ್ತ ಚಾಚಿದೆ’ ಎಂದರು.