‘ಶಿಕ್ಷಣ ಸುಧಾರಣೆಗೆ ತಜ್ಞರ ಸಮಿತಿ’
‘ಶಿಕ್ಷಣದ ಪ್ರಗತಿ ಮತ್ತು ಹಿಂದುಳಿದಿರುವಿಕೆ ಹೋಗಲಾಡಿಸಲು ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆಯೂ ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು. ‘ಫಲಿತಾಂಶ ಸುಧಾರಣೆಗೆ 2 ತಿಂಗಳಲ್ಲಿ ಶಿಕ್ಷಣ ತಜ್ಞರ ಸಮಿತಿ ರಚನೆಯಾಗಲಿದೆ. ಕಲಿಕಾ ಆಸರೆ ಪುಸ್ತಕಗಳನ್ನು ಆಗಸ್ಟ್ 15ರ ಒಳಗೆ ಎಸ್ಎಸ್ಎಲ್ಸಿ ಹಾಗೂ ಸೆಪ್ಟೆಂಬರ್ 17ರ ಒಳಗೆ 8ನೇ ಮತ್ತು 9ನೇ ತರಗತಿ ಮಕ್ಕಳಿಗೆ ವಿತರಣೆ ಮಾಡಲಾಗುವುದು’ ಎಂದರು.