<p><strong>ಕಲಬುರ್ಗಿ</strong>: ನಗರದಲ್ಲಿ ಸೋಮವಾರ ಜಿಲ್ಲಾ ಗುತ್ತಿಗೆದಾರರ ಅಸೋಸಿಯೇಷನ್ ಸಭೆ ನಡೆಯಿತು. ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.</p>.<p>ಮೇ 24ರಿಂದ ರಸ್ತೆ ಹಾಗೂ ಕಟ್ಟಡ ಕಾರ್ಮಿಕರ ಸಹಾಯ ಮಾಡಲು ಏಳು ವಾಹನಗಳನ್ನು ನೀಡಲಾಗಿತ್ತು. ಈ ವಾಹನಗಳು ಯಾವ ಕಡೆ ಸಂಚರಿಸಿವೆ ಹಾಗೂ ಖರ್ಚು– ವೆಚ್ಚ ಏನು. ನಿಜವಾಗಿ ಕಾರ್ಮಿಕರಿಗೆ ಉಪಯೋಗವಾಗುತ್ತಿವೆಯೇ ಎಂಬ ಬಗ್ಗೆ ಕೂಡ ತಿಳಿದುಕೊಳ್ಳಲಾಯಿತು.</p>.<p>ಜೂನ್ 7ರವರೆಗೆ ಉಚಿತ ಸೇವೆಯನ್ನು ಮುಂದುವರಿಸಲು ಅಸೋಸಿಯೇಷನ್ನ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.</p>.<p>ಕೆಕೆಆರ್ಡಿಬಿ, ಕೆಪಿಡಬ್ಲ್ಯೂಡಿ, ನೀರವಾವರಿ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಟೆಂಡರ್ ಬಗ್ಗೆ ಕೂಡ ಸದಸ್ಯರು ಚರ್ಚಿಸಿದರು.</p>.<p>ಅಸೋಸಿಯೇಷನ್ ಉಪಾಧ್ಯಕ್ಷ ಮೋಹಸಿನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ, ಸರದಾರಯ್ಯ ಗುತ್ತೇದಾರ, ಸಲೀಮ್ ಅಟ್ಟೂರ್, ರಾಜಶೇಖರ ಪಾಟೀಲ್, ಮನ್ಸೂರ ತೊಂಚಿ, ಗುರುನಂಜಯ್ಯ ಸ್ವಾಮಿ, ಶಿವಾನಂದ ಪಾಟೀಲ, ರಾಜಶೇಖರ ಎಂಕಚಿ, ಮಡೆಪ್ಪ ಗುತ್ತೇದಾರ, ಚನ್ನಯ್ಯ ಮಠ, ಸಿರಾಜ್ ಪಟೇಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ನಗರದಲ್ಲಿ ಸೋಮವಾರ ಜಿಲ್ಲಾ ಗುತ್ತಿಗೆದಾರರ ಅಸೋಸಿಯೇಷನ್ ಸಭೆ ನಡೆಯಿತು. ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.</p>.<p>ಮೇ 24ರಿಂದ ರಸ್ತೆ ಹಾಗೂ ಕಟ್ಟಡ ಕಾರ್ಮಿಕರ ಸಹಾಯ ಮಾಡಲು ಏಳು ವಾಹನಗಳನ್ನು ನೀಡಲಾಗಿತ್ತು. ಈ ವಾಹನಗಳು ಯಾವ ಕಡೆ ಸಂಚರಿಸಿವೆ ಹಾಗೂ ಖರ್ಚು– ವೆಚ್ಚ ಏನು. ನಿಜವಾಗಿ ಕಾರ್ಮಿಕರಿಗೆ ಉಪಯೋಗವಾಗುತ್ತಿವೆಯೇ ಎಂಬ ಬಗ್ಗೆ ಕೂಡ ತಿಳಿದುಕೊಳ್ಳಲಾಯಿತು.</p>.<p>ಜೂನ್ 7ರವರೆಗೆ ಉಚಿತ ಸೇವೆಯನ್ನು ಮುಂದುವರಿಸಲು ಅಸೋಸಿಯೇಷನ್ನ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.</p>.<p>ಕೆಕೆಆರ್ಡಿಬಿ, ಕೆಪಿಡಬ್ಲ್ಯೂಡಿ, ನೀರವಾವರಿ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಟೆಂಡರ್ ಬಗ್ಗೆ ಕೂಡ ಸದಸ್ಯರು ಚರ್ಚಿಸಿದರು.</p>.<p>ಅಸೋಸಿಯೇಷನ್ ಉಪಾಧ್ಯಕ್ಷ ಮೋಹಸಿನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ, ಸರದಾರಯ್ಯ ಗುತ್ತೇದಾರ, ಸಲೀಮ್ ಅಟ್ಟೂರ್, ರಾಜಶೇಖರ ಪಾಟೀಲ್, ಮನ್ಸೂರ ತೊಂಚಿ, ಗುರುನಂಜಯ್ಯ ಸ್ವಾಮಿ, ಶಿವಾನಂದ ಪಾಟೀಲ, ರಾಜಶೇಖರ ಎಂಕಚಿ, ಮಡೆಪ್ಪ ಗುತ್ತೇದಾರ, ಚನ್ನಯ್ಯ ಮಠ, ಸಿರಾಜ್ ಪಟೇಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>