ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಕಾಲೇಜಿನ ಡೀನ್ ಡಾ.ಎಂ.ಎಂ. ಧನೋಜಿ ಮಾತನಾಡಿ, ‘ರಂಗನಾಥನ್ ಅವರು ಗಣಿತಶಾಸ್ತ್ರದಲ್ಲಿ ಪದವಿಯನ್ನು ಪಡೆದು ಗ್ರಂಥಾಲಯ ವರ್ಗೀಕರಣ ಮಾಡಿ ಓದುಗರಿಗೆ ತಮಗೆ ಬೇಕಾದ ವಿಷಯ ಗ್ರಂಥಗಳನ್ನು ಸರಳವಾಗಿ ಸಿಗುವಂತೆ ಮಾಡಿದರುಉ. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯವು ಜ್ಞಾನದ ಕೇಂದ್ರ, ಕಾಲೇಜಿನ ಹೃದಯ’ ಎಂದು ಬಣ್ಣಿಸಿದರು.