<p><strong>ಕಲಬುರಗಿ:</strong> ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ನಗರದ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ 15ಕ್ಕೂ ಅಧಿಕ ತಂಡಗಳು ದಿಢೀರ್ ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.</p>.ಕಮಲಾಪುರ: ಕಿರಾಣಿ ಅಂಗಡಿ, ಎರಡು ಚಿನ್ನಾಭರಣ ಮಳಿಗೆಯಲ್ಲಿ ಕಳವು.<p>ಇಲ್ಲಿನ ಕಲಬುರಗಿ ಮಹಾನಗರದ ಪಾಲಿಕೆ ಕಚೇರಿಯಲ್ಲಿ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಪಾಲಿಕೆಯ ಇ-ಆಸ್ತಿ ವಿಭಾಗ ಹಾಗೂ ಚುನಾವಣಾ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.</p><p> ಇ-ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು. ಅದರಲ್ಲಿ 2012ರಲ್ಲಿ ಒಂದು ಕಡತಕ್ಕೆ ಗುತ್ತಿಗೆ ದಾಖಲೆ ಪತ್ರಕ್ಕೆ ಈತನಕ ಪಾಲಿಕೆ ಆಯುಕ್ತರ ಸಹಿ ಮಾಡಿಸಿಲ್ಲ ಎಂದು ಪ್ರಶ್ನಿಸಿದರು. </p>.ಕಲಬುರಗಿ: 700 ಕಿ.ಮೀ ಪಾದಯಾತ್ರೆ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.<p>'ಡಿ'ಗ್ರೂಪ್ ಸಿಬ್ಬಂದಿಯ ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದರು. ಸೆಕ್ಷನ್ ಅಧಿಕಾರಿ ಯಾರು? ಯಾಕೆ ನೀವು ಕೇಳಲ್ಲ. ಅಧಿಕಾರಿಗಳು ಕೇಳದಿದ್ದರೆ ಅವರು ಸಮವಸ್ತ್ರ ಹಾಕಿ ಬರುತ್ತಾರಲ್ಲವೇ ಎಂದೂ ಪಾಲಿಕೆಯ ಕಂದಾಯ ಉಪ ಆಯುಕ್ತ ರಾಜೇಂದ್ರ ಭಾಲ್ಕಿ ಅವರನ್ನು ಪ್ರಶ್ನಿಸಿದರು.</p><p>ಬಳಿಕ ಟೆಂಡರ್ ಶಾಖೆಗೆ ತೆರಳಿ ಅಲ್ಲಿದ್ದ ಮಹಿಳೆಯನ್ನು ಯಾರಮ್ಮ ನೀವು ಎಂದು ಪ್ರಶ್ನಿಸಿದರು. ಅದಕ್ಕೆ ತಾನೊಬ್ಬ 'ಡಿ' ಗ್ರೂಪ್ ಸಿಬ್ಬಂದಿ ಎಂದು ವಿವರಿಸಿದರು. ಯಾಕೆ ಸಮವಸ್ತ್ರ ಯಾಕೆ ಹಾಕಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು.</p><p>ಅದಕ್ಕೆ ಸಮವಸ್ತ್ರ ಕೊಟ್ಟಿಲ್ಲ ಎಂದರು. ಅದರ ಬಗೆಗೆ ಟಿಪ್ಪಣಿ ಮಾಡಿಕೊಳ್ಳುವಂತೆ ಅಧೀನ ಸಿಬ್ಬಂದಿಗೆ ಹೇಳಿದರು.</p>.ಕಲಬುರಗಿ | ಗಾಂಧಿ ತತ್ವದ ವಿರುದ್ಧ ಕಾಂಗ್ರೆಸ್ ಸರ್ಕಾರ: ಸಿದ್ಧಲಿಂಗ ಸ್ವಾಮಿ.<p>ಬಳಿಕ ಅಮೃತ ಯೋಜನೆಯಡಿ ಉದ್ಯಾನಗಳ ಅಭಿವೃದ್ಧಿ ಕಡತಗಳನ್ನು ಪರಿಶೀಲಿಸಿದರು.ನಂತರ ಎಷ್ಟು ಅನುದಾನ ಮಂಜೂರಾಗಿದೆ, ಎಷ್ಟು ಕಾಮಗಾರಿಗೆ ಕಾರ್ಯಾದೇಶ ಕೊಡಲಾಗಿದೆ? ಎಂಬುದರ ಕುರಿತು ಕೂಲಂಕಷ ಮಾಹಿತಿ ಪಡೆದರು.</p><p>ಇದಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಲು ಕೊಟ್ಟ ಫಾರಂ ಅನ್ನು ಎರಡು ವರ್ಷಗಳಿಂದ ಇಟ್ಟಿಕೊಂಡಿದ್ದಿರಿ ಯಾಕೆ? ಎಂದು ಕೇಳಿದರು.</p>.ಕಲಬುರಗಿ | ಕೈದಿಗಳ ಮೋಜು ಮಸ್ತಿ: ನಾಲ್ಕೂವರೆ ತಾಸು ತಪಾಸಣೆ ನಡೆಸಿದ ಅಲೋಕ್ ಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ನಗರದ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ 15ಕ್ಕೂ ಅಧಿಕ ತಂಡಗಳು ದಿಢೀರ್ ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.</p>.ಕಮಲಾಪುರ: ಕಿರಾಣಿ ಅಂಗಡಿ, ಎರಡು ಚಿನ್ನಾಭರಣ ಮಳಿಗೆಯಲ್ಲಿ ಕಳವು.<p>ಇಲ್ಲಿನ ಕಲಬುರಗಿ ಮಹಾನಗರದ ಪಾಲಿಕೆ ಕಚೇರಿಯಲ್ಲಿ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಪಾಲಿಕೆಯ ಇ-ಆಸ್ತಿ ವಿಭಾಗ ಹಾಗೂ ಚುನಾವಣಾ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.</p><p> ಇ-ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು. ಅದರಲ್ಲಿ 2012ರಲ್ಲಿ ಒಂದು ಕಡತಕ್ಕೆ ಗುತ್ತಿಗೆ ದಾಖಲೆ ಪತ್ರಕ್ಕೆ ಈತನಕ ಪಾಲಿಕೆ ಆಯುಕ್ತರ ಸಹಿ ಮಾಡಿಸಿಲ್ಲ ಎಂದು ಪ್ರಶ್ನಿಸಿದರು. </p>.ಕಲಬುರಗಿ: 700 ಕಿ.ಮೀ ಪಾದಯಾತ್ರೆ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.<p>'ಡಿ'ಗ್ರೂಪ್ ಸಿಬ್ಬಂದಿಯ ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದರು. ಸೆಕ್ಷನ್ ಅಧಿಕಾರಿ ಯಾರು? ಯಾಕೆ ನೀವು ಕೇಳಲ್ಲ. ಅಧಿಕಾರಿಗಳು ಕೇಳದಿದ್ದರೆ ಅವರು ಸಮವಸ್ತ್ರ ಹಾಕಿ ಬರುತ್ತಾರಲ್ಲವೇ ಎಂದೂ ಪಾಲಿಕೆಯ ಕಂದಾಯ ಉಪ ಆಯುಕ್ತ ರಾಜೇಂದ್ರ ಭಾಲ್ಕಿ ಅವರನ್ನು ಪ್ರಶ್ನಿಸಿದರು.</p><p>ಬಳಿಕ ಟೆಂಡರ್ ಶಾಖೆಗೆ ತೆರಳಿ ಅಲ್ಲಿದ್ದ ಮಹಿಳೆಯನ್ನು ಯಾರಮ್ಮ ನೀವು ಎಂದು ಪ್ರಶ್ನಿಸಿದರು. ಅದಕ್ಕೆ ತಾನೊಬ್ಬ 'ಡಿ' ಗ್ರೂಪ್ ಸಿಬ್ಬಂದಿ ಎಂದು ವಿವರಿಸಿದರು. ಯಾಕೆ ಸಮವಸ್ತ್ರ ಯಾಕೆ ಹಾಕಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು.</p><p>ಅದಕ್ಕೆ ಸಮವಸ್ತ್ರ ಕೊಟ್ಟಿಲ್ಲ ಎಂದರು. ಅದರ ಬಗೆಗೆ ಟಿಪ್ಪಣಿ ಮಾಡಿಕೊಳ್ಳುವಂತೆ ಅಧೀನ ಸಿಬ್ಬಂದಿಗೆ ಹೇಳಿದರು.</p>.ಕಲಬುರಗಿ | ಗಾಂಧಿ ತತ್ವದ ವಿರುದ್ಧ ಕಾಂಗ್ರೆಸ್ ಸರ್ಕಾರ: ಸಿದ್ಧಲಿಂಗ ಸ್ವಾಮಿ.<p>ಬಳಿಕ ಅಮೃತ ಯೋಜನೆಯಡಿ ಉದ್ಯಾನಗಳ ಅಭಿವೃದ್ಧಿ ಕಡತಗಳನ್ನು ಪರಿಶೀಲಿಸಿದರು.ನಂತರ ಎಷ್ಟು ಅನುದಾನ ಮಂಜೂರಾಗಿದೆ, ಎಷ್ಟು ಕಾಮಗಾರಿಗೆ ಕಾರ್ಯಾದೇಶ ಕೊಡಲಾಗಿದೆ? ಎಂಬುದರ ಕುರಿತು ಕೂಲಂಕಷ ಮಾಹಿತಿ ಪಡೆದರು.</p><p>ಇದಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಲು ಕೊಟ್ಟ ಫಾರಂ ಅನ್ನು ಎರಡು ವರ್ಷಗಳಿಂದ ಇಟ್ಟಿಕೊಂಡಿದ್ದಿರಿ ಯಾಕೆ? ಎಂದು ಕೇಳಿದರು.</p>.ಕಲಬುರಗಿ | ಕೈದಿಗಳ ಮೋಜು ಮಸ್ತಿ: ನಾಲ್ಕೂವರೆ ತಾಸು ತಪಾಸಣೆ ನಡೆಸಿದ ಅಲೋಕ್ ಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>