ಹಲವು ದಿನಗಳಿಂದ ಗ್ರಾಮದ ಅನೇಕ ಜಾನುವಾರುಗಳ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡಿವೆ. ಅಲ್ಲದೆ ಕಾಲುಗಳಲ್ಲಿ ಬಾವು ಕಂಡು ಬರುತ್ತಿದೆ. ಜಾನುವಾರುಗಳು ಆಹಾರ ಸೇವಿಸುವುದನ್ನು ನಿಲ್ಲಿಸಿವೆ. ಅಲ್ಲದೆ ಸುಸ್ತಾಗಿ ನಿಲ್ಲುತ್ತಿವೆ. ರೈತರು ರಾವೂರ ಗ್ರಾಮದ ಪಶು ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ತಿಳಿಸಿದರೆ ಜಾನುವಾರುಗಳನ್ನು ಪಶು ಆಸ್ಪತ್ರೆಗೆ ತರಲು ಹೇಳಿದ್ದಾರೆ. ಆದರೆ ಜಾನುವಾರುಗಳನ್ನು ದೂರದವರೆಗೆ ಹೇಗೆ ತೆಗೆದುಕೊಂಡು ಹೋಗುವುದು ಎಂಬ ಚಿಂತೆ ರೈತರದ್ದಾಗಿದೆ.