<p><strong>ಚಿಂಚೋಳಿ</strong>: ಕಾಂಡ ಕೊರಕ ಹುಳುವಿನ ಬಾಧೆಯಿಂದ 280ಕ್ಕೂ ಹೆಚ್ಚು ಮಾವಿನ ಗಿಡಗಳು ಒಣಗಿ ನಿಂತಿದ್ದು, ಬೆಳೆಗಾರನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.</p>.<p>ತಾಲ್ಲೂಕಿನ ಯಲಕಪಳ್ಳಿ ಗ್ರಾಮದ ರೈತ ಸಂತೋಷ ಖತಲಪ್ಪ ತಿಗಡಿ ಅವರ ತೋಟದಲ್ಲಿ ಬೆಳೆಸಿದ ಒಂದೂವರೆ ದಶಕದ ಮಾವಿನ ಗಿಡಗಳು ಒಣಗಿ ನಿಂತಿವೆ.</p>.<p>ಹಚ್ಚ ಹಸಿರಾಗಿ ನಳನಳಿಸಬೇಕಾದ ತೋಟದಲ್ಲಿ ಮಾವಿನ ಗಿಡಗಳು ಕಾಂಡ ಕೊರಕ ಹುಳು ಬಾಧೆಗೆ ತುತ್ತಾಗಿದ್ದರಿಂದ ಬರಡು ಬರಡಾಗಿ ಗೋಚರಿಸುತ್ತಿವೆ.</p>.<p>ಸುಮಾರು 3 ಎಕರೆ ತೋಟದಲ್ಲಿ ಬೆಳೆಸಿದ 280ಕ್ಕೂ ಹೆಚ್ಚಿನ ಮಾವಿನ ಮರಗಳ ಪೈಕಿ ಬೆರಳೆಣಿಕೆಯಷ್ಟು ಮರಗಳು ಮಾತ್ರ ಬದುಕುಳಿದಿವೆ.</p>.<p>ಮಾವಿನ ಫಸಲಿನಿಂದ ಪ್ರತಿವರ್ಷ ₹4ಲಕ್ಷ ಆದಾಯ ಪಡೆಯುತ್ತಿದ್ದ ಬೆಳೆಗಾರನಿಗೆ ಆದಾಯದ ಮೂಲ ನಿಂತು ಹೋಗುವ ಮೂಲಕ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಬೆಳೆಗಾರ ಕಣ್ಣೀರು ಹಾಕುವಂತಾಗಿದೆ.</p>.<p>ತೋಟದಲ್ಲಿ ಬೆಳೆಸಿದ ಕೇಸರ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನ ಗಿಡಗಳು ಕಾಂಡ ಕೊರಕ ಹುಳುವಿಗೆ ಬಲಿಯಾಗಿವೆ. ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಮನವಿ ಮಾಡಿದ್ದಾರೆ.</p>.<p>ತೋಟಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಸುರೇಶರಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಗಿಡಗಳು ಸಂಪೂರ್ಣ ಒಣಗಿದ್ದರಿಂದ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ.</p>.<p>ಕಾಂಡ ಕೊರಕ ಹುಳು ಮಾವಿನ ಗಿಡಕ್ಕೆ ನೀರು ಮತ್ತು ಆಹಾರ ಪೂರೈಕೆಯಾಗದಂತೆ ಮಾಡುತ್ತವೆ ಇದರಿಂದ ಗಿಡಗಳು ಒಣಗುತ್ತವೆ. ಆರಂಭದಲ್ಲಿಯೇ ಬೆಳೆಗಾರರು ಅಧಿಕಾರಿಗಳ ಮತ್ತು ವಿಜ್ಞಾನಿಗಳ ಗಮನಕ್ಕೆ ತಂದರೆ ಸಲಹೆ ನೀಡಲು ಸಾಧ್ಯವಿತ್ತು. ಆದರೆ ಈಗ ಯಾವ ಸಲಹೆಯೂ ಪ್ರಯೋಜನಕ್ಕೆ ಬಾರದು ಎಂದಿದ್ದಾರೆ. </p>.<p><strong>ಮಾವಿನ ಮರಗಳು ಚೆನ್ನಾಗಿ ಬೆಳೆದಿದ್ದವು. ಪ್ರತಿವರ್ಷ ಫಸಲಿನ ಪ್ರಮಾಣ ಹೆಚ್ಚಾಗುತ್ತಿತ್ತು ಆದರೆ ಒಂದೇ ತಿಂಗಳಲ್ಲಿ ತೋಟದಲ್ಲಿನ ಎಲ್ಲಾ ಮರಗಳು ಒಣಗಿ ನಿಂತಿವೆ </strong></p><p><strong>-ಸಂತೋಷ ಖತಲಪ್ಪ ತಿಗಡಿ ಮಾವು ಬೆಳೆಗಾರ ಯಲಕಪಳ್ಳಿ</strong> </p>.<p><strong>ಮಾವಿನ ಮರಗಳು ಒಣಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ತೋಟಗಾರಿಕೆ ಅಧಿಕಾರಿ ಕಳುಹಿಸಿದ್ದೇವೆ ಆದರೆ ಅಷ್ಟರಲ್ಲಿ ಮರಗಳು ಸಂಪೂರ್ಣ ಒಣಗಿದ್ದವು </strong></p><p><strong>-ರಾಜಕುಮಾರ ಗೋವಿನ್ ಸಹಾಯಕ ನಿರ್ದೆಶಕರು ತೋಟಗಾರಿಕೆ ಇಲಾಖೆ ಚಿಂಚೋಳಿ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಕಾಂಡ ಕೊರಕ ಹುಳುವಿನ ಬಾಧೆಯಿಂದ 280ಕ್ಕೂ ಹೆಚ್ಚು ಮಾವಿನ ಗಿಡಗಳು ಒಣಗಿ ನಿಂತಿದ್ದು, ಬೆಳೆಗಾರನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.</p>.<p>ತಾಲ್ಲೂಕಿನ ಯಲಕಪಳ್ಳಿ ಗ್ರಾಮದ ರೈತ ಸಂತೋಷ ಖತಲಪ್ಪ ತಿಗಡಿ ಅವರ ತೋಟದಲ್ಲಿ ಬೆಳೆಸಿದ ಒಂದೂವರೆ ದಶಕದ ಮಾವಿನ ಗಿಡಗಳು ಒಣಗಿ ನಿಂತಿವೆ.</p>.<p>ಹಚ್ಚ ಹಸಿರಾಗಿ ನಳನಳಿಸಬೇಕಾದ ತೋಟದಲ್ಲಿ ಮಾವಿನ ಗಿಡಗಳು ಕಾಂಡ ಕೊರಕ ಹುಳು ಬಾಧೆಗೆ ತುತ್ತಾಗಿದ್ದರಿಂದ ಬರಡು ಬರಡಾಗಿ ಗೋಚರಿಸುತ್ತಿವೆ.</p>.<p>ಸುಮಾರು 3 ಎಕರೆ ತೋಟದಲ್ಲಿ ಬೆಳೆಸಿದ 280ಕ್ಕೂ ಹೆಚ್ಚಿನ ಮಾವಿನ ಮರಗಳ ಪೈಕಿ ಬೆರಳೆಣಿಕೆಯಷ್ಟು ಮರಗಳು ಮಾತ್ರ ಬದುಕುಳಿದಿವೆ.</p>.<p>ಮಾವಿನ ಫಸಲಿನಿಂದ ಪ್ರತಿವರ್ಷ ₹4ಲಕ್ಷ ಆದಾಯ ಪಡೆಯುತ್ತಿದ್ದ ಬೆಳೆಗಾರನಿಗೆ ಆದಾಯದ ಮೂಲ ನಿಂತು ಹೋಗುವ ಮೂಲಕ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಬೆಳೆಗಾರ ಕಣ್ಣೀರು ಹಾಕುವಂತಾಗಿದೆ.</p>.<p>ತೋಟದಲ್ಲಿ ಬೆಳೆಸಿದ ಕೇಸರ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನ ಗಿಡಗಳು ಕಾಂಡ ಕೊರಕ ಹುಳುವಿಗೆ ಬಲಿಯಾಗಿವೆ. ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಮನವಿ ಮಾಡಿದ್ದಾರೆ.</p>.<p>ತೋಟಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಸುರೇಶರಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಗಿಡಗಳು ಸಂಪೂರ್ಣ ಒಣಗಿದ್ದರಿಂದ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ.</p>.<p>ಕಾಂಡ ಕೊರಕ ಹುಳು ಮಾವಿನ ಗಿಡಕ್ಕೆ ನೀರು ಮತ್ತು ಆಹಾರ ಪೂರೈಕೆಯಾಗದಂತೆ ಮಾಡುತ್ತವೆ ಇದರಿಂದ ಗಿಡಗಳು ಒಣಗುತ್ತವೆ. ಆರಂಭದಲ್ಲಿಯೇ ಬೆಳೆಗಾರರು ಅಧಿಕಾರಿಗಳ ಮತ್ತು ವಿಜ್ಞಾನಿಗಳ ಗಮನಕ್ಕೆ ತಂದರೆ ಸಲಹೆ ನೀಡಲು ಸಾಧ್ಯವಿತ್ತು. ಆದರೆ ಈಗ ಯಾವ ಸಲಹೆಯೂ ಪ್ರಯೋಜನಕ್ಕೆ ಬಾರದು ಎಂದಿದ್ದಾರೆ. </p>.<p><strong>ಮಾವಿನ ಮರಗಳು ಚೆನ್ನಾಗಿ ಬೆಳೆದಿದ್ದವು. ಪ್ರತಿವರ್ಷ ಫಸಲಿನ ಪ್ರಮಾಣ ಹೆಚ್ಚಾಗುತ್ತಿತ್ತು ಆದರೆ ಒಂದೇ ತಿಂಗಳಲ್ಲಿ ತೋಟದಲ್ಲಿನ ಎಲ್ಲಾ ಮರಗಳು ಒಣಗಿ ನಿಂತಿವೆ </strong></p><p><strong>-ಸಂತೋಷ ಖತಲಪ್ಪ ತಿಗಡಿ ಮಾವು ಬೆಳೆಗಾರ ಯಲಕಪಳ್ಳಿ</strong> </p>.<p><strong>ಮಾವಿನ ಮರಗಳು ಒಣಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ತೋಟಗಾರಿಕೆ ಅಧಿಕಾರಿ ಕಳುಹಿಸಿದ್ದೇವೆ ಆದರೆ ಅಷ್ಟರಲ್ಲಿ ಮರಗಳು ಸಂಪೂರ್ಣ ಒಣಗಿದ್ದವು </strong></p><p><strong>-ರಾಜಕುಮಾರ ಗೋವಿನ್ ಸಹಾಯಕ ನಿರ್ದೆಶಕರು ತೋಟಗಾರಿಕೆ ಇಲಾಖೆ ಚಿಂಚೋಳಿ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>