ಚಿಂಚೋಳಿ: ರಸ್ತೆ ದಾಟುವಾಗ ಬಸ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಾಗ ಬಸ್ನ ಹಿಂದಿನ ಚಕ್ರ ವ್ಯಕ್ತಿ ಮೇಲೆ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಘಟನೆ ಸಂಭವಿಸಿದ್ದು, ಪಟ್ಟಣದ ನಿವಾಸಿ ಲಕ್ಷ್ಮಣ ರಾಮಲು(40) ಮೃತರು.
ಚಿಂಚೋಳಿಯಿಂದ ಕಲಬುರಗಿಗೆ ಕಡೆಗೆ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ನ ಹಿಂದಿನ ಚಕ್ರ ಲಕ್ಷ್ಮಣ ಅವರ ಮೇಲೆ ಹರಿದಿದೆ. ಮೃತರ ಪತ್ನಿ ಸರಸ್ವತಿ ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಪಿಐ ಎಲ್.ಎಚ್. ಗೌಂಡಿ, ಎಸ್ಐ ಸಿದ್ಧೇಶ್ವರ ಭೇಟಿ ನೀಡಿ ಪರಿಶೀಲಿಸಿದರು.