<p><strong>ಅಫಜಲಪುರ: </strong>ಪಟ್ಟಣದಲ್ಲಿ 100 ಹಾಸಿಗೆಯ ಆಸ್ಪತ್ರೆಯಿದ್ದು, ವಿವಿಧ ರೋಗಗಳ 11 ತಜ್ಞ ವೈದ್ಯರಿರಬೇಕು ಆದರೆ ನೇತ್ರ ತಜ್ಞರು ಮಾತ್ರ ಇದ್ದಾರೆ. ಡಯಾಲಿಸಿಸ್ ಯಂತ್ರ ಕೆಟ್ಟು 2 ತಿಂಗಳು ಕಳೆದರೂ ನೋಡುವವರಿಲ್ಲ. ಆಸ್ಪತ್ರೆಯ ವಾತಾವರಣ ತ್ಯಾಜ್ಯದಿಂದ ಕೂಡಿದೆ’ ಎಂದು ಶಾಸಕ ಎಂ.ವೈ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೆಟ್ಟು ನಿಂತಿರುವ ಡಯಾಲಿಸಿಸ್ ಯಂತ್ರಗಳನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು.</p>.<p>‘ಡಯಾಲಿಸಿಸ್ ಯಂತ್ರ ಕೆಟ್ಟಿರುವ ಬಗ್ಗೆ ವೈದ್ಯರು ಯಾರಿಗೂ ಮಾಹಿತಿ ನೀಡಿಲ್ಲ. ಇವರ ಬೇಜವಾಬ್ದಾರಿಯಿಂದ ಮೂವರು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇಂತಹ ವೈದ್ಯರ ಅವಶ್ಯಕತೆ ನಮಗಿಲ್ಲ. ನಿಮಗೆ ಸೇವೆ ಮಾಡುವ ಮನಸ್ಸಿಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶಂಕ್ರಯ್ಯ ಹಿರೇಮಠ, ಸುನೀತಾ ಮಶಾಳ, ‘ತಾಲ್ಲೂಕಿನಲ್ಲಿ ಕಿಡ್ನಿ ವೈಫಲ್ಯದ 16 ಜನರಿದ್ದೇವೆ, ಆದರೆ ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ 3 ಜನ ಮೃತಪಟ್ಟಿದ್ದಾರೆ. ಡಯಾಲಿಸಿಸ್ ಮಾಡಿ ಎಂದರೆ ಕಲಬುರಗಿಗೆ ಹೋಗಿ ಎಂದು ಹೇಳುತ್ತಾರೆ. 2 ತಿಂಗಳಿಂದ ನಾವು ಜಿಲ್ಲಾ ಕೇಂದ್ರಕ್ಕೆ ಹೋಗಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದೇವೆ’ ಅಳಲು ತೋಡಿಕೊಂಡರು.</p>.<p>ಕಡಿಮೆ ಓಲ್ಟೇಜ್ ವಿದ್ಯುತ್ನಿಂದ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕುರಿತು ಶಾಸಕರು ಜೆಸ್ಕಾಂದವರಿಗೆ ವಿಚಾರಿಸಿದಾಗ ‘ನಾವು ಆಸ್ಪತ್ರೆಗೆ ಹೆಚ್ಚಿನ ಓಲ್ಟೇಜ್ ನೀಡಿದರೆ ಗ್ರಾಮಾಂತರ ಭಾಗಕ್ಕೆ ವಿದ್ಯುತ್ ಪೂರೈಕೆಗೆ ತೊಂದರೆಯಾಗುದ್ದೆ‘ ಎಂದು ತಿಳಿಸಿದರು.</p>.<p>ನಂತರ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ‘ಭಾನುವಾರ ಡಯಾಲಿಸಿಸ್ ಯಂತ್ರ ಸರೊಯಾಗಬೇಕು. ನಿತ್ಯ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು, ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ’ ಎಂದು ಸೂಚಿಸಿದರು.</p>.<p>ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ರಜೆಯಲ್ಲಿದ್ದಾರೆ, ಪ್ರಭಾರಿಯಾಗಿ ಡಾ.ಸಂಗಮೇಶ ಟಕ್ಕಳಿಯವರಿಗೆ ಕಾರ್ಯಭಾರ ವಹಿಸಿಕೊಟ್ಟಿದ್ದಾರೆ. ಎಲ್ಲ ವೈದ್ಯರು ಖಾಸಗಿ ಕಾರ್ಯಗಳಿಗೆ ಹೋದರೆ ರೋಗಿಗಳ ಗತಿ ಏನು. ತಾಲ್ಲೂಕು ಆಸ್ಪತ್ರೆಯಲ್ಲಿ ಈ ಸ್ಥಿತಿಯಾದರೆ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗತಿಯೇನು ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಜಿ.ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಪ್ರಮುಖರಾದ ಪಪ್ಪು ಪಟೇಲ್, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ಅನೀಲ ಕಾಚಾಪೂರ ಮತ್ತಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ: </strong>ಪಟ್ಟಣದಲ್ಲಿ 100 ಹಾಸಿಗೆಯ ಆಸ್ಪತ್ರೆಯಿದ್ದು, ವಿವಿಧ ರೋಗಗಳ 11 ತಜ್ಞ ವೈದ್ಯರಿರಬೇಕು ಆದರೆ ನೇತ್ರ ತಜ್ಞರು ಮಾತ್ರ ಇದ್ದಾರೆ. ಡಯಾಲಿಸಿಸ್ ಯಂತ್ರ ಕೆಟ್ಟು 2 ತಿಂಗಳು ಕಳೆದರೂ ನೋಡುವವರಿಲ್ಲ. ಆಸ್ಪತ್ರೆಯ ವಾತಾವರಣ ತ್ಯಾಜ್ಯದಿಂದ ಕೂಡಿದೆ’ ಎಂದು ಶಾಸಕ ಎಂ.ವೈ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೆಟ್ಟು ನಿಂತಿರುವ ಡಯಾಲಿಸಿಸ್ ಯಂತ್ರಗಳನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು.</p>.<p>‘ಡಯಾಲಿಸಿಸ್ ಯಂತ್ರ ಕೆಟ್ಟಿರುವ ಬಗ್ಗೆ ವೈದ್ಯರು ಯಾರಿಗೂ ಮಾಹಿತಿ ನೀಡಿಲ್ಲ. ಇವರ ಬೇಜವಾಬ್ದಾರಿಯಿಂದ ಮೂವರು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇಂತಹ ವೈದ್ಯರ ಅವಶ್ಯಕತೆ ನಮಗಿಲ್ಲ. ನಿಮಗೆ ಸೇವೆ ಮಾಡುವ ಮನಸ್ಸಿಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶಂಕ್ರಯ್ಯ ಹಿರೇಮಠ, ಸುನೀತಾ ಮಶಾಳ, ‘ತಾಲ್ಲೂಕಿನಲ್ಲಿ ಕಿಡ್ನಿ ವೈಫಲ್ಯದ 16 ಜನರಿದ್ದೇವೆ, ಆದರೆ ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ 3 ಜನ ಮೃತಪಟ್ಟಿದ್ದಾರೆ. ಡಯಾಲಿಸಿಸ್ ಮಾಡಿ ಎಂದರೆ ಕಲಬುರಗಿಗೆ ಹೋಗಿ ಎಂದು ಹೇಳುತ್ತಾರೆ. 2 ತಿಂಗಳಿಂದ ನಾವು ಜಿಲ್ಲಾ ಕೇಂದ್ರಕ್ಕೆ ಹೋಗಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದೇವೆ’ ಅಳಲು ತೋಡಿಕೊಂಡರು.</p>.<p>ಕಡಿಮೆ ಓಲ್ಟೇಜ್ ವಿದ್ಯುತ್ನಿಂದ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕುರಿತು ಶಾಸಕರು ಜೆಸ್ಕಾಂದವರಿಗೆ ವಿಚಾರಿಸಿದಾಗ ‘ನಾವು ಆಸ್ಪತ್ರೆಗೆ ಹೆಚ್ಚಿನ ಓಲ್ಟೇಜ್ ನೀಡಿದರೆ ಗ್ರಾಮಾಂತರ ಭಾಗಕ್ಕೆ ವಿದ್ಯುತ್ ಪೂರೈಕೆಗೆ ತೊಂದರೆಯಾಗುದ್ದೆ‘ ಎಂದು ತಿಳಿಸಿದರು.</p>.<p>ನಂತರ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ‘ಭಾನುವಾರ ಡಯಾಲಿಸಿಸ್ ಯಂತ್ರ ಸರೊಯಾಗಬೇಕು. ನಿತ್ಯ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು, ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ’ ಎಂದು ಸೂಚಿಸಿದರು.</p>.<p>ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ರಜೆಯಲ್ಲಿದ್ದಾರೆ, ಪ್ರಭಾರಿಯಾಗಿ ಡಾ.ಸಂಗಮೇಶ ಟಕ್ಕಳಿಯವರಿಗೆ ಕಾರ್ಯಭಾರ ವಹಿಸಿಕೊಟ್ಟಿದ್ದಾರೆ. ಎಲ್ಲ ವೈದ್ಯರು ಖಾಸಗಿ ಕಾರ್ಯಗಳಿಗೆ ಹೋದರೆ ರೋಗಿಗಳ ಗತಿ ಏನು. ತಾಲ್ಲೂಕು ಆಸ್ಪತ್ರೆಯಲ್ಲಿ ಈ ಸ್ಥಿತಿಯಾದರೆ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗತಿಯೇನು ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಜಿ.ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಪ್ರಮುಖರಾದ ಪಪ್ಪು ಪಟೇಲ್, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ಅನೀಲ ಕಾಚಾಪೂರ ಮತ್ತಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>