<p><strong>ಕಲಬುರ್ಗಿ: </strong>ಕೇಂದ್ರ ಸರ್ಕಾರ ಈ ಬಾರಿ ತೊಗರಿಗೆ ಕೇವಲ ₹ 6,300 ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ಬೇಸರಗೊಂಡ ರೈತರು ಖರೀದಿ ಕೇಂದ್ರಗಳ ಗೊಡವೆಯೇ ಬೇಡವೆಂದು, ನೇರವಾಗಿ ಮಾರುಕಟ್ಟೆಗೆ ಉತ್ಪನ್ನ ಸಾಗಿಸುತ್ತಿದ್ದಾರೆ.</p>.<p>ಕಳೆದ ವರ್ಷ ₹ 6000 ಬೆಂಬಲ ಬೆಲೆ ಇತ್ತು. ಆಗ ತೊಗರಿ ದರ ₹ 5800ಕ್ಕೆ ಕುಸಿದಿದ್ದರಿಂದ ಹಲವು ರೈತರು ಖರೀದಿ ಕೇಂದ್ರಗಳಿಗೆ ನೀಡಿದರು. ಆದರೆ, ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲೇ ಪ್ರತಿ ಕ್ವಿಂಟಲ್ಗೆ ₹ 6200ರಿಂದ ₹ 6300 ದರ ಇದೆ. ಹಾಗಿದ್ದ ಮೇಲೆ ಖರೀದಿ ಕೇಂದ್ರಕ್ಕೆ ಏಕೆ ಅಲೆದಾಡಬೇಕು ಎಂಬ ನಿರ್ಧಾರಕ್ಕೆ ಹಲವು ರೈತರು ಬಂದಿದ್ದಾರೆ.<br /><br />ಹೆಸರು ಬೆಳೆಗೆ ₹ 7279 ಬೆಂಬಲ ಬೆಲೆ ನೀಡಲಾಗಿದೆ. ಲೆಕ್ಕದ ಪ್ರಕಾರ ತೊಗರಿ ಬೆಳೆಯಲು ಹೆಚ್ಚು ಸಮಯ ಹಾಗೂ ಹೆಚ್ಚು ಬಂಡವಾಳ ಹಾಕಬೇಕಾಗುತ್ತದೆ. ಹಾಗಾಗಿ, ಹೆಸರಿಗಿಂತ ತೊಗರಿಗೆ ₹ 1000 ಹೆಚ್ಚೇ ದರ ಇರಬೇಕಾದದ್ದು ನ್ಯಾಯ ಎಂಬುದು ರೈತರಾದ ಶಿವರುದ್ರಯ್ಯ ಮಠ, ಸಣ್ಣ ಶರಣಪ್ಪ ಬಿರಾದಾರ ಅವರ ಅನಿಸಿಕೆ.</p>.<p>ಕಳೆದ ವರ್ಷ ಕೇಂದ್ರ ಸರ್ಕಾರ ₹ 10 ಸಾವಿರ ದರ ನೀಡಿ ವಿದೇಶದ ತೊಗರಿ ಖರೀದಿ ಮಾಡಿದೆ. ಆದರೆ, ಅದಕ್ಕಿಂತಲೂ ಉತ್ಕೃಷ್ಟವಾದ ರೈತರ ತೊಗರಿಗೆ ಕೇವಲ ₹ 6000 ದರ ನೀಡಿ ಖರೀದಿಸಿದೆ. ಸಾಕಷ್ಟು ಹೋರಾಟ ಮಾಡಿದ ಮೇಲೆ ಈ ವರ್ಷ ಕೇವಲ ₹ 300 ಹೆಚ್ಚಿಸಿದ್ದಾರೆ. ಮೇಲಾಗಿ, ರೈತರು ಬೆಳೆದ ಎಲ್ಲ ತೊಗರಿಯನ್ನೂ ಖರೀದಿಸುವುದಿಲ್ಲ. ಅದಕ್ಕೂ ಲಿಮಿಟ್ ಮಾಡಿದ್ದು ಖಂಡನಾರ್ಹ ಎನ್ನುತ್ತಾರೆ ಅವರು.</p>.<p><strong>ಕನಿಷ್ಠ ₹ 8 ಸಾವಿರ ನೀಡಿ</strong></p>.<p>ಒಂದು ಎಕರೆ ತೊಗರಿ ಬೆಳೆಯಲು ₹ 22 ಸಾವಿರ ಖರ್ಚಾಗುತ್ತದೆ. ಸಾಧಾರಣವಾಗಿ ಪ್ರತಿ ಎಕರೆಗೆ ಮೂರು ಕ್ವಿಂಟಲ್ ಬೆಲೆಯುತ್ತೇವೆ. ಸದ್ಯ ಸರ್ಕಾರ ₹ 6300 ದರ ನೀಡಿದೆ. ಪ್ರತಿ ಎಕರೆಗೆ ₹ 18,900 ಮಾತ್ರ ಗಳಿಕೆಯಾಯಿತು. ಅಂದರೆ, ಖರ್ಚು ಮಾಡಿದ್ದಕ್ಕಿಂತ ಸರ್ಕಾರದ ಬೆಂಬಲ ಬೆಲೆಯೇ ಕಡಿಮೆ ಇದೆ. ಕನಿಷ್ಠ ₹ 8 ಸಾವಿರ ಘೋಷಿಸಿದರೆ ಮಾತ್ರ ರೈತರು ಬದುಕಲು ಸಾಧ್ಯ.</p>.<p>–ಮಲ್ಲಿನಾಥ ಕೋಳೂರ, ಮೇಳಕುಂದ–ಬಿ ಗ್ರಾಮದ ರೈತ</p>.<p><strong>ಮುಖ್ಯಮಂತ್ರಿಗೆ ಮನವರಿಕೆ ಮಾಡುವೆ</strong></p>.<p>ತೊಗರಿಗಿಂತ ಹೆಸರಿಗೆ ಹೆಚ್ಚು ಬೆಂಬಲ ಬೆಲೆ ಘೋಷಿಸಿದ್ದಾರೆ ಎಂಬುದು ಸಮಸ್ಯೆ ಅಲ್ಲ. ಆದರೆ, ತೊಗರಿಗೂ ಹೆಚ್ಚು ದರ ನೀಡಬೇಕಿತ್ತು ಎಂಬುದು ಸದ್ಯ. ಆದರೆ, ಮೊದಲಿನಿಂದಲೂ ಹೆಸರಿಗೇ ಹೆಚ್ಚಿನ ದರ ಸಿಗುತ್ತಿದೆ. ಸರ್ಕಾರಕ್ಕೆ ಇದರ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದಂತಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತೊಗರಿ ಬೆಳೆದ ರೈತರ ಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತೇನೆ.</p>.<p>–ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಗೌಡ,ಅಧ್ಯಕ್ಷ,ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಕೇಂದ್ರ ಸರ್ಕಾರ ಈ ಬಾರಿ ತೊಗರಿಗೆ ಕೇವಲ ₹ 6,300 ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ಬೇಸರಗೊಂಡ ರೈತರು ಖರೀದಿ ಕೇಂದ್ರಗಳ ಗೊಡವೆಯೇ ಬೇಡವೆಂದು, ನೇರವಾಗಿ ಮಾರುಕಟ್ಟೆಗೆ ಉತ್ಪನ್ನ ಸಾಗಿಸುತ್ತಿದ್ದಾರೆ.</p>.<p>ಕಳೆದ ವರ್ಷ ₹ 6000 ಬೆಂಬಲ ಬೆಲೆ ಇತ್ತು. ಆಗ ತೊಗರಿ ದರ ₹ 5800ಕ್ಕೆ ಕುಸಿದಿದ್ದರಿಂದ ಹಲವು ರೈತರು ಖರೀದಿ ಕೇಂದ್ರಗಳಿಗೆ ನೀಡಿದರು. ಆದರೆ, ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲೇ ಪ್ರತಿ ಕ್ವಿಂಟಲ್ಗೆ ₹ 6200ರಿಂದ ₹ 6300 ದರ ಇದೆ. ಹಾಗಿದ್ದ ಮೇಲೆ ಖರೀದಿ ಕೇಂದ್ರಕ್ಕೆ ಏಕೆ ಅಲೆದಾಡಬೇಕು ಎಂಬ ನಿರ್ಧಾರಕ್ಕೆ ಹಲವು ರೈತರು ಬಂದಿದ್ದಾರೆ.<br /><br />ಹೆಸರು ಬೆಳೆಗೆ ₹ 7279 ಬೆಂಬಲ ಬೆಲೆ ನೀಡಲಾಗಿದೆ. ಲೆಕ್ಕದ ಪ್ರಕಾರ ತೊಗರಿ ಬೆಳೆಯಲು ಹೆಚ್ಚು ಸಮಯ ಹಾಗೂ ಹೆಚ್ಚು ಬಂಡವಾಳ ಹಾಕಬೇಕಾಗುತ್ತದೆ. ಹಾಗಾಗಿ, ಹೆಸರಿಗಿಂತ ತೊಗರಿಗೆ ₹ 1000 ಹೆಚ್ಚೇ ದರ ಇರಬೇಕಾದದ್ದು ನ್ಯಾಯ ಎಂಬುದು ರೈತರಾದ ಶಿವರುದ್ರಯ್ಯ ಮಠ, ಸಣ್ಣ ಶರಣಪ್ಪ ಬಿರಾದಾರ ಅವರ ಅನಿಸಿಕೆ.</p>.<p>ಕಳೆದ ವರ್ಷ ಕೇಂದ್ರ ಸರ್ಕಾರ ₹ 10 ಸಾವಿರ ದರ ನೀಡಿ ವಿದೇಶದ ತೊಗರಿ ಖರೀದಿ ಮಾಡಿದೆ. ಆದರೆ, ಅದಕ್ಕಿಂತಲೂ ಉತ್ಕೃಷ್ಟವಾದ ರೈತರ ತೊಗರಿಗೆ ಕೇವಲ ₹ 6000 ದರ ನೀಡಿ ಖರೀದಿಸಿದೆ. ಸಾಕಷ್ಟು ಹೋರಾಟ ಮಾಡಿದ ಮೇಲೆ ಈ ವರ್ಷ ಕೇವಲ ₹ 300 ಹೆಚ್ಚಿಸಿದ್ದಾರೆ. ಮೇಲಾಗಿ, ರೈತರು ಬೆಳೆದ ಎಲ್ಲ ತೊಗರಿಯನ್ನೂ ಖರೀದಿಸುವುದಿಲ್ಲ. ಅದಕ್ಕೂ ಲಿಮಿಟ್ ಮಾಡಿದ್ದು ಖಂಡನಾರ್ಹ ಎನ್ನುತ್ತಾರೆ ಅವರು.</p>.<p><strong>ಕನಿಷ್ಠ ₹ 8 ಸಾವಿರ ನೀಡಿ</strong></p>.<p>ಒಂದು ಎಕರೆ ತೊಗರಿ ಬೆಳೆಯಲು ₹ 22 ಸಾವಿರ ಖರ್ಚಾಗುತ್ತದೆ. ಸಾಧಾರಣವಾಗಿ ಪ್ರತಿ ಎಕರೆಗೆ ಮೂರು ಕ್ವಿಂಟಲ್ ಬೆಲೆಯುತ್ತೇವೆ. ಸದ್ಯ ಸರ್ಕಾರ ₹ 6300 ದರ ನೀಡಿದೆ. ಪ್ರತಿ ಎಕರೆಗೆ ₹ 18,900 ಮಾತ್ರ ಗಳಿಕೆಯಾಯಿತು. ಅಂದರೆ, ಖರ್ಚು ಮಾಡಿದ್ದಕ್ಕಿಂತ ಸರ್ಕಾರದ ಬೆಂಬಲ ಬೆಲೆಯೇ ಕಡಿಮೆ ಇದೆ. ಕನಿಷ್ಠ ₹ 8 ಸಾವಿರ ಘೋಷಿಸಿದರೆ ಮಾತ್ರ ರೈತರು ಬದುಕಲು ಸಾಧ್ಯ.</p>.<p>–ಮಲ್ಲಿನಾಥ ಕೋಳೂರ, ಮೇಳಕುಂದ–ಬಿ ಗ್ರಾಮದ ರೈತ</p>.<p><strong>ಮುಖ್ಯಮಂತ್ರಿಗೆ ಮನವರಿಕೆ ಮಾಡುವೆ</strong></p>.<p>ತೊಗರಿಗಿಂತ ಹೆಸರಿಗೆ ಹೆಚ್ಚು ಬೆಂಬಲ ಬೆಲೆ ಘೋಷಿಸಿದ್ದಾರೆ ಎಂಬುದು ಸಮಸ್ಯೆ ಅಲ್ಲ. ಆದರೆ, ತೊಗರಿಗೂ ಹೆಚ್ಚು ದರ ನೀಡಬೇಕಿತ್ತು ಎಂಬುದು ಸದ್ಯ. ಆದರೆ, ಮೊದಲಿನಿಂದಲೂ ಹೆಸರಿಗೇ ಹೆಚ್ಚಿನ ದರ ಸಿಗುತ್ತಿದೆ. ಸರ್ಕಾರಕ್ಕೆ ಇದರ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದಂತಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತೊಗರಿ ಬೆಳೆದ ರೈತರ ಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತೇನೆ.</p>.<p>–ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಗೌಡ,ಅಧ್ಯಕ್ಷ,ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>