<p><strong>ಕಲಬುರ್ಗಿ:</strong> ‘85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಗೆ ಆಯ್ಕೆಯಾಗುವ ಕವಿಗಳು ತಾವು ವಾಚಿಸುವ ಕವನದ ಪ್ರತಿಯನ್ನು ಮುಂಚಿತವಾಗಿಯೇ ಕನ್ನಡ ಸಾಹಿತ್ಯ ಪರಿಷತ್ಗೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>‘ಕವಿಗೋಷ್ಠಿಗೂ ಸೆನ್ಸಾರ್ ಬಂತೇ' ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.</p>.<p>ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ, ‘ನಿಯಮ ಬದಲಿಸಿಲ್ಲ, ಸೆನ್ಸಾರ್ ಇಲ್ಲವೇ ಇಲ್ಲ. ಇದೆಲ್ಲ ಸುಳ್ಳು. ಹಿಂದಿನ ಸಮ್ಮೇಳನಗಳ ಮಾದರಿಯಲ್ಲೇ ಈ ಬಾರಿಯ ಗೋಷ್ಠಿಗಳು ನಡೆಯಲಿವೆ. ಕಲಬುರ್ಗಿ ಸಮ್ಮೇಳನದಲ್ಲಿಯೂ ಮುಖ್ಯ ವೇದಿಕೆ ಮತ್ತು ಎರಡು ಸಮಾನಾಂತರ ವೇದಿಕೆಗಳಲ್ಲಿ ತಲಾ ಒಂದರಂತೆ ಮೂರು ಕವಿಗೋಷ್ಠಿ ಇರಲಿವೆ’ ಎಂದರು.</p>.<p><strong>ಪುಸ್ತಕ ಬಿಡುಗಡೆ:</strong> ‘ಹಿಂದಿನ ಸಮ್ಮೇಳನಗಳ ಸಂದರ್ಭದಲ್ಲಿ ಪ್ರಕಟಿಸಿರುವ ಪುಸ್ತಕಗಳ ಒಂದು ಪ್ರತಿಯೂ ಮಾರಾಟವಾಗಿಲ್ಲ. ಒಂದೇ ಜಿಲ್ಲೆಯವರ 85 ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಮನಸ್ಸು ನಮಗಿಲ್ಲ. ಆದಾಗ್ಯೂ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪುಸ್ತಕ ಪ್ರಕಟಿಸಿ ಎಂದು ಈ ವರೆಗೂ ಯಾವ ಲೇಖಕರೂ ಪರಿಷತ್ಗೆ ಕರಡು ಪ್ರತಿ ಕಳಿಸಿಲ್ಲ. ಕರಡು ಪ್ರತಿ ಕಳಿಸಿದ್ದರೆ ಮತ್ತು ಅವು ಮೌಲಿಕವಾಗಿದ್ದರೆ ಪರಿಗಣಿಸುತ್ತಿದ್ದೆವು. ಆದಾಗ್ಯೂ ಪರಿಷತ್ನಿಂದ ಮುದ್ರಿಸುವಹಾಗೂ ಮರು ಮುದ್ರಣಗೊಂಡ ಕೃತಿಗಳನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದು ಮನು ಬಳಿಗಾರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಗೆ ಆಯ್ಕೆಯಾಗುವ ಕವಿಗಳು ತಾವು ವಾಚಿಸುವ ಕವನದ ಪ್ರತಿಯನ್ನು ಮುಂಚಿತವಾಗಿಯೇ ಕನ್ನಡ ಸಾಹಿತ್ಯ ಪರಿಷತ್ಗೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>‘ಕವಿಗೋಷ್ಠಿಗೂ ಸೆನ್ಸಾರ್ ಬಂತೇ' ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.</p>.<p>ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ, ‘ನಿಯಮ ಬದಲಿಸಿಲ್ಲ, ಸೆನ್ಸಾರ್ ಇಲ್ಲವೇ ಇಲ್ಲ. ಇದೆಲ್ಲ ಸುಳ್ಳು. ಹಿಂದಿನ ಸಮ್ಮೇಳನಗಳ ಮಾದರಿಯಲ್ಲೇ ಈ ಬಾರಿಯ ಗೋಷ್ಠಿಗಳು ನಡೆಯಲಿವೆ. ಕಲಬುರ್ಗಿ ಸಮ್ಮೇಳನದಲ್ಲಿಯೂ ಮುಖ್ಯ ವೇದಿಕೆ ಮತ್ತು ಎರಡು ಸಮಾನಾಂತರ ವೇದಿಕೆಗಳಲ್ಲಿ ತಲಾ ಒಂದರಂತೆ ಮೂರು ಕವಿಗೋಷ್ಠಿ ಇರಲಿವೆ’ ಎಂದರು.</p>.<p><strong>ಪುಸ್ತಕ ಬಿಡುಗಡೆ:</strong> ‘ಹಿಂದಿನ ಸಮ್ಮೇಳನಗಳ ಸಂದರ್ಭದಲ್ಲಿ ಪ್ರಕಟಿಸಿರುವ ಪುಸ್ತಕಗಳ ಒಂದು ಪ್ರತಿಯೂ ಮಾರಾಟವಾಗಿಲ್ಲ. ಒಂದೇ ಜಿಲ್ಲೆಯವರ 85 ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಮನಸ್ಸು ನಮಗಿಲ್ಲ. ಆದಾಗ್ಯೂ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪುಸ್ತಕ ಪ್ರಕಟಿಸಿ ಎಂದು ಈ ವರೆಗೂ ಯಾವ ಲೇಖಕರೂ ಪರಿಷತ್ಗೆ ಕರಡು ಪ್ರತಿ ಕಳಿಸಿಲ್ಲ. ಕರಡು ಪ್ರತಿ ಕಳಿಸಿದ್ದರೆ ಮತ್ತು ಅವು ಮೌಲಿಕವಾಗಿದ್ದರೆ ಪರಿಗಣಿಸುತ್ತಿದ್ದೆವು. ಆದಾಗ್ಯೂ ಪರಿಷತ್ನಿಂದ ಮುದ್ರಿಸುವಹಾಗೂ ಮರು ಮುದ್ರಣಗೊಂಡ ಕೃತಿಗಳನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದು ಮನು ಬಳಿಗಾರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>