ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ, ‘ನಿಯಮ ಬದಲಿಸಿಲ್ಲ, ಸೆನ್ಸಾರ್ ಇಲ್ಲವೇ ಇಲ್ಲ. ಇದೆಲ್ಲ ಸುಳ್ಳು. ಹಿಂದಿನ ಸಮ್ಮೇಳನಗಳ ಮಾದರಿಯಲ್ಲೇ ಈ ಬಾರಿಯ ಗೋಷ್ಠಿಗಳು ನಡೆಯಲಿವೆ. ಕಲಬುರ್ಗಿ ಸಮ್ಮೇಳನದಲ್ಲಿಯೂ ಮುಖ್ಯ ವೇದಿಕೆ ಮತ್ತು ಎರಡು ಸಮಾನಾಂತರ ವೇದಿಕೆಗಳಲ್ಲಿ ತಲಾ ಒಂದರಂತೆ ಮೂರು ಕವಿಗೋಷ್ಠಿ ಇರಲಿವೆ’ ಎಂದರು.