<p><strong>ಕಲಬುರ್ಗಿ</strong>: ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಇಂಧನ ಉಳಿತಾಯಕ್ಕೆನೀಡುವ ರಾಷ್ಟ್ರೀಯಪ್ರಶಸ್ತಿಯು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒಲಿದಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ಅವರು ಇತ್ತೀಚೆಗೆ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.</p>.<p>ಅಕ್ಟೋಬರ್–2017ರಿಂದ ಸೆಪ್ಟೆಂಬರ್–2018ರ ಅವಧಿಯ ಹೋಲಿಕೆಗೆ ಅಕ್ಟೋಬರ್–2018ರಿಂದ ಸೆಪ್ಟೆಂಬರ್–2019ರ ಅವಧಿಯಲ್ಲಿ ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು. ಈ ಅವಧಿಯಲ್ಲಿ 6.02 ಲಕ್ಷ ಲೀಟರ್ ಇಂಧನ ಕಡಿಮೆ ಬಳಸಿ ₹ 3.65 ಕೋಟಿ ಉಳಿತಾಯ ಮಾಡಲಾಗಿರುತ್ತದೆ. ಅಲ್ಲದೇ ರಾಜ್ಯ ಮಟ್ಟದಲ್ಲಿ ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ ಘಟಕಗಳಾದ ವಿಜಯಪುರ ಘಟಕ–2, ಬಸವನ ಬಾಗೇವಾಡಿ ಹಾಗೂ ಸಿಂದಗಿ ಘಟಕಗಳು ಪ್ರಶಸ್ತಿ ಪಡೆದವು.</p>.<p>ರಾಷ್ಟ್ರ ಮಟ್ಟದ ಪ್ರಶಸ್ತಿಯು ₹ 5 ಲಕ್ಷ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ಹೊಂದಿದೆ. ರಾಜ್ಯ ಮಟ್ಟದ ಸಾಧನೆಗೆ ಪ್ರತಿ ಘಟಕಕ್ಕೆ ₹ 50 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.</p>.<p>ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮುಖ್ಯ ಎಂಜಿನಿಯರ್ ಎಂ.ಸಿ.ನಂಜುಂಡಪ್ಪ ಹಾಗೂ ಬಸವನ ಬಾಗೇವಾಡಿಯ ಘಟಕ ವ್ಯವಸ್ಥಾಪಕ ವಿನಾಯಕಸ್ವಾಮಿ ಸಾಲಿಮಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿದ್ದರು.</p>.<p>ಅದೆ ದಿನ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಘಟಕ–2ರ ಘಟಕ ವ್ಯವಸ್ಥಾಪಕ ಆನಂದ ಬಿ ಹೂಗಾರ, ಸಿಂದಗಿ ಘಟಕ ವ್ಯವಸ್ಥಾಪಕ ಎ.ಎಚ್.ಮದಬಾವಿ ಹಾಗೂ ಬಸವನ ಬಾಗೇವಾಡಿ ಘಟಕದ ಪಾರುಪತ್ತೆಗಾರ ಹುಸೇನ ಸಾಬ್ ನದಾಫ ಪ್ರಶಸ್ತಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಇಂಧನ ಉಳಿತಾಯಕ್ಕೆನೀಡುವ ರಾಷ್ಟ್ರೀಯಪ್ರಶಸ್ತಿಯು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒಲಿದಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ಅವರು ಇತ್ತೀಚೆಗೆ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.</p>.<p>ಅಕ್ಟೋಬರ್–2017ರಿಂದ ಸೆಪ್ಟೆಂಬರ್–2018ರ ಅವಧಿಯ ಹೋಲಿಕೆಗೆ ಅಕ್ಟೋಬರ್–2018ರಿಂದ ಸೆಪ್ಟೆಂಬರ್–2019ರ ಅವಧಿಯಲ್ಲಿ ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು. ಈ ಅವಧಿಯಲ್ಲಿ 6.02 ಲಕ್ಷ ಲೀಟರ್ ಇಂಧನ ಕಡಿಮೆ ಬಳಸಿ ₹ 3.65 ಕೋಟಿ ಉಳಿತಾಯ ಮಾಡಲಾಗಿರುತ್ತದೆ. ಅಲ್ಲದೇ ರಾಜ್ಯ ಮಟ್ಟದಲ್ಲಿ ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ ಘಟಕಗಳಾದ ವಿಜಯಪುರ ಘಟಕ–2, ಬಸವನ ಬಾಗೇವಾಡಿ ಹಾಗೂ ಸಿಂದಗಿ ಘಟಕಗಳು ಪ್ರಶಸ್ತಿ ಪಡೆದವು.</p>.<p>ರಾಷ್ಟ್ರ ಮಟ್ಟದ ಪ್ರಶಸ್ತಿಯು ₹ 5 ಲಕ್ಷ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ಹೊಂದಿದೆ. ರಾಜ್ಯ ಮಟ್ಟದ ಸಾಧನೆಗೆ ಪ್ರತಿ ಘಟಕಕ್ಕೆ ₹ 50 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.</p>.<p>ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮುಖ್ಯ ಎಂಜಿನಿಯರ್ ಎಂ.ಸಿ.ನಂಜುಂಡಪ್ಪ ಹಾಗೂ ಬಸವನ ಬಾಗೇವಾಡಿಯ ಘಟಕ ವ್ಯವಸ್ಥಾಪಕ ವಿನಾಯಕಸ್ವಾಮಿ ಸಾಲಿಮಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿದ್ದರು.</p>.<p>ಅದೆ ದಿನ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಘಟಕ–2ರ ಘಟಕ ವ್ಯವಸ್ಥಾಪಕ ಆನಂದ ಬಿ ಹೂಗಾರ, ಸಿಂದಗಿ ಘಟಕ ವ್ಯವಸ್ಥಾಪಕ ಎ.ಎಚ್.ಮದಬಾವಿ ಹಾಗೂ ಬಸವನ ಬಾಗೇವಾಡಿ ಘಟಕದ ಪಾರುಪತ್ತೆಗಾರ ಹುಸೇನ ಸಾಬ್ ನದಾಫ ಪ್ರಶಸ್ತಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>