ಮುಂಜಾನೆ 11 ರಿಂದ ಸಂಜೆ4 ಗಂಟೆವರೆಗೆ ಹೊರಗೆ ಅಡ್ಡಾಡಬೇಡಿ. ಬಿಸಿಲಿನ ತೊಂದರೆಯಿಂದ ನಮ್ಮ ತಾಲ್ಲೂಕಿನಲ್ಲಿ ಆಸ್ಪತ್ರೆಗೆ ದಾಖಲಾಗಿಲ್ಲ. ಮುನ್ನೆಚ್ಚರಿಕೆಯಾಗಿ ಎಲ್ಲಾ ರೀತಿಯ ಔಷಧ ಸಂಗ್ರಹ ಮಾಡಿಕೊಳ್ಳಲಾಗಿದೆ. ಬಾಯಾರಿಕೆಯಾಗದರೆ ನೀರು ಕುಡಿಯಬೇಕು. ಏಳನೀರು ಕಲ್ಲಂಗಡಿ ಹೆಚ್ಚಾಗಿ ಸೇವನೆ ಮಾಡಬೇಕು. ಹಿರಿಯರು ಮಕ್ಕಳನ್ನು ಹೊರ ಕರೆದುಕೊಂಡು ಹೋಗಬೇಡಿ
ಡಾ.ಸಿದ್ದು ಪಾಟೀಲ ವೈದ್ಯಾಧಿಕಾರಿ ಯಡ್ರಾಮಿ
ತಾಪಮಾನದಿಂದ ಪ್ರಾಣಿ-ಪಕ್ಷಿಗಳನ್ನು ರಕ್ಷಿಸಲು ಜನರು ಮನೆ ಎದುರು ನೀರು ಇಟ್ಟು ದಾಹ ತಣಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಫೊಟೊಗಳಲ್ಲಿ ಮಾತ್ರ ನಾವು ಇವುಗಳನ್ನು ನೋಡಬೇಕಾಗುತ್ತದೆ