ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿ ನಗರವು ಗುಂಡಿಗಳ ತಾಣವಾಗಿದೆ. ನಗರದ ರಸ್ತೆ ಮೇಲಿನ ಗುಂಡಿಗಳು ಮೃತ್ಯುಕೂಪಗಳಂತೆ ಬಾಯಿ ತೆರೆದಿವೆ.
ಸತತ ಮಳೆ, ಅಸಮರ್ಪಕ ಚರಂಡಿ, ಅವೈಜ್ಞಾನಿಕ ಕಾಮಗಾರಿ, ಪಾಲಿಕೆಯ ಅಧಿಕಾರಿಗಳ ವೈಫಲ್ಯದಿಂದಾಗಿ ಗುಂಡಿಗಳಿಗೆ ಪರಿಹಾರ ಸಿಗುತ್ತಿಲ್ಲ. ವಾರ್ಷಿಕ ಸುಮಾರು ₹ 50 ಲಕ್ಷ ಸುರಿದರೂ ಗುಂಡಿಗಳಿಗೆ ಮುಕ್ತಿ ಸಿಗುತ್ತಿಲ್ಲ. ‘ಮಳೆಗೆ ಕೆಸರುಗದ್ದೆಯಂತೆ ಬದಲಾದ ರಸ್ತೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು. ಸ್ವಲ್ಪವೇ ಮೈಮರೆತರು ಅಪಾಯಕ್ಕೆ ತಲೆ ಕೊಡಬೇಕಾಗುತ್ತದೆ’ ಎಂದು ವಾಹನ ಸವಾರರು ಅಲವತ್ತುಕೊಂಡರು.
ಮಳೆಯಿಂದ ಹದಗೆಟ್ಟು ಗುಂಡಿ ಬಿದ್ದ ರಸ್ತೆಗಳು ‘ಪ್ರಜಾವಾಣಿ’ಯ ಕ್ಯಾಮೆರಾ ಕಣ್ಣಿಗೆ ಕಂಡ ಬಗೆ
ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.