<p><strong>ಕಲಬುರಗಿ:</strong> ಕೃಷಿ, ಹೈನುಗಾರಿಕೆ, ಶಿಕ್ಷಣ ಸಾಲವನ್ನು ತ್ವರಿತವಾಗಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಮುಖಂಡರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿನ ಎಸ್ಬಿಐನ ಎಜಿಎಂ ಶಾಖೆಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಬ್ಯಾಂಕ್ಗಳು ರೈತರಿಗೆ ಬೆಳೆ ಸಾಲ, ವ್ಯಾಪಾರಿಗಳಿಗೆ ಮುದ್ರಾ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಯಾವುದೇ ತಕರಾರು ಮಾಡದೆ ಮೇ 30ರ ಒಳಗಾಗಿ ನೀಡಬೇಕು. ಕೃಷಿಕರು ತಮ್ಮ ಪಹಣಿಗಳನ್ನು ಸಹಕಾರಿ ಬ್ಯಾಂಕ್ಗಳಲ್ಲಿ ಇರಿಸಿ ಸಾಲ ಪಡೆದಿದ್ದರೂ ಆ ಪಹಣಿಗಳ ಮೇಲೂ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.</p>.<p>ರೈತರ ಚಿನ್ನಾಭರಣವನ್ನು ಇರಿಸಿಕೊಂಡು ಸಾಲ ಕೊಡುವುದನ್ನು ಕೈಬಿಡಬೇಕು. ಜೂನ್ ತಿಂಗಳಿಂದ ಮುಂಗಾರು ಶುರುವಾಗಲಿದ್ದು, ಬಿತ್ತನೆ ಬೀಜ, ಗೊಬ್ಬರ ಖರೀದಿಗಾಗಿ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು ಎಂದು ಕೋರಿದರು.</p>.<p>ಪ್ರತಿಭಟನೆಯಲ್ಲಿ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ದೇವಿಂದ್ರಪ್ಪ ಪಾಟೀಲ, ಸಿದ್ದಪ್ಪ ಭೂತಾಳೆ, ನಾಗಯ್ಯ ಸ್ವಾಮಿ, ಜಾವೇದ್ ಹಸನ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಕೃಷಿ, ಹೈನುಗಾರಿಕೆ, ಶಿಕ್ಷಣ ಸಾಲವನ್ನು ತ್ವರಿತವಾಗಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಮುಖಂಡರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿನ ಎಸ್ಬಿಐನ ಎಜಿಎಂ ಶಾಖೆಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಬ್ಯಾಂಕ್ಗಳು ರೈತರಿಗೆ ಬೆಳೆ ಸಾಲ, ವ್ಯಾಪಾರಿಗಳಿಗೆ ಮುದ್ರಾ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಯಾವುದೇ ತಕರಾರು ಮಾಡದೆ ಮೇ 30ರ ಒಳಗಾಗಿ ನೀಡಬೇಕು. ಕೃಷಿಕರು ತಮ್ಮ ಪಹಣಿಗಳನ್ನು ಸಹಕಾರಿ ಬ್ಯಾಂಕ್ಗಳಲ್ಲಿ ಇರಿಸಿ ಸಾಲ ಪಡೆದಿದ್ದರೂ ಆ ಪಹಣಿಗಳ ಮೇಲೂ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.</p>.<p>ರೈತರ ಚಿನ್ನಾಭರಣವನ್ನು ಇರಿಸಿಕೊಂಡು ಸಾಲ ಕೊಡುವುದನ್ನು ಕೈಬಿಡಬೇಕು. ಜೂನ್ ತಿಂಗಳಿಂದ ಮುಂಗಾರು ಶುರುವಾಗಲಿದ್ದು, ಬಿತ್ತನೆ ಬೀಜ, ಗೊಬ್ಬರ ಖರೀದಿಗಾಗಿ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು ಎಂದು ಕೋರಿದರು.</p>.<p>ಪ್ರತಿಭಟನೆಯಲ್ಲಿ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ದೇವಿಂದ್ರಪ್ಪ ಪಾಟೀಲ, ಸಿದ್ದಪ್ಪ ಭೂತಾಳೆ, ನಾಗಯ್ಯ ಸ್ವಾಮಿ, ಜಾವೇದ್ ಹಸನ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>