ಸೇಡಂ ತಾಲ್ಲೂಕಿನ ಬಟಗೇರಾ (ಬಿ) ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ರಿಬ್ಬನಪಲ್ಲಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಜಗನ್ನಾಥ 2013ರ ಮೇ ತಿಂಗಳಲ್ಲಿ ನಾಡೇಪಲ್ಲಿ ತಾಂಡಾದ ನರಸ್ಯಾನಾಯಕ ರಾಠೋಡ ಹಾಗೂ ಅವರ ಕುಟುಂಬದವರ ಉದ್ಯೋಗ ಖಾತ್ರಿ ಕೂಲಿ ಹಣದ ಬಿಲ್ ಪಾಸ್ ಮಾಡಿ ಖಾತೆಗೆ ಹಣ ಹಾಕಿದ್ದರು. ಆದರೆ, ಈ ಮಾಹಿತಿಯನ್ನು ಬಚ್ಚಿಟ್ಟು ಬಿಲ್ ಪಾಸ್ ಮಾಡಬೇಕಾದರೆ ₹ 3 ಸಾವಿರ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನರಸ್ಯಾನಾಯಕ ನೀಡಿದ ದೂರಿನ ಮೇರೆಗೆ 2013ರ ಆಗಸ್ಟ್ 17ರಂದು ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿನಾಥ ಬಿ.ಪಿ. ಅದೇ ದಿನ ₹ 2500 ಲಂಚ ಪಡೆಯುವ ವೇಳೆ ದಾಳಿ ನಡೆಸಿ ಜಗನ್ನಾಥ ಅವರನ್ನು ಬಂಧಿಸಿದ್ದರು. ತದ ನಂತರ ಪೊಲೀಸ್ ಇನ್ಸ್ಪೆಕ್ಟರ್ ಎಚ್.ದೊಡ್ಡಣ್ಣ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.