<figcaption>""</figcaption>.<figcaption>""</figcaption>.<figcaption>""</figcaption>.<p>‘ಸಂಘದ ಶಿಸ್ತಾದ ವ್ಯವಸ್ಥೆ, ಅಚ್ಚುಕಟ್ಟುತನ, ಗೆಳೆಯರಲ್ಲಿ ಮೂಡಿದ್ದ ಸ್ನೇಹಸೌಹಾರ್ದಗಳನ್ನು ಕಂಡು ನನಗೆ ಅತ್ಯಾನಂದವಾಯಿತು’ ಎಂದು ಅ.ನ. ಕೃಷ್ಣರಾಯರು ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘವನ್ನು ಬಣ್ಣಿಸಿದ್ದರು. ‘ಸಂಘದ ಕೆಲಸ ಚೆನ್ನಾಗಿ ನಡೆಯುತ್ತಿದೆ. ಹೀಗೆಯೇ ಮುಂದೆ ಸಾಗಲಿ’ ಎಂದು ವಿ.ಕೃ. ಗೋಕಾಕರು ಹಾರೈಸಿದ್ದರು.</p>.<p>ಉರ್ದು ಮತ್ತು ಮರಾಠಿ ಭಾಷೆಯ ಅಬ್ಬರದ ಮಧ್ಯೆಯೂ ಕಲಬುರ್ಗಿ ಪರಿಸರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆ ‘ಕನ್ನಡ ಸಾಹಿತ್ಯ ಸಂಘ’ಕ್ಕೆ ಸಲ್ಲಬೇಕು ಎಂದು ಸಂಘದ ಚಟುವಟಿಕೆ ದೀರ್ಘಕಾಲದಿಂದ ಬಲ್ಲ ಎಲ್ಲರೂ ಹೇಳುವ ಮಾತು.</p>.<p>ಕಲಬುರ್ಗಿ ನಗರದ ಜಗತ್ ಸರ್ಕಲ್ ಬಳಿ ದರ್ಗಾ ರಸ್ತೆಯಲ್ಲಿರುವ ಈ ಸಂಘ, ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಭದ್ರ ನೆಲೆ ಒದಗಿಸಿಕೊಟ್ಟಿತ್ತು. ಈ ಚಟುವಟಿಕೆಗಳಿಗಾಗಿಯೇ ಸಂಘದ ಆವರಣದಲ್ಲಿ‘ಶ್ರೀರಂಗ ಮಂದಿರ’ ಬಯಲು ನಾಟ್ಯ ಮಂದಿರವೂ ತಲೆ ಎತ್ತಿತ್ತು.</p>.<p>ಬೀದರ್, ಅವಿಭಜಿತಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ನಿಜಾಮ ಆಡಳಿತದಲ್ಲಿ ಉರ್ದು ಭಾಷೆ ಉತ್ತುಂಗದಲ್ಲಿತ್ತು.ಕಲಬುರ್ಗಿಯು ಮಹಾರಾಷ್ಟ್ರದ ಗಡಿಯಲ್ಲೇ ಇರುವುದರಿಂದ ಇಲ್ಲಿ ಮರಾಠಿ ಭಾಷೆಯ ಪ್ರಭಾವವೂ ಹೆಚ್ಚಾಗಿತ್ತು. ಹೀಗಾಗಿ ಇಲ್ಲಿ ಕನ್ನಡ ನಲುಗಿತ್ತು.</p>.<p>ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಸೇರಿ ಈ ಭಾಗದ ಬಹಳಷ್ಟು ಮಹನೀಯರು ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿದ್ದರು.1928ರಲ್ಲಿ ಕಲಬುರ್ಗಿಯಲ್ಲಿ ಬಿ.ಎಂ. ಶ್ರೀಕಂಠಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ 14ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಭಾಗದಲ್ಲಿ ಕನ್ನಡ ಜಾಗೃತಿಗೆ ಭದ್ರ ಅಡಿಪಾಯ ಹಾಕಿತು.</p>.<figcaption>ಕಲಬುರ್ಗಿಯ ಜಗತ್ ವೃತ್ತದ ಬಳಿಯಿರುವಕನ್ನಡಸಾಹಿತ್ಯಸಂಘ (ಫೊಟೊ ಕೃಪೆ- ಪ್ರಶಾಂತ್ ಎಚ್. ಜಿ)</figcaption>.<p>ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದು ಮತ್ತು ಆ ಮೂಲಕ ಕನ್ನಡ ಭಾಷೆ ಉಳಿಸಿ–ಬೆಳೆಸುವ ಉದ್ದೇಶದಿಂದ ಹಲವುಮಹನಿಯರು ಸೇರಿಕೊಂಡು ಕಲಬುರ್ಗಿಯ ಜಗತ್ ಪ್ರದೇಶದಲ್ಲಿ 1940ರಲ್ಲಿ ಕಟ್ಟಡವೊಂದನ್ನು ಬಾಡಿಗೆ ಪಡೆದು ವಾಚನಾಲಯ ಆರಂಭಿಸಿದರು. ಎಲ್ಲ ಭಾಷೆಗಳ ದಿನಪತ್ರಿಕೆಗಳನ್ನೂ ಅಲ್ಲಿಗೆ ತರಿಸಿ ಜನರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಕೆಲಸಕ್ಕೆ ಮುನ್ನುಡಿ ಬರೆದರು. ಆ ನಂತರತವಗ ಭೀಮಸೇನರಾಯರ ನೇತೃತ್ವದಲ್ಲಿ ‘ವಿದ್ಯಾರ್ಥಿಗಳ ಅಭ್ಯಾಸ ಕೂಟ’ ಆರಂಭವಾಯಿತು.</p>.<p>ಕನ್ನಡ ಸಾಹಿತ್ಯ ಸಂಘಕ್ಕೆ ಅಧಿಕೃತ ಮುದ್ರೆ ದೊರೆತಿದ್ದು1941ರಲ್ಲಿ. ಈ ಸಂಘಕ್ಕೆ ಭದ್ರ ನೆಲೆ ಕಲ್ಪಿಸಲು ಬನ್ನಿಕೊಪ್ಪದ ಭೂಮರೆಡ್ಡಿ ಬಸಪ್ಪ ಅವರು ಒಂದು ಸಾವಿರ ರೂಪಾಯಿ, ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ದೊಡ್ಡಪ್ಪ ಅಪ್ಪ ಅವರು ₹500 ದೇಣಿಗೆ ನೀಡಿದರು. ಕಪಟ್ರಾಳ ಕೃಷ್ಣರಾಯರು, ತವಗ ಭೀಮಸೇನರಾಯರು, ಅಶ್ವತ್ಥರಾವ್ ವಕೀಲರು, ಎಸ್.ಹನುಮಂತರಾಯರು, ಮಲ್ಲಾಪುರ ಶ್ರೀನಿವಾಸರಾಯರು, ದತ್ತಾತ್ರೇಯರಾವ್ ಅವರಾಧಿ ಹಾಗೂ ಇನ್ನೂ ಹಲವರು ಸೇರಿ ಈ ಸಂಘದ ಚಟುವಟಿಕೆಗಳ ರೂಪುರೇಷೆ ಹೇಗಿರಬೇಕು ಎಂದು ನಿರ್ಧರಿಸಿದರು.ಸಂಘಕ್ಕೊಂದು ಸ್ವಂತ ನೆಲೆ ಕಲ್ಪಿಸುವ ಚಿಂತನೆ ಅವರದ್ದಾಗಿತ್ತು.</p>.<p>ಅಷ್ಟೊತ್ತಿಗಾಗಲೇ ಆಗಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಅಜೀಜ್ ಖಾನ್ ಮಾಸ್ತರ್ ಅವರು ತಮ್ಮ ಮನೆಯನ್ನು 11 ಸಾವಿರಕ್ಕೆ ಮಾರಾಟ ಮಾಡುವ ವಿಷಯ ತಿಳಿದು ಅದನ್ನು ಖರೀದಿಸಲು ಇವರೆಲ್ಲ ಮುಂದಾದರು. ಹನುಮಂತರಾವ ಕಕ್ಕೇರಿ ವಕೀಲರುನೀಡಿದ ₹6 ಸಾವಿರ ಕೈಗಡ ಸೇರಿ ಒಟ್ಟಾರೆ 11 ಸಾವಿರದಲ್ಲಿ ಜಗತ್ ಪ್ರದೇಶದಲ್ಲಿಯ ಈ ಕಟ್ಟಡ ಖರೀದಿಸಿದರು.ಆಗಿನ ಕನ್ನಡ ಅಭಿಮಾನಿ ನೌಕರರು ಒಂದು ತಿಂಗಳ ವೇತನವನ್ನೂ ನೀಡಿ ಸಂಘದ ಚಟುವಟಿಕೆಗಳಿಗೆ ನೀರೆರೆದು ಪೋಷಿಸಿದರು.</p>.<p>ಬೆಂಗಳೂರಿನ ಸಾಹಿತ್ಯ ಪರಿಷನ್ಮಂದಿರ, ಧಾರವಾಡದ ವಿದ್ಯಾವರ್ಧಕ ಸಂಘ, ಶಿವಮೊಗ್ಗದ ಸಾಹಿತ್ಯ ಸಂಘ ಹಾಗೂ ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘ ಇವು ಮಾತ್ರ 1941ರಲ್ಲಿ ಸ್ವಂತ ಕಟ್ಟಡ ಹೊಂದಿದ್ದ ಸಂಘಗಳಾಗಿದ್ದವು. ಇಲ್ಲಿಯ ಹಿರಿಯ ಸಾಹಿತಿಗಳು ಈಗಲೂ ಇದನ್ನು ಹೇಳಿಕೊಂಡು ಹೆಮ್ಮೆಪಡುತ್ತಾರೆ.</p>.<p>ಶ್ರೀಮಂತರಾಯ ಪಾಂಡುರಂಗರಾವ ದೇಶಮುಖ ಅವರು ಈ ಸಂಘದ ಪ್ರಥಮ ಅಧ್ಯಕ್ಷರಾದರು. ಆ ನಂತರ ಸಂಜೀವಕುಮಾರ ವಕೀಲರು, ಭೀಮಸೇನರಾವ ತವಗ ಅವರು ಅಧ್ಯಕ್ಷರಾದರು.</p>.<p>ನಾಡಹಬ್ಬ, ಸಾಹಿತ್ಯೋತ್ಸವ, ವ್ಯಾಖ್ಯಾನ, ನಾಟಕ, ಜಯಂತ್ಯುತ್ಸವ, ಪ್ರಮುಖ ಸಾಹಿತಿಗಳನ್ನು ಆಹ್ವಾನಿಸಿ ಉಪನ್ಯಾಸಗೋಷ್ಠಿ ಏರ್ಪಡಿಸುವುದು ಹೀಗೆ ಹಲವು ಚಟುವಟಿಕೆಗಳನ್ನು ನಡೆಸುತ್ತ ಈ ಸಂಘ ಸಕ್ರಿಯವಾಯಿತು. ದೊಡ್ಡ ಗ್ರಂಥ ಭಂಡಾರವನ್ನೂ ಈ ಸಂಘ ಹೊಂದಿದ್ದು ಈಗಲೂ ಗ್ರಂಥಾಲಯ, ವಾಚನಾಲಯಗಳು ಕಾರ್ಯನಿರ್ವಹಿಸುತ್ತಿವೆ.</p>.<p>ಪ್ರಸ್ತುತ ಈ ಸಂಘಕ್ಕೆ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅಧ್ಯಕ್ಷರಾಗಿದ್ದಾರೆ. ಕೈಲಾಸನಾಥ ದೀಕ್ಷಿತ (ಕಾರ್ಯದರ್ಶಿ), ಪ್ರಭಾಕರ ಸಾತಖೇಡ, ಹನಮಂತರಾಯ ಕಾನಿಹಾಳ, ಕಾಂತರಾಜ ತವಗ, ಶೋಭಾ ರಂಜೋಳಕರ (ಧರ್ಮದರ್ಶಿಗಳು), ಡಾ.ಮಲ್ಹಾರರಾವ್ ಮಲ್ಲೆ (ಸಹ ಸದಸ್ಯರು) ಅವರು ಸಂಘದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.</p>.<figcaption>ಪ್ರೊ.ವಸಂತ ಕುಷ್ಟಗಿ</figcaption>.<p class="Subhead"><strong>ಗ್ರಂಥಗಳ ಪ್ರಕಟ: </strong>ಕನ್ನಡ ಸಾಹಿತ್ಯ ಸಂಘವು ಕನ್ನಡ ಚಟುವಟಿಕೆಗಳ ಜೊತೆಗೆ ಗ್ರಂಥಗಳನ್ನೂ ಪ್ರಕಟಿಸಿದೆ. ಅವುಗಳಲ್ಲಿ ಪ್ರಮುಖವಾದ ಪ್ರಕಟಣೆಗಳ ಪಟ್ಟಿ ಇಲ್ಲಿದೆ.</p>.<p>1.ಲಕ್ಷ್ಮೀಶನ ಕನ್ನಡ ಜೈಮಿನಿಭಾರತಕ್ಕೆ ಮುನ್ನುಡಿ–ಡಾ.ದ.ರಾ.ಬೇಂದ್ರೆ</p>.<p>2.ಬೇಂದ್ರೆ ಹಾಗೂ ಕನ್ನಡ ಕಾವ್ಯ–ಪ್ರೊ.ಕೀರ್ತಿನಾಥ ಕುರ್ತಕೋಟಿ</p>.<p>3.ಕನ್ನಡ ಭಗವದ್ಗೀತೆ–ವೆಂಕಟರಾವ ನಾಯಕ</p>.<p>4.ಹಾಲು ಜೇನು–ಜಯತೀರ್ಥ ರಾಜಪುರೋಹಿತ</p>.<p>5.ಸಿಂಹನಾದ–ರಸಿಕ ಪುತ್ತಿಗೆ</p>.<p>6.ಕನಕದಾಸರ ಗೀತೆಗಳು–ಪ್ರೊ.ವಸಂತ ಕುಷ್ಟಗಿ</p>.<p>7.ಅಧ್ಯಯನದ ಹಾದಿಯಲ್ಲಿ–ಜಯತೀರ್ಥ ರಾಜಪುರೋಹಿತ</p>.<p>8.ಶ್ರೀರಾಮಲೀಲಾಮೃತ–ವೆಂಕಟರಾವ ನಾಯಕ</p>.<p>9. ‘ತವಗಶ್ರೀ’ ಸಂಭಾವನಾಗ್ರಂಥ– ಸಂಪಾದಕರು: ಜಯತೀರ್ಥ ರಾಜಪುರೋಹಿತ, ಪ್ರೊ.ವಸಂತ ಕುಷ್ಟಗಿ.</p>.<p><strong>(ಪೂರಕ ಮಾಹಿತಿ: ಕನ್ನಡ ಸಾಹಿತ್ಯ ಸಂಘ ಪ್ರಕಟಿಸಿರುವ ‘ತವಗಶ್ರೀ’ ಸಂಭಾವನಾಗ್ರಂಥ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<figcaption>""</figcaption>.<p>‘ಸಂಘದ ಶಿಸ್ತಾದ ವ್ಯವಸ್ಥೆ, ಅಚ್ಚುಕಟ್ಟುತನ, ಗೆಳೆಯರಲ್ಲಿ ಮೂಡಿದ್ದ ಸ್ನೇಹಸೌಹಾರ್ದಗಳನ್ನು ಕಂಡು ನನಗೆ ಅತ್ಯಾನಂದವಾಯಿತು’ ಎಂದು ಅ.ನ. ಕೃಷ್ಣರಾಯರು ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘವನ್ನು ಬಣ್ಣಿಸಿದ್ದರು. ‘ಸಂಘದ ಕೆಲಸ ಚೆನ್ನಾಗಿ ನಡೆಯುತ್ತಿದೆ. ಹೀಗೆಯೇ ಮುಂದೆ ಸಾಗಲಿ’ ಎಂದು ವಿ.ಕೃ. ಗೋಕಾಕರು ಹಾರೈಸಿದ್ದರು.</p>.<p>ಉರ್ದು ಮತ್ತು ಮರಾಠಿ ಭಾಷೆಯ ಅಬ್ಬರದ ಮಧ್ಯೆಯೂ ಕಲಬುರ್ಗಿ ಪರಿಸರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆ ‘ಕನ್ನಡ ಸಾಹಿತ್ಯ ಸಂಘ’ಕ್ಕೆ ಸಲ್ಲಬೇಕು ಎಂದು ಸಂಘದ ಚಟುವಟಿಕೆ ದೀರ್ಘಕಾಲದಿಂದ ಬಲ್ಲ ಎಲ್ಲರೂ ಹೇಳುವ ಮಾತು.</p>.<p>ಕಲಬುರ್ಗಿ ನಗರದ ಜಗತ್ ಸರ್ಕಲ್ ಬಳಿ ದರ್ಗಾ ರಸ್ತೆಯಲ್ಲಿರುವ ಈ ಸಂಘ, ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಭದ್ರ ನೆಲೆ ಒದಗಿಸಿಕೊಟ್ಟಿತ್ತು. ಈ ಚಟುವಟಿಕೆಗಳಿಗಾಗಿಯೇ ಸಂಘದ ಆವರಣದಲ್ಲಿ‘ಶ್ರೀರಂಗ ಮಂದಿರ’ ಬಯಲು ನಾಟ್ಯ ಮಂದಿರವೂ ತಲೆ ಎತ್ತಿತ್ತು.</p>.<p>ಬೀದರ್, ಅವಿಭಜಿತಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ನಿಜಾಮ ಆಡಳಿತದಲ್ಲಿ ಉರ್ದು ಭಾಷೆ ಉತ್ತುಂಗದಲ್ಲಿತ್ತು.ಕಲಬುರ್ಗಿಯು ಮಹಾರಾಷ್ಟ್ರದ ಗಡಿಯಲ್ಲೇ ಇರುವುದರಿಂದ ಇಲ್ಲಿ ಮರಾಠಿ ಭಾಷೆಯ ಪ್ರಭಾವವೂ ಹೆಚ್ಚಾಗಿತ್ತು. ಹೀಗಾಗಿ ಇಲ್ಲಿ ಕನ್ನಡ ನಲುಗಿತ್ತು.</p>.<p>ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಸೇರಿ ಈ ಭಾಗದ ಬಹಳಷ್ಟು ಮಹನೀಯರು ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿದ್ದರು.1928ರಲ್ಲಿ ಕಲಬುರ್ಗಿಯಲ್ಲಿ ಬಿ.ಎಂ. ಶ್ರೀಕಂಠಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ 14ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಭಾಗದಲ್ಲಿ ಕನ್ನಡ ಜಾಗೃತಿಗೆ ಭದ್ರ ಅಡಿಪಾಯ ಹಾಕಿತು.</p>.<figcaption>ಕಲಬುರ್ಗಿಯ ಜಗತ್ ವೃತ್ತದ ಬಳಿಯಿರುವಕನ್ನಡಸಾಹಿತ್ಯಸಂಘ (ಫೊಟೊ ಕೃಪೆ- ಪ್ರಶಾಂತ್ ಎಚ್. ಜಿ)</figcaption>.<p>ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದು ಮತ್ತು ಆ ಮೂಲಕ ಕನ್ನಡ ಭಾಷೆ ಉಳಿಸಿ–ಬೆಳೆಸುವ ಉದ್ದೇಶದಿಂದ ಹಲವುಮಹನಿಯರು ಸೇರಿಕೊಂಡು ಕಲಬುರ್ಗಿಯ ಜಗತ್ ಪ್ರದೇಶದಲ್ಲಿ 1940ರಲ್ಲಿ ಕಟ್ಟಡವೊಂದನ್ನು ಬಾಡಿಗೆ ಪಡೆದು ವಾಚನಾಲಯ ಆರಂಭಿಸಿದರು. ಎಲ್ಲ ಭಾಷೆಗಳ ದಿನಪತ್ರಿಕೆಗಳನ್ನೂ ಅಲ್ಲಿಗೆ ತರಿಸಿ ಜನರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಕೆಲಸಕ್ಕೆ ಮುನ್ನುಡಿ ಬರೆದರು. ಆ ನಂತರತವಗ ಭೀಮಸೇನರಾಯರ ನೇತೃತ್ವದಲ್ಲಿ ‘ವಿದ್ಯಾರ್ಥಿಗಳ ಅಭ್ಯಾಸ ಕೂಟ’ ಆರಂಭವಾಯಿತು.</p>.<p>ಕನ್ನಡ ಸಾಹಿತ್ಯ ಸಂಘಕ್ಕೆ ಅಧಿಕೃತ ಮುದ್ರೆ ದೊರೆತಿದ್ದು1941ರಲ್ಲಿ. ಈ ಸಂಘಕ್ಕೆ ಭದ್ರ ನೆಲೆ ಕಲ್ಪಿಸಲು ಬನ್ನಿಕೊಪ್ಪದ ಭೂಮರೆಡ್ಡಿ ಬಸಪ್ಪ ಅವರು ಒಂದು ಸಾವಿರ ರೂಪಾಯಿ, ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ದೊಡ್ಡಪ್ಪ ಅಪ್ಪ ಅವರು ₹500 ದೇಣಿಗೆ ನೀಡಿದರು. ಕಪಟ್ರಾಳ ಕೃಷ್ಣರಾಯರು, ತವಗ ಭೀಮಸೇನರಾಯರು, ಅಶ್ವತ್ಥರಾವ್ ವಕೀಲರು, ಎಸ್.ಹನುಮಂತರಾಯರು, ಮಲ್ಲಾಪುರ ಶ್ರೀನಿವಾಸರಾಯರು, ದತ್ತಾತ್ರೇಯರಾವ್ ಅವರಾಧಿ ಹಾಗೂ ಇನ್ನೂ ಹಲವರು ಸೇರಿ ಈ ಸಂಘದ ಚಟುವಟಿಕೆಗಳ ರೂಪುರೇಷೆ ಹೇಗಿರಬೇಕು ಎಂದು ನಿರ್ಧರಿಸಿದರು.ಸಂಘಕ್ಕೊಂದು ಸ್ವಂತ ನೆಲೆ ಕಲ್ಪಿಸುವ ಚಿಂತನೆ ಅವರದ್ದಾಗಿತ್ತು.</p>.<p>ಅಷ್ಟೊತ್ತಿಗಾಗಲೇ ಆಗಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಅಜೀಜ್ ಖಾನ್ ಮಾಸ್ತರ್ ಅವರು ತಮ್ಮ ಮನೆಯನ್ನು 11 ಸಾವಿರಕ್ಕೆ ಮಾರಾಟ ಮಾಡುವ ವಿಷಯ ತಿಳಿದು ಅದನ್ನು ಖರೀದಿಸಲು ಇವರೆಲ್ಲ ಮುಂದಾದರು. ಹನುಮಂತರಾವ ಕಕ್ಕೇರಿ ವಕೀಲರುನೀಡಿದ ₹6 ಸಾವಿರ ಕೈಗಡ ಸೇರಿ ಒಟ್ಟಾರೆ 11 ಸಾವಿರದಲ್ಲಿ ಜಗತ್ ಪ್ರದೇಶದಲ್ಲಿಯ ಈ ಕಟ್ಟಡ ಖರೀದಿಸಿದರು.ಆಗಿನ ಕನ್ನಡ ಅಭಿಮಾನಿ ನೌಕರರು ಒಂದು ತಿಂಗಳ ವೇತನವನ್ನೂ ನೀಡಿ ಸಂಘದ ಚಟುವಟಿಕೆಗಳಿಗೆ ನೀರೆರೆದು ಪೋಷಿಸಿದರು.</p>.<p>ಬೆಂಗಳೂರಿನ ಸಾಹಿತ್ಯ ಪರಿಷನ್ಮಂದಿರ, ಧಾರವಾಡದ ವಿದ್ಯಾವರ್ಧಕ ಸಂಘ, ಶಿವಮೊಗ್ಗದ ಸಾಹಿತ್ಯ ಸಂಘ ಹಾಗೂ ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘ ಇವು ಮಾತ್ರ 1941ರಲ್ಲಿ ಸ್ವಂತ ಕಟ್ಟಡ ಹೊಂದಿದ್ದ ಸಂಘಗಳಾಗಿದ್ದವು. ಇಲ್ಲಿಯ ಹಿರಿಯ ಸಾಹಿತಿಗಳು ಈಗಲೂ ಇದನ್ನು ಹೇಳಿಕೊಂಡು ಹೆಮ್ಮೆಪಡುತ್ತಾರೆ.</p>.<p>ಶ್ರೀಮಂತರಾಯ ಪಾಂಡುರಂಗರಾವ ದೇಶಮುಖ ಅವರು ಈ ಸಂಘದ ಪ್ರಥಮ ಅಧ್ಯಕ್ಷರಾದರು. ಆ ನಂತರ ಸಂಜೀವಕುಮಾರ ವಕೀಲರು, ಭೀಮಸೇನರಾವ ತವಗ ಅವರು ಅಧ್ಯಕ್ಷರಾದರು.</p>.<p>ನಾಡಹಬ್ಬ, ಸಾಹಿತ್ಯೋತ್ಸವ, ವ್ಯಾಖ್ಯಾನ, ನಾಟಕ, ಜಯಂತ್ಯುತ್ಸವ, ಪ್ರಮುಖ ಸಾಹಿತಿಗಳನ್ನು ಆಹ್ವಾನಿಸಿ ಉಪನ್ಯಾಸಗೋಷ್ಠಿ ಏರ್ಪಡಿಸುವುದು ಹೀಗೆ ಹಲವು ಚಟುವಟಿಕೆಗಳನ್ನು ನಡೆಸುತ್ತ ಈ ಸಂಘ ಸಕ್ರಿಯವಾಯಿತು. ದೊಡ್ಡ ಗ್ರಂಥ ಭಂಡಾರವನ್ನೂ ಈ ಸಂಘ ಹೊಂದಿದ್ದು ಈಗಲೂ ಗ್ರಂಥಾಲಯ, ವಾಚನಾಲಯಗಳು ಕಾರ್ಯನಿರ್ವಹಿಸುತ್ತಿವೆ.</p>.<p>ಪ್ರಸ್ತುತ ಈ ಸಂಘಕ್ಕೆ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅಧ್ಯಕ್ಷರಾಗಿದ್ದಾರೆ. ಕೈಲಾಸನಾಥ ದೀಕ್ಷಿತ (ಕಾರ್ಯದರ್ಶಿ), ಪ್ರಭಾಕರ ಸಾತಖೇಡ, ಹನಮಂತರಾಯ ಕಾನಿಹಾಳ, ಕಾಂತರಾಜ ತವಗ, ಶೋಭಾ ರಂಜೋಳಕರ (ಧರ್ಮದರ್ಶಿಗಳು), ಡಾ.ಮಲ್ಹಾರರಾವ್ ಮಲ್ಲೆ (ಸಹ ಸದಸ್ಯರು) ಅವರು ಸಂಘದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.</p>.<figcaption>ಪ್ರೊ.ವಸಂತ ಕುಷ್ಟಗಿ</figcaption>.<p class="Subhead"><strong>ಗ್ರಂಥಗಳ ಪ್ರಕಟ: </strong>ಕನ್ನಡ ಸಾಹಿತ್ಯ ಸಂಘವು ಕನ್ನಡ ಚಟುವಟಿಕೆಗಳ ಜೊತೆಗೆ ಗ್ರಂಥಗಳನ್ನೂ ಪ್ರಕಟಿಸಿದೆ. ಅವುಗಳಲ್ಲಿ ಪ್ರಮುಖವಾದ ಪ್ರಕಟಣೆಗಳ ಪಟ್ಟಿ ಇಲ್ಲಿದೆ.</p>.<p>1.ಲಕ್ಷ್ಮೀಶನ ಕನ್ನಡ ಜೈಮಿನಿಭಾರತಕ್ಕೆ ಮುನ್ನುಡಿ–ಡಾ.ದ.ರಾ.ಬೇಂದ್ರೆ</p>.<p>2.ಬೇಂದ್ರೆ ಹಾಗೂ ಕನ್ನಡ ಕಾವ್ಯ–ಪ್ರೊ.ಕೀರ್ತಿನಾಥ ಕುರ್ತಕೋಟಿ</p>.<p>3.ಕನ್ನಡ ಭಗವದ್ಗೀತೆ–ವೆಂಕಟರಾವ ನಾಯಕ</p>.<p>4.ಹಾಲು ಜೇನು–ಜಯತೀರ್ಥ ರಾಜಪುರೋಹಿತ</p>.<p>5.ಸಿಂಹನಾದ–ರಸಿಕ ಪುತ್ತಿಗೆ</p>.<p>6.ಕನಕದಾಸರ ಗೀತೆಗಳು–ಪ್ರೊ.ವಸಂತ ಕುಷ್ಟಗಿ</p>.<p>7.ಅಧ್ಯಯನದ ಹಾದಿಯಲ್ಲಿ–ಜಯತೀರ್ಥ ರಾಜಪುರೋಹಿತ</p>.<p>8.ಶ್ರೀರಾಮಲೀಲಾಮೃತ–ವೆಂಕಟರಾವ ನಾಯಕ</p>.<p>9. ‘ತವಗಶ್ರೀ’ ಸಂಭಾವನಾಗ್ರಂಥ– ಸಂಪಾದಕರು: ಜಯತೀರ್ಥ ರಾಜಪುರೋಹಿತ, ಪ್ರೊ.ವಸಂತ ಕುಷ್ಟಗಿ.</p>.<p><strong>(ಪೂರಕ ಮಾಹಿತಿ: ಕನ್ನಡ ಸಾಹಿತ್ಯ ಸಂಘ ಪ್ರಕಟಿಸಿರುವ ‘ತವಗಶ್ರೀ’ ಸಂಭಾವನಾಗ್ರಂಥ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>