ಕಚೇರಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಹಿಳೆ ಸೇಡಂನಿಂದ ಆಟೊ ಮೂಲಕ ಕುರಕುಂಟಾ ಕ್ರಾಸ್ ಬಳಿ ಬಂದಿಳಿದಿದ್ದಾರೆ. ಸಂಜೆ ಬಸ್ ಇಲ್ಲದ ಕಾರಣ, ರಸ್ತೆಯಲ್ಲಿ ಆಕೆಯನ್ನು ಕಂಡ ನಾಗರಾಜ ಸಹಾಯ ಮಾಡುವ ನೆಪವೊಡ್ಡಿ, ಬೈಕ್ ಹತ್ತಿಸಿಕೊಂಡಿದ್ದಾನೆ. ಕೊಂಚ ದೂರ ಹೋದ ಬಳಿಕ ಸೇತುವೆ ಬಳಿ ಮಹಿಳೆಗೆ ಚಾಕು ತೋರಿಸಿ, ಹೆದರಿಸಿ ಸೇತುವೆ ಕೆಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿದ್ದರು.