<p><strong>ಕಲಬುರಗಿ:</strong> ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ‘ಪಥಸಂಚಲನ’– ಪ್ರತಿಭಟನೆಗೆ ಅನುಮತಿ ಕೋರಿರುವ ಸಂಘಟನೆಗಳೊಂದಿಗೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಮಂಗಳವಾರ ನಡೆಸಿದ ‘ಶಾಂತಿ ಸಭೆ’ಯಲ್ಲಿ ಒಮ್ಮತದ ತೀರ್ಮಾನ ಮೂಡಲಿಲ್ಲ. </p><p>ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.45ಕ್ಕೆ ಆರಂಭವಾದ ಸಭೆ ಒಂದೂವರೆ ಗಂಟೆ ನಡೆಯಿತು. ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ ಸೇರಿ ಉಳಿದ ಸಂಘಟನೆಗಳ ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡರು ಎಂದು ಮೂಲಗಳು ಹೇಳಿವೆ.</p><p>ಒಮ್ಮತದ ನಿರ್ಧಾರವಿಲ್ಲದೇ ಗೊಂದಲದಲ್ಲೇ ಸಭೆ ಮುಗಿಯಿತು. ಒಂದು ಹಂತದಲ್ಲಿ, ‘ಪರ್ಯಾಯ ದಿನ, ಇಲ್ಲವೇ ಅದೇ ದಿನ ವಿಭಿನ್ನ ಸಮಯಕ್ಕೆ ಪಥಸಂಚಲನ ನಡೆಸಲು ಸಾಧ್ಯವೇ’ ಎಂದು ಜಿಲ್ಲಾಧಿಕಾರಿ ಅವರು ಸಂಘಟನೆಗಳ ಪ್ರತಿನಿಧಿಗಳನ್ನು ಪ್ರಶ್ನಿಸಿದರು.</p><p>‘ಆರ್ಎಸ್ಎಸ್ನವರು ಲಾಠಿ ಬಿಟ್ಟು, ರಾಷ್ಟ್ರಧ್ವಜ, ಸಂವಿಧಾನ ಹಿಡಿದು ಸಾಗಿದರೆ, ಪರ್ಯಾಯ ದಿನ, ಬದಲಿ ಸಮಯದ ಬಗ್ಗೆ ಆಲೋಚಿಸುತ್ತೇವೆ’ ಎಂದು ಕೆಲ ಸಂಘಟನೆಗಳ ಪ್ರತಿನಿಧಿಗಳು ಹೇಳಿದರು. ‘ಆರ್ಎಸ್ಎಸ್ ಪಥಸಂಚಲನದ ದಿನವೇ ತಮಗೂ ಸಮಯ ಕೊಡಬೇಕು’ ಇತರೆ ಸಂಘಟನೆಗಳು ಆಗ್ರಹಿಸಿದವು.</p><p>‘ಲಾಠಿ ಬಿಟ್ಟು, ರಾಷ್ಟ್ರಧ್ವಜವಾಗಲಿ, ಸಂವಿಧಾನವಾಗಲಿ ಹಿಡಿದು ಪಥಸಂಚಲನ ನಡೆಸುವ ಬಗ್ಗೆ ಆರ್ಎಸ್ಎಸ್ ತನ್ನ ನಿಲುವು ಸ್ಪಷ್ಟಪಡಿಸಲಿಲ್ಲ’ ಎಂದು ಮೂಲಗಳು ತಿಳಿಸಿವೆ.</p><p>‘ಪ್ರತಿ ಸಂಘಟನೆಯ ಪ್ರತಿನಿಧಿಗಳಿಗೆ ಮಾತನಾಡಲು 5 ನಿಮಿಷ ಸಮಯ ನೀಡಲಾಗಿತ್ತು.ಕೆಲವರು ಲಿಖಿತವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಜಿಲ್ಲಾಡಳಿತ ಇದೆಲ್ಲವನ್ನೂ ದಾಖಲಿಸಿಕೊಂಡಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.</p>.<h2>ಬಿಗುವಿನ ಸ್ಥಿತಿ, ಧಿಕ್ಕಾರದ ಘೋಷಣೆ</h2><p>‘ಆರ್ಎಸ್ಎಸ್ನವರು ಲಾಠಿ ಬಿಟ್ಟು, ತ್ರಿವರ್ಣ ಧ್ವಜ, ಸಂವಿಧಾನ ಪ್ರತಿ ಹಿಡಿದು ಪಥಸಂಚಲನ ನಡೆಸಿದರೆ ಸಭೆಯ ದಿನಾಂಕ, ಸಮಯ ಬದಲಿಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು’ ಎಂದು ಕೆಲವು ಸಂಘಟನೆಗಳ ಮುಖಂಡರು ಹೇಳಿದರು.</p><p>ಆರ್ಎಸ್ಎಸ್ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ, ‘ಪ್ರತಿಭಟನೆ–ಪಥಸಂಚಲನ ನಡೆಸಲು ಬಾಬಾಸಾಹೇಬರು ಬರೆದ ಸಂವಿಧಾನದಲ್ಲೇ ಅವಕಾಶವಿದೆ. ಲಾಠಿ ಬಿಟ್ಟುಬನ್ನಿ ಎನ್ನಲು ನೀವ್ಯಾರು’ ಎಂದು ಪ್ರಶ್ನಿಸಿದರು. </p><p>ಇದಕ್ಕೆ ವಿವಿಧ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಈ ಹಂತದಲ್ಲಿ ವಾಗ್ವಾದ ನಡೆದು ಸಭೆಯೇ ಬರಖಾಸ್ತುಗೊಂಡಿತು ಎಂದು ಮುಖಂಡರು ತಿಳಿಸಿದ್ದಾರೆ.</p><p>ಸಭೆಯ ಬಳಿಕ ಹೊರ ಬಂದ ದಲಿತ ಸಂಘಟನೆಗಳ ಮುಖಂಡರು ಅಂಬಾರಾಯ ಅಷ್ಟಗಿ ಹಾಗೂ ಆರ್ಎಸ್ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<h2>ಹೈಕೋರ್ಟ್ಗೆ ವರದಿ</h2><p>ಶಾಂತಿ ಸಭೆಯಲ್ಲಿ ಒಮ್ಮತ ಮೂಡದ ಬೆನ್ನಲ್ಲೇ ಈಗ ಎಲ್ಲರ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ. ಕೋರ್ಟ್ ಏನು ನಿರ್ಧಾರ ಪ್ರಕಟಿಸಲಿದೆ ಎಂಬ ಕುತೂಹಲ ಗರಿಗೆದರಿದೆ.</p><p>‘ಈ ಕುರಿತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.30ರ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದ್ದು, ಶಾಂತಿ ಸಭೆ ಕುರಿತ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಲಿದೆ.</p>.<div><blockquote>ನಾವು ಶಾಂತಿಯುತವಾಗಿ ನಿಲುವು ವ್ಯಕ್ತಪಡಿಸಿದೆವು. ಬೇರೆಯವರು ಕ್ರಾಂತಿಯ ಮಾತನಾಡಿದ್ದಾರೆ. ಇವರೆಲ್ಲರೂ ಸಚಿವ ಪ್ರಿಯಾಂಕ್ ಕಡೆಯ ಜನರು. </blockquote><span class="attribution">-ಅಂಬಾರಾಯ ಅಷ್ಟಗಿ, ಆರ್ಎಸ್ಎಸ್ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ</span></div>.<div><blockquote>ಆರ್ಎಸ್ಎಸ್ ಕಾರ್ಯಕರ್ತರು ಚಿತ್ತಾಪುರದಲ್ಲಿ ಏನು ಹಿಡಿದು, ಯಾವ ದಿನ ಪಥಸಂಚಲನ ನಡೆಸುತ್ತಾರೆಯೋ ಅದಕ್ಕೆ ತಕ್ಕ ಉತ್ತರ ನೀಡಲು ನಾವೂ ಅದೇ ದಿನ ಸನ್ನದ್ಧರಾಗಿರುತ್ತೇವೆ </blockquote><span class="attribution">-ರಾಜೇಂದ್ರ ಕಪನೂರು, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ</span></div>.<div><blockquote>ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದ ತೀರ್ಪಿಗೆ ಅನುಗುಣವಾಗಿ ನಡೆಯುತ್ತೇವೆ </blockquote><span class="attribution">-ಅಶೋಕ ಪಾಟೀಲ, ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ‘ಪಥಸಂಚಲನ’– ಪ್ರತಿಭಟನೆಗೆ ಅನುಮತಿ ಕೋರಿರುವ ಸಂಘಟನೆಗಳೊಂದಿಗೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಮಂಗಳವಾರ ನಡೆಸಿದ ‘ಶಾಂತಿ ಸಭೆ’ಯಲ್ಲಿ ಒಮ್ಮತದ ತೀರ್ಮಾನ ಮೂಡಲಿಲ್ಲ. </p><p>ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.45ಕ್ಕೆ ಆರಂಭವಾದ ಸಭೆ ಒಂದೂವರೆ ಗಂಟೆ ನಡೆಯಿತು. ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ ಸೇರಿ ಉಳಿದ ಸಂಘಟನೆಗಳ ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡರು ಎಂದು ಮೂಲಗಳು ಹೇಳಿವೆ.</p><p>ಒಮ್ಮತದ ನಿರ್ಧಾರವಿಲ್ಲದೇ ಗೊಂದಲದಲ್ಲೇ ಸಭೆ ಮುಗಿಯಿತು. ಒಂದು ಹಂತದಲ್ಲಿ, ‘ಪರ್ಯಾಯ ದಿನ, ಇಲ್ಲವೇ ಅದೇ ದಿನ ವಿಭಿನ್ನ ಸಮಯಕ್ಕೆ ಪಥಸಂಚಲನ ನಡೆಸಲು ಸಾಧ್ಯವೇ’ ಎಂದು ಜಿಲ್ಲಾಧಿಕಾರಿ ಅವರು ಸಂಘಟನೆಗಳ ಪ್ರತಿನಿಧಿಗಳನ್ನು ಪ್ರಶ್ನಿಸಿದರು.</p><p>‘ಆರ್ಎಸ್ಎಸ್ನವರು ಲಾಠಿ ಬಿಟ್ಟು, ರಾಷ್ಟ್ರಧ್ವಜ, ಸಂವಿಧಾನ ಹಿಡಿದು ಸಾಗಿದರೆ, ಪರ್ಯಾಯ ದಿನ, ಬದಲಿ ಸಮಯದ ಬಗ್ಗೆ ಆಲೋಚಿಸುತ್ತೇವೆ’ ಎಂದು ಕೆಲ ಸಂಘಟನೆಗಳ ಪ್ರತಿನಿಧಿಗಳು ಹೇಳಿದರು. ‘ಆರ್ಎಸ್ಎಸ್ ಪಥಸಂಚಲನದ ದಿನವೇ ತಮಗೂ ಸಮಯ ಕೊಡಬೇಕು’ ಇತರೆ ಸಂಘಟನೆಗಳು ಆಗ್ರಹಿಸಿದವು.</p><p>‘ಲಾಠಿ ಬಿಟ್ಟು, ರಾಷ್ಟ್ರಧ್ವಜವಾಗಲಿ, ಸಂವಿಧಾನವಾಗಲಿ ಹಿಡಿದು ಪಥಸಂಚಲನ ನಡೆಸುವ ಬಗ್ಗೆ ಆರ್ಎಸ್ಎಸ್ ತನ್ನ ನಿಲುವು ಸ್ಪಷ್ಟಪಡಿಸಲಿಲ್ಲ’ ಎಂದು ಮೂಲಗಳು ತಿಳಿಸಿವೆ.</p><p>‘ಪ್ರತಿ ಸಂಘಟನೆಯ ಪ್ರತಿನಿಧಿಗಳಿಗೆ ಮಾತನಾಡಲು 5 ನಿಮಿಷ ಸಮಯ ನೀಡಲಾಗಿತ್ತು.ಕೆಲವರು ಲಿಖಿತವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಜಿಲ್ಲಾಡಳಿತ ಇದೆಲ್ಲವನ್ನೂ ದಾಖಲಿಸಿಕೊಂಡಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.</p>.<h2>ಬಿಗುವಿನ ಸ್ಥಿತಿ, ಧಿಕ್ಕಾರದ ಘೋಷಣೆ</h2><p>‘ಆರ್ಎಸ್ಎಸ್ನವರು ಲಾಠಿ ಬಿಟ್ಟು, ತ್ರಿವರ್ಣ ಧ್ವಜ, ಸಂವಿಧಾನ ಪ್ರತಿ ಹಿಡಿದು ಪಥಸಂಚಲನ ನಡೆಸಿದರೆ ಸಭೆಯ ದಿನಾಂಕ, ಸಮಯ ಬದಲಿಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು’ ಎಂದು ಕೆಲವು ಸಂಘಟನೆಗಳ ಮುಖಂಡರು ಹೇಳಿದರು.</p><p>ಆರ್ಎಸ್ಎಸ್ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ, ‘ಪ್ರತಿಭಟನೆ–ಪಥಸಂಚಲನ ನಡೆಸಲು ಬಾಬಾಸಾಹೇಬರು ಬರೆದ ಸಂವಿಧಾನದಲ್ಲೇ ಅವಕಾಶವಿದೆ. ಲಾಠಿ ಬಿಟ್ಟುಬನ್ನಿ ಎನ್ನಲು ನೀವ್ಯಾರು’ ಎಂದು ಪ್ರಶ್ನಿಸಿದರು. </p><p>ಇದಕ್ಕೆ ವಿವಿಧ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಈ ಹಂತದಲ್ಲಿ ವಾಗ್ವಾದ ನಡೆದು ಸಭೆಯೇ ಬರಖಾಸ್ತುಗೊಂಡಿತು ಎಂದು ಮುಖಂಡರು ತಿಳಿಸಿದ್ದಾರೆ.</p><p>ಸಭೆಯ ಬಳಿಕ ಹೊರ ಬಂದ ದಲಿತ ಸಂಘಟನೆಗಳ ಮುಖಂಡರು ಅಂಬಾರಾಯ ಅಷ್ಟಗಿ ಹಾಗೂ ಆರ್ಎಸ್ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<h2>ಹೈಕೋರ್ಟ್ಗೆ ವರದಿ</h2><p>ಶಾಂತಿ ಸಭೆಯಲ್ಲಿ ಒಮ್ಮತ ಮೂಡದ ಬೆನ್ನಲ್ಲೇ ಈಗ ಎಲ್ಲರ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ. ಕೋರ್ಟ್ ಏನು ನಿರ್ಧಾರ ಪ್ರಕಟಿಸಲಿದೆ ಎಂಬ ಕುತೂಹಲ ಗರಿಗೆದರಿದೆ.</p><p>‘ಈ ಕುರಿತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.30ರ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದ್ದು, ಶಾಂತಿ ಸಭೆ ಕುರಿತ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಲಿದೆ.</p>.<div><blockquote>ನಾವು ಶಾಂತಿಯುತವಾಗಿ ನಿಲುವು ವ್ಯಕ್ತಪಡಿಸಿದೆವು. ಬೇರೆಯವರು ಕ್ರಾಂತಿಯ ಮಾತನಾಡಿದ್ದಾರೆ. ಇವರೆಲ್ಲರೂ ಸಚಿವ ಪ್ರಿಯಾಂಕ್ ಕಡೆಯ ಜನರು. </blockquote><span class="attribution">-ಅಂಬಾರಾಯ ಅಷ್ಟಗಿ, ಆರ್ಎಸ್ಎಸ್ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ</span></div>.<div><blockquote>ಆರ್ಎಸ್ಎಸ್ ಕಾರ್ಯಕರ್ತರು ಚಿತ್ತಾಪುರದಲ್ಲಿ ಏನು ಹಿಡಿದು, ಯಾವ ದಿನ ಪಥಸಂಚಲನ ನಡೆಸುತ್ತಾರೆಯೋ ಅದಕ್ಕೆ ತಕ್ಕ ಉತ್ತರ ನೀಡಲು ನಾವೂ ಅದೇ ದಿನ ಸನ್ನದ್ಧರಾಗಿರುತ್ತೇವೆ </blockquote><span class="attribution">-ರಾಜೇಂದ್ರ ಕಪನೂರು, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ</span></div>.<div><blockquote>ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದ ತೀರ್ಪಿಗೆ ಅನುಗುಣವಾಗಿ ನಡೆಯುತ್ತೇವೆ </blockquote><span class="attribution">-ಅಶೋಕ ಪಾಟೀಲ, ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>