ರೈತರನ್ನು ವಿದ್ಯುತ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾವಲಂಬಿಯಾಗಿಸುವ ಅನ್ನದಾತ ಊರ್ಜಾದಾತ ಯೋಜನೆಯ ಅನುಷ್ಠಾನದ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ. ತನ್ನ ಬೆಳೆಗಳಿಗೆ ನೀರುಣಿಸಲು ಅಗತ್ಯವಾದಷ್ಟು ವಿದ್ಯುತ್ ಬಳಸಿಕೊಂಡು ಮಿಕ್ಕದ್ದನ್ನು ಸರ್ಕಾರಕ್ಕೇ ಮಾರಾಟ ಮಾಡಬಹುದಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಹೊಸ ದಿಕ್ಕು ಸಿಕ್ಕಂತಾಗುತ್ತದೆ.