ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಸಿ.ಕೆ. ಮಾತನಾಡಿ, ‘ಹೆಣ್ಣುಮಕ್ಕಳು ನಿಜವಾದ ಅರ್ಥದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾವಿತ್ರಿಬಾಯಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಜೀವನ ಮುಡಿಪಾಗಿಟ್ಟಿದ್ದರು. ಅವರು ಹುಟ್ಟಿದ್ದೇ ಹೋರಾಟಕ್ಕೆ ಎಂದು ಭಾವಿಸಿದ್ದರು. ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟಲು ಮುಂದೆ ಬಂದ ಸಾವಿತ್ರಿಬಾಯಿ ಪುಲೆ ಅವರು ಇಂದು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಬಾಲ್ಯವಿವಾಹ, ವಿಧವೆಯರ ಮರುವಿವಾಹ, ಅನಾಥಶ್ರಮ, ಅಂತರ್ಜಾತಿ ವಿವಾಹಕ್ಕೆ ಬೆಂಬಲ ಹೀಗೆ ಹಲವಾರು ಸಮಸ್ಯೆಗಳು ವಿರುದ್ದ ಹೋರಾಟ ನಡೆಸಿದರು. ಇಂದಿನ ಸರ್ಕಾರ ಭಂಡತನ ತೋರುತ್ತಿರುವುದರಿಂದ ಹೆಣ್ಣು ಮಕ್ಕಳ ಸಮಸ್ಯೆಗಳ ದೇಶದಾದ್ಯಂತ ತಾಂಡವವಾಡುತ್ತಿವೆ. ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟ ನಮ್ಮ ಮುಂದೆ ಇದೆ. ಇವತ್ತು ದೇಶದ ಎಲ್ಲಾ ಕಾರ್ಮಿಕ ವರ್ಗದ ಜನರು ವಿದ್ಯಾರ್ಥಿ, ಮಹಿಳೆಯರು, ಯುವಕರು ಹೋರಾಟ ಬೆಳೆಸಬೇಕಾಗಿದೆ. ಬಂಡವಾಳಶಾಹಿ ಸಮಾಜದ ವಿರುದ್ಧ ದೇಶದ ಎಲ್ಲಾ ಹೆಣ್ಣುಮಕ್ಕಳು ಹೋರಾಟಕ್ಕೆ ಇಳಿಯಬೇಕಾಗಿದೆ ಎಂದರು,.