ಭದ್ರತೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ, ‘10 ಕೆಎಸ್ಆರ್ಪಿ ತುಕಡಿಗಳು, 15 ಡಿಎಆರ್ ತುಕಡಿಗಳು ದಿನದ 24 ಗಂಟೆಯೂ ಕಾವಲು ಕಾಯಲಿವೆ. ನಗರದ 1,000 ಪೊಲೀಸರಿಗೆ ಈಗಾಗಲೇ ತರಬೇತಿ ತಾಲೀಮು ನೀಡಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ 3,000 ಪೊಲೀಸರನ್ನು ಕರೆಸಲಾಗುತ್ತದೆ’ ಎಂದರು.