ಈ ಸಂದರ್ಭದಲ್ಲಿ ಮಹಾದಾಸೋಹ ಮನೆಯ ಸದಸ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕೆಲವು ಮುಖಂಡರು ಹಾಗೂ ಭಕ್ತರ ಸಮ್ಮುಖದರಲ್ಲಿ ಉಚ್ಚಾಯಿ ಅಂಗವಾಗಿ ಸಣ್ಣ ರಥವನ್ನು ಎಳೆಯಲಾಯಿತು. ಶರಣಬಸವೇಶ್ವರರಿಗೆ ಜೈಕಾರ ಹಾಕುತ್ತಲೇ ಭಕ್ತರು ದೇವಸ್ಥಾನದ ಮುಂದಿನ ದ್ವಾರದವರೆಗೆ ರಥ ಎಳೆದು, ನಂತರ ಮರಳಿ ಸ್ವಸ್ಥಾನಕ್ಕೆ ತಲುಪಿಸಿದರು.