‘12ನೇ ಶತಮಾನದ ಶರಣರ ಜೀವನ ವಚನ ಚಳವಳಿ ಶರಣರ ಸಾಧನೆ ವಚನ ಕೃತಿಗಳು ಮತ್ತು ವಿಚಾರಗಳ ಕುರಿತು ಕಿರು ಸಂಶೋಧನೆ ಆಗಬೇಕು. ಶರಣರ ಬಗ್ಗೆ ಮತ್ತಷ್ಟು ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶರಣರು ದಾರ್ಶನಿಕರ ಸತ್ಯ ಸಂದೇಶಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹಿಸಬೇಕು’ ಎಂದು ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಆಶಿಸಿದರು.