ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಮತ್ತು ಕೋಲಿ ಸಮಾಜ ಎಸ್.ಟಿ ಕುರಿತು ಮಾತನಾಡಲು ಜಾಧವಗೆ ನೈತಿಕತೆಯೇ ಇಲ್ಲ. ಜಾಧವ ಅವರು ಜನರ ಯಾವ ಕೆಲಸ, ಕ್ಷೇತ್ರದ ಅಭಿವೃದ್ಧಿಯನ್ನೂ ಮಾಡಿಲ್ಲ. ಚುನಾವಣೆಯಲ್ಲಿ ಜಾಧವ ಅವರನ್ನು ಮನೆಗೆ ಕಳಿಸಲು ಜನರೇ ಸಿದ್ಧರಾಗಿದ್ದಾರೆ. ಸೋಲಿನ ಸುಳಿವು ಲಭಿಸಿದ್ದರಿಂದಲೇ ಖರ್ಗೆ ವಿರುದ್ಧ ಸುಳ್ಳು ಹೇಳಲು ಶುರು ಮಾಡಿದ್ದಾರೆ’ ಎಂದು ದೂರಿದರು.