<p><strong>ಚಿಂಚೋಳಿ:</strong> ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಜಗದೀಶ ಮರಪಳ್ಳಿ ಅವರು 951 ವಚನಗಳನ್ನು ಕಂಠಪಾಠದ ಮೂಲಕ ಹೇಳಿ ದ್ವಿತೀಯ ಬಹುಮಾನ ಪಡೆದಿದ್ದಾರೆ.</p>.<p>ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಸನ ಮತ್ತು ತೃತೀಯ ಬಹುಮಾನ ಬೆಳಗಾವಿ ಜಿಲ್ಲೆಗೆ ಲಭಿಸಿವೆ. ಗುತ್ತಿಗೆದಾರರಾಗಿದ್ದ ಜಗದೀಶ ಮರಪಳ್ಳಿ ಅವರು ಮೂಲವೃತ್ತಿ ಕೈಬಿಟ್ಟಿದ್ದು ಸದ್ಯ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.</p>.<p>2023-24ನೇ ಸಾಲಿನಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ 698 ವಚನಗಳನ್ನು ಕಂಠಪಾಠದ ಮೂಲಕ ಹೇಳಿ ದ್ವಿತೀಯ ಬಹುಮಾನ ಪಡೆದಿದ್ದರು. ಈಗ ಮತ್ತೊಮ್ಮೆ ಅವರು ದ್ವೀತೀಯ ಸ್ಥಾನ ಪಡೆದಿದ್ದು, ಕಲ್ಯಾಣ ಕರ್ನಾಟಕದ ಮೊದಲಿಗರಾಗಿದ್ದಾರೆ. </p><p>ಇವರ ಸಾಧನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಚಿಮ್ಮನಚೋಡ ಪರುಷಕಟ್ಟೆ ಸಮಿತಿ ಸಲಹೆಗಾರ ಡಾ.ಚಂದ್ರಪ್ರಕಾಶ ರಗಟೆ ಶ್ಲಾಘಿಸಿದ್ದಾರೆ.</p><p>ಈ ಬಗ್ಗೆ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ಅಧ್ಯಕ್ಷ ಆನಂದ ಬೆಡಸೂರು, ಖಜಾಂಚಿ ಶಿವಮೂರ್ತಿ ಜಾಡರ, ಕ್ರಿಯಾಮೂರ್ತಿ ವೀರಸಂಗಯ್ಯ ಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ , ಚಂದ್ರಯ್ಯ ಮದರಗಿಮಠ ,ವಿಶ್ವನಾಥ ಬುರುಕಪಳ್ಳಿ, ಸಂಗಮೇಶ ರಗಟೆ,ಶಾಂತಪ್ಪ ದುಬಲಗುಂಡಿ, ವಿಜಯಕುಮಾರ ಶಂಭುಲಿಂಗಪ್ಪ ಬೆಡಸೂರು,ಶರಣಕುಮಾರ ನೇತಿ, ಗುರುಶಾಂತ ಹುಂಡೇಕಾರ,ಮಲ್ಲಿಕಾರ್ಜುನ ಸಜ್ಜನ ಶಾಂತಕುಮಾರ ಸೇತಾಳಗೇರಾ ಸೇರಿದಂತೆ ಗ್ರಾಮದ ಬಸವ ಭಕ್ತರು ಶುಭಕೋರಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಜಗದೀಶ ಮರಪಳ್ಳಿ ಅವರು 951 ವಚನಗಳನ್ನು ಕಂಠಪಾಠದ ಮೂಲಕ ಹೇಳಿ ದ್ವಿತೀಯ ಬಹುಮಾನ ಪಡೆದಿದ್ದಾರೆ.</p>.<p>ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಸನ ಮತ್ತು ತೃತೀಯ ಬಹುಮಾನ ಬೆಳಗಾವಿ ಜಿಲ್ಲೆಗೆ ಲಭಿಸಿವೆ. ಗುತ್ತಿಗೆದಾರರಾಗಿದ್ದ ಜಗದೀಶ ಮರಪಳ್ಳಿ ಅವರು ಮೂಲವೃತ್ತಿ ಕೈಬಿಟ್ಟಿದ್ದು ಸದ್ಯ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.</p>.<p>2023-24ನೇ ಸಾಲಿನಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ 698 ವಚನಗಳನ್ನು ಕಂಠಪಾಠದ ಮೂಲಕ ಹೇಳಿ ದ್ವಿತೀಯ ಬಹುಮಾನ ಪಡೆದಿದ್ದರು. ಈಗ ಮತ್ತೊಮ್ಮೆ ಅವರು ದ್ವೀತೀಯ ಸ್ಥಾನ ಪಡೆದಿದ್ದು, ಕಲ್ಯಾಣ ಕರ್ನಾಟಕದ ಮೊದಲಿಗರಾಗಿದ್ದಾರೆ. </p><p>ಇವರ ಸಾಧನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಚಿಮ್ಮನಚೋಡ ಪರುಷಕಟ್ಟೆ ಸಮಿತಿ ಸಲಹೆಗಾರ ಡಾ.ಚಂದ್ರಪ್ರಕಾಶ ರಗಟೆ ಶ್ಲಾಘಿಸಿದ್ದಾರೆ.</p><p>ಈ ಬಗ್ಗೆ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ಅಧ್ಯಕ್ಷ ಆನಂದ ಬೆಡಸೂರು, ಖಜಾಂಚಿ ಶಿವಮೂರ್ತಿ ಜಾಡರ, ಕ್ರಿಯಾಮೂರ್ತಿ ವೀರಸಂಗಯ್ಯ ಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ , ಚಂದ್ರಯ್ಯ ಮದರಗಿಮಠ ,ವಿಶ್ವನಾಥ ಬುರುಕಪಳ್ಳಿ, ಸಂಗಮೇಶ ರಗಟೆ,ಶಾಂತಪ್ಪ ದುಬಲಗುಂಡಿ, ವಿಜಯಕುಮಾರ ಶಂಭುಲಿಂಗಪ್ಪ ಬೆಡಸೂರು,ಶರಣಕುಮಾರ ನೇತಿ, ಗುರುಶಾಂತ ಹುಂಡೇಕಾರ,ಮಲ್ಲಿಕಾರ್ಜುನ ಸಜ್ಜನ ಶಾಂತಕುಮಾರ ಸೇತಾಳಗೇರಾ ಸೇರಿದಂತೆ ಗ್ರಾಮದ ಬಸವ ಭಕ್ತರು ಶುಭಕೋರಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>