<p><strong>ಕಲಬುರಗಿ:</strong> ‘ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಅತಿ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಿಸಬಹುದು ಎಂಬುದನ್ನು ಸಾಧಿಸಿ ತೋರಿಸಬೇಕು’ ಎಂದುಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹೇಳಿದರು.</p>.<p>ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ನಗರದಲ್ಲಿ ಶನಿವಾರ ನಡೆದ ‘ಕಾಂಕ್ರೀಟ್ ಮಿಶ್ರಣದ ವಿನ್ಯಾಸ’ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ದೇಶದ ಶೇ 40ರಷ್ಟು ಜನರು ಮಾತ್ರ ಸ್ವಂತ ಸೂರು ಹೊಂದಿದ್ದಾರೆ. ಶೇ 20ರಷ್ಟು ಜನ ರಸ್ತೆಯ ಮೇಲೆ ಜೀವನನಡೆಸುತ್ತಿದ್ದಾರೆ. ಹಾಗಾಗಿ, ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಅತಿ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವ ದಿಸೆಯಲ್ಲಿ ಆಸಕ್ತಿ ತೋರಬೇಕು’ ಎಂದರು.</p>.<p>‘ಸಂಶೋಧನೆಯಲ್ಲಿ ಹೊಸ ತಂತ್ರಜ್ಞಾನದ ಜತೆಗೆನಾವೀನ್ಯತೆ, ಸಾಮರ್ಥ್ಯ ಮತ್ತು ಗುಣಮಟ್ಟದೊಂದಿಗೆ ಕಟ್ಟಡ ನಿರ್ಮಿಸಬೇಕು. ಈ ಮೂಲಕ ಬಡವರಿಗೆ ಸೂರು ಕಟ್ಟಿಸಿಕೊಳ್ಳಲು ನೆರವಾಗಬೇಕು’ ಎಂದರು.</p>.<p>‘ಕಟ್ಟಡ ನಿರ್ಮಾಣದಲ್ಲಿ ಕಾಂಕ್ರೇಟ್ ಮಿಶ್ರಣ ಬಹು ಮುಖ್ಯವಾಗಿದೆ. ಐಎಸ್10262:2019 ಅನ್ವಯ ಹೊಸ ವಿನ್ಯಾಸದೊಂದಿಗೆ ಮಿಶ್ರಣ ಮಾಡಲು ಕಲಿಯುವಂತೆ’ ಸೂಚಿಸಿದರು.</p>.<p>ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಸ್.ಎಸ್. ಅವಂತಿ ಮಾತನಾಡಿ, ‘ತಪ್ಪು ಅಭ್ಯಾಸಗಳಿಂದ ಹೊರಬಂದು, ನೀರು ಮತ್ತು ಸಿಮೆಂಟ್ನ ಅನುಪಾತ ಅರಿತುಕೊಳ್ಳಬೇಕು. ಇದನ್ನು ಕಟ್ಟಡ ಕಾರ್ಮಿಕರಿಗೂಮನದಟ್ಟು ಮಾಡಬೇಕು. ಇಲ್ಲವಾದರೆ ನೂರು ವರ್ಷ ಬಾಳುವ ಕಟ್ಟಡ 50 ವರ್ಷದಲ್ಲಿ ಶಿಥಿಲಗೊಳ್ಳುತ್ತದೆ’ ಎಂದು ಅವರು ತಿಳಿಸಿದರು.</p>.<p>ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ.ಡಿ. ಮೈತ್ರಿ, ‘ದೇಶದಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಆರಂಭವಾಗಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಪ್ರಥಮ ಸಿವಿಲ್ ಎಂಜಿನಿಯರ್ ಆಗಿ ತೇರ್ಗಡೆಯಾದರು’ ಎಂದರು.</p>.<p>ಸಂಪನ್ಮೂಲ ವ್ಯಕ್ತಿಯಾಗಿ ಅಲ್ಟ್ರಾಟೆಕ್ ಸಿಮೆಂಟ್ನ ಎಂಜಿನಿಯರ್ ರಾಮ್ ಪಂತ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿ.ಎಸ್. ಪಾಟೀಲ, ರಾಜಶೇಖರ ಯರಗೋಳ, ಶೀತಲ್ ಬಿರಾದರ ಇದ್ದರು. ಪ್ರೊ. ಪೂನಮ್ ರಾಣಿ ನಿರೂಪಿಸಿ, ಸ್ವಾಗತಿಸಿದರು.</p>.<p>*<br />ಸಿವಿಲ್ ಎಂಜಿನಿಯರ್ಗಳು ನೀರು ಮತ್ತು ಸಿಮೆಂಟ್ ಅನುಪಾತ ಅರಿತುಕೊಂಡು ಅದನ್ನು ಕಟ್ಟಡ ಕಾರ್ಮಿಕರಿಗೂ ಮನದಟ್ಟು ಮಾಡಿಕೊಟ್ಟರೆ ಕಟ್ಟಡದ ಬಾಳಿಕೆಯು ದೀರ್ಘವಾಗುತ್ತದೆ.<br /><em><strong>-ಎಸ್.ಎಸ್. ಅವಂತಿ,ಶರಣಬಸವ ವಿವಿ ಸಿವಿಲ್ ಎಂಜಿನಿಯರಿಂಗ್ ವಿಭಾಗ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಅತಿ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಿಸಬಹುದು ಎಂಬುದನ್ನು ಸಾಧಿಸಿ ತೋರಿಸಬೇಕು’ ಎಂದುಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹೇಳಿದರು.</p>.<p>ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ನಗರದಲ್ಲಿ ಶನಿವಾರ ನಡೆದ ‘ಕಾಂಕ್ರೀಟ್ ಮಿಶ್ರಣದ ವಿನ್ಯಾಸ’ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ದೇಶದ ಶೇ 40ರಷ್ಟು ಜನರು ಮಾತ್ರ ಸ್ವಂತ ಸೂರು ಹೊಂದಿದ್ದಾರೆ. ಶೇ 20ರಷ್ಟು ಜನ ರಸ್ತೆಯ ಮೇಲೆ ಜೀವನನಡೆಸುತ್ತಿದ್ದಾರೆ. ಹಾಗಾಗಿ, ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಅತಿ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವ ದಿಸೆಯಲ್ಲಿ ಆಸಕ್ತಿ ತೋರಬೇಕು’ ಎಂದರು.</p>.<p>‘ಸಂಶೋಧನೆಯಲ್ಲಿ ಹೊಸ ತಂತ್ರಜ್ಞಾನದ ಜತೆಗೆನಾವೀನ್ಯತೆ, ಸಾಮರ್ಥ್ಯ ಮತ್ತು ಗುಣಮಟ್ಟದೊಂದಿಗೆ ಕಟ್ಟಡ ನಿರ್ಮಿಸಬೇಕು. ಈ ಮೂಲಕ ಬಡವರಿಗೆ ಸೂರು ಕಟ್ಟಿಸಿಕೊಳ್ಳಲು ನೆರವಾಗಬೇಕು’ ಎಂದರು.</p>.<p>‘ಕಟ್ಟಡ ನಿರ್ಮಾಣದಲ್ಲಿ ಕಾಂಕ್ರೇಟ್ ಮಿಶ್ರಣ ಬಹು ಮುಖ್ಯವಾಗಿದೆ. ಐಎಸ್10262:2019 ಅನ್ವಯ ಹೊಸ ವಿನ್ಯಾಸದೊಂದಿಗೆ ಮಿಶ್ರಣ ಮಾಡಲು ಕಲಿಯುವಂತೆ’ ಸೂಚಿಸಿದರು.</p>.<p>ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಸ್.ಎಸ್. ಅವಂತಿ ಮಾತನಾಡಿ, ‘ತಪ್ಪು ಅಭ್ಯಾಸಗಳಿಂದ ಹೊರಬಂದು, ನೀರು ಮತ್ತು ಸಿಮೆಂಟ್ನ ಅನುಪಾತ ಅರಿತುಕೊಳ್ಳಬೇಕು. ಇದನ್ನು ಕಟ್ಟಡ ಕಾರ್ಮಿಕರಿಗೂಮನದಟ್ಟು ಮಾಡಬೇಕು. ಇಲ್ಲವಾದರೆ ನೂರು ವರ್ಷ ಬಾಳುವ ಕಟ್ಟಡ 50 ವರ್ಷದಲ್ಲಿ ಶಿಥಿಲಗೊಳ್ಳುತ್ತದೆ’ ಎಂದು ಅವರು ತಿಳಿಸಿದರು.</p>.<p>ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ.ಡಿ. ಮೈತ್ರಿ, ‘ದೇಶದಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಆರಂಭವಾಗಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಪ್ರಥಮ ಸಿವಿಲ್ ಎಂಜಿನಿಯರ್ ಆಗಿ ತೇರ್ಗಡೆಯಾದರು’ ಎಂದರು.</p>.<p>ಸಂಪನ್ಮೂಲ ವ್ಯಕ್ತಿಯಾಗಿ ಅಲ್ಟ್ರಾಟೆಕ್ ಸಿಮೆಂಟ್ನ ಎಂಜಿನಿಯರ್ ರಾಮ್ ಪಂತ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿ.ಎಸ್. ಪಾಟೀಲ, ರಾಜಶೇಖರ ಯರಗೋಳ, ಶೀತಲ್ ಬಿರಾದರ ಇದ್ದರು. ಪ್ರೊ. ಪೂನಮ್ ರಾಣಿ ನಿರೂಪಿಸಿ, ಸ್ವಾಗತಿಸಿದರು.</p>.<p>*<br />ಸಿವಿಲ್ ಎಂಜಿನಿಯರ್ಗಳು ನೀರು ಮತ್ತು ಸಿಮೆಂಟ್ ಅನುಪಾತ ಅರಿತುಕೊಂಡು ಅದನ್ನು ಕಟ್ಟಡ ಕಾರ್ಮಿಕರಿಗೂ ಮನದಟ್ಟು ಮಾಡಿಕೊಟ್ಟರೆ ಕಟ್ಟಡದ ಬಾಳಿಕೆಯು ದೀರ್ಘವಾಗುತ್ತದೆ.<br /><em><strong>-ಎಸ್.ಎಸ್. ಅವಂತಿ,ಶರಣಬಸವ ವಿವಿ ಸಿವಿಲ್ ಎಂಜಿನಿಯರಿಂಗ್ ವಿಭಾಗ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>