‘ಪ್ರತಿ ಕೇಸ್ಗೂ ಪ್ರತ್ಯೇಕ ಸಮಾಲೋಚನೆ’
‘ಆತ್ಮಹತ್ಯೆಯಂತಹ ಕೆಟ್ಟ ಯೋಚನೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅವರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಸಮಾಲೋಚನೆ ಹಾಗೂ ಚಿಕಿತ್ಸೆ ಕೊಡಬೇಕಾಗುತ್ತದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಮೊಹಮದ್ ಇರ್ಫಾನ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಭಯ ಖಿನ್ನತೆ ಮದ್ಯ ವ್ಯಸನ ಮೊಬೈಲ್ ಗೀಳಿನಿಂದಲೂ ಆತ್ಮಹತ್ಯೆ ಯೋಚನೆ ಬರುತ್ತವೆ. ಕೆಲವರಿಗೆ ಅವಸರಿದಲ್ಲಿ ಬಂದರೇ ಮತ್ತೆ ಕೆಲವರಿಗೆ ದೀರ್ಘಕಾಲಿಕ ಯೋಚನೆಗಳಿಂದ ಬರುತ್ತವೆ. ಹೀಗಾಗಿ ಅವರ ಸಮಸ್ಯೆಯ ಮೂಲ ತಿಳಿದುಕೊಂಡು ಕೌನ್ಸಿಲಿಂಗ್ ಮಾಡಿ ಚಿಕಿತ್ಸೆ ಕೊಡಬೇಕಾಗುತ್ತದೆ. ಅವರಲ್ಲಿ ಬದುಕಿನ ಮೇಲೆ ವಿಶ್ವಾಸ ಮೂಡಿಸಬೇಕು’ ಎಂದರು.