ಈರುಳ್ಳಿಯನ್ನು ಕಿತ್ತು ಬೇರೆಡೆ ಸಾಗಿಸಬೇಕೆನ್ನುವಷ್ಟರಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಮಳೆ ಸುರಿಯಿತು. ಇದರಿಂದಾಗಿ ತೋಟದಲ್ಲಿ ಕೆಸರು ತುಂಬಿಕೊಂಡಿದ್ದರಿಂದ ಸಾಗಿಸಲು ಆಗಲಿಲ್ಲ. ಶೇ 75ರಷ್ಟು ಬೆಳೆ ಹಾಳಾಗಿದೆ. ಈ ಬಾರಿ 300 ಕ್ವಿಂಟಲ್ ನಷ್ಟು ಬಂಪರ್ ಬೆಳೆ ಬಂದಿತ್ತು. ಅದರಲ್ಲಿ 200 ಕ್ವಿಂಟಾಲ್ ನೀರು ಪಾಲಾಗಿದೆ. ಶೇ 2ರ ಬಡ್ಡಿ ದರದಲ್ಲಿ ₹ 1.5 ಲಕ್ಷ ಸಾಲ ಮಾಡಿ ಈರುಳ್ಳಿ ಬೆಳೆ ಹಾಕಿದ್ದೆ. ಈಗ ಖರ್ಚು ಮಾಡಿದ ಹಣವೂ ವಾಪಸ್ ಬರುವುದಿಲ್ಲ. ಒಟ್ಟಾರೆ ₹ 8 ಲಕ್ಷ ಸಾಲ ಮಾಡಿದ್ದು, ಏನು ಮಾಡಬೇಕೆಂದು ದಿಕ್ಕು ತೋಚದಾಗಿದೆ ಎಂದು ರೈತ ರಮೇಶ ಕಲಶೆಟ್ಟಿ 'ಪ್ರಜಾವಾಣಿ'ಗೆ ತಿಳಿಸಿದರು