<p><strong>ಕಲಬುರ್ಗಿ</strong>: ತೌತೆ ಚಂಡಮಾರುತದಿಂದಾಗಿ ಸೋಮವಾರ ಹಾಗೂ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ರೈತ ರಮೇಶ ಕಲಶೆಟ್ಟಿ ಅವರು ಬೆಳೆದ 200 ಕ್ವಿಂಟಾಲ್ ನಷ್ಟು ಈರುಳ್ಳಿ ನೀರುಪಾಲಾಗಿದೆ.</p>.<p>ಈರುಳ್ಳಿಯನ್ನು ಕಿತ್ತು ಬೇರೆಡೆ ಸಾಗಿಸಬೇಕೆನ್ನುವಷ್ಟರಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಮಳೆ ಸುರಿಯಿತು. ಇದರಿಂದಾಗಿ ತೋಟದಲ್ಲಿ ಕೆಸರು ತುಂಬಿಕೊಂಡಿದ್ದರಿಂದ ಸಾಗಿಸಲು ಆಗಲಿಲ್ಲ. ಶೇ 75ರಷ್ಟು ಬೆಳೆ ಹಾಳಾಗಿದೆ. ಈ ಬಾರಿ 300 ಕ್ವಿಂಟಲ್ ನಷ್ಟು ಬಂಪರ್ ಬೆಳೆ ಬಂದಿತ್ತು. ಅದರಲ್ಲಿ 200 ಕ್ವಿಂಟಾಲ್ ನೀರು ಪಾಲಾಗಿದೆ. ಶೇ 2ರ ಬಡ್ಡಿ ದರದಲ್ಲಿ ₹ 1.5 ಲಕ್ಷ ಸಾಲ ಮಾಡಿ ಈರುಳ್ಳಿ ಬೆಳೆ ಹಾಕಿದ್ದೆ. ಈಗ ಖರ್ಚು ಮಾಡಿದ ಹಣವೂ ವಾಪಸ್ ಬರುವುದಿಲ್ಲ. ಒಟ್ಟಾರೆ ₹ 8 ಲಕ್ಷ ಸಾಲ ಮಾಡಿದ್ದು, ಏನು ಮಾಡಬೇಕೆಂದು ದಿಕ್ಕು ತೋಚದಾಗಿದೆ ಎಂದು ರೈತ ರಮೇಶ ಕಲಶೆಟ್ಟಿ 'ಪ್ರಜಾವಾಣಿ'ಗೆ ತಿಳಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ತೌತೆ ಚಂಡಮಾರುತದಿಂದಾಗಿ ಸೋಮವಾರ ಹಾಗೂ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ರೈತ ರಮೇಶ ಕಲಶೆಟ್ಟಿ ಅವರು ಬೆಳೆದ 200 ಕ್ವಿಂಟಾಲ್ ನಷ್ಟು ಈರುಳ್ಳಿ ನೀರುಪಾಲಾಗಿದೆ.</p>.<p>ಈರುಳ್ಳಿಯನ್ನು ಕಿತ್ತು ಬೇರೆಡೆ ಸಾಗಿಸಬೇಕೆನ್ನುವಷ್ಟರಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಮಳೆ ಸುರಿಯಿತು. ಇದರಿಂದಾಗಿ ತೋಟದಲ್ಲಿ ಕೆಸರು ತುಂಬಿಕೊಂಡಿದ್ದರಿಂದ ಸಾಗಿಸಲು ಆಗಲಿಲ್ಲ. ಶೇ 75ರಷ್ಟು ಬೆಳೆ ಹಾಳಾಗಿದೆ. ಈ ಬಾರಿ 300 ಕ್ವಿಂಟಲ್ ನಷ್ಟು ಬಂಪರ್ ಬೆಳೆ ಬಂದಿತ್ತು. ಅದರಲ್ಲಿ 200 ಕ್ವಿಂಟಾಲ್ ನೀರು ಪಾಲಾಗಿದೆ. ಶೇ 2ರ ಬಡ್ಡಿ ದರದಲ್ಲಿ ₹ 1.5 ಲಕ್ಷ ಸಾಲ ಮಾಡಿ ಈರುಳ್ಳಿ ಬೆಳೆ ಹಾಕಿದ್ದೆ. ಈಗ ಖರ್ಚು ಮಾಡಿದ ಹಣವೂ ವಾಪಸ್ ಬರುವುದಿಲ್ಲ. ಒಟ್ಟಾರೆ ₹ 8 ಲಕ್ಷ ಸಾಲ ಮಾಡಿದ್ದು, ಏನು ಮಾಡಬೇಕೆಂದು ದಿಕ್ಕು ತೋಚದಾಗಿದೆ ಎಂದು ರೈತ ರಮೇಶ ಕಲಶೆಟ್ಟಿ 'ಪ್ರಜಾವಾಣಿ'ಗೆ ತಿಳಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>