ಜೇವರ್ಗಿ: ತಾಲ್ಲೂಕಿನ ಹಾಲಗಡ್ಲಾ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮೃತರನ್ನು ತಾಲ್ಲೂಕಿನ ಹರನೂರ ಗ್ರಾಮದ ನಿವಾಸಿಗಳಾದ ನಾಗಪ್ಪ ಸಕ್ರೆಪ್ಪ ಗಿರಣಿ (18), ಬಸಪ್ಪ ದೊಡ್ಡಸಕ್ರೆಪ್ಪ ಗಿರಣಿ (25) ಎಂದು ಗುರುತಿಸಲಾಗಿದೆ.
ಜೇವರ್ಗಿ ಠಾಣೆಯ ಎ.ಎಸ್.ಐ ಗುರುಲಿಂಗಯ್ಯ ಸ್ವಾಮಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಸದಸ್ಯರು ನೀಡಿದ ದೂರಿನ್ವಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.